tag:blogger.com,1999:blog-66736919301187224712024-03-20T05:39:07.992-07:00Pathrika PravaraThe otherside of JournalismAshwini M Sripadhttp://www.blogger.com/profile/01699731701824302054noreply@blogger.comBlogger54125tag:blogger.com,1999:blog-6673691930118722471.post-39063574111412846872024-03-12T11:01:00.000-07:002024-03-12T11:01:38.357-07:00ಜೀವನದಲ್ಲಿ ಒಮ್ಮೊಮ್ಮೆ mute ಆಗಬೇಕು<p> </p><p><br /></p><p>ಇತ್ತೀಚಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಬಜೆಟ್ ಭಾಷಣ ಮಾಡುವಾಗ, ಮೂರು ಕಾಲು ಗಂಟೆ ನಿಂತು ಭಾಷಣ ಮಾಡಿದರು. ಅವರ ವಯಸ್ಸು 75. ನೂರಾರು ಬಜೆಟ್ ಬಗ್ಗೆ ಟ್ವೀಟು ರಿಟ್ವೀಟ್ಗಳ ನಡುವೆ, ಸಿದ್ದರಾಮಯ್ಯ ಅವರ ಬಗ್ಗೆ ಟ್ವೀಟ್ ಮಾಡಿದ್ದೆ. 75 ವರ್ಷದ ಸಿದ್ದರಾಮಯ್ಯ ಅವರು, 3.15 ಗಂಟೆ ನಿಂತು, 175 ಪುಟಗಳ ಬಜೆಟ್ ಭಾಷಣ ಮಾಡಿದರು ಅಂತ. ಅದರ ಅರ್ಥ, ಬಜೆಟ್ ಚೆನ್ನಾಗಿತ್ತು ಎಂದಲ್ಲ. ಆ ವಯಸ್ಸಿನವರು ಮೂರು ಗಂಟೆಗೂ ಹೆಚ್ಚು ಗಂಟೆ ಕಾಲ ನಿಂತು ಮಾತನಾಡಿದರ ಬಗ್ಗೆ ಇತ್ತೇ ಹೊರತು, ಬೇರೆ ಏನು ಅಲ್ಲ.</p><p>ಆದರೆ ಒಂದು ಪಕ್ಷವನ್ನು ಬೆಂಬಲಿಸುವ, ಇನ್ನೊಬ್ಬ ಪಕ್ಷ ಬೆಂಬಲಿಸುವ ವರ್ಗದವರು, sold media ಅಂತ ಹೇಳಲು ಶುರು ಮಾಡಿದರು. ಸೋಶಿಯಲ್ ಮೀಡಿಯಾ ಭಾಷೆಯಲ್ಲಿ ಹೇಳುವುದಾದರೆ ಟ್ರೊಲ್ ಮಾಡಿದರು. ಕೆಲವರಂತೂ ಇವತ್ತಿನ ಬಿರಿಯಾನಿಗೆ ದುಡ್ಡು ಜಮಾ ಆಗಿರ್ಬೇಕು, oh ಆಂಟಿ ಅಂತನೋ, ಮಾರಿಕೊಂಡ ಮಾಧ್ಯಮವದವರು ಅಂತಾನೋ, upi ನಲ್ಲಿ ಹಣ ಬಂತಾ ಅಂತನೋ,.... ಹೇಳಿದ್ದೆ ಹೇಳಿದ್ದು... ನಿಮಗೆ 70 ಮೇಲ್ಪಟ್ಟ ಮೋದಿ ಅವರು ದಿನಕ್ಕೆ 20 ತಾಸು ಕೆಲಸ ಮಾಡೋದು ಕಾಣಿಸಲ್ವಾ ಅಂದವರು ಇದ್ದಾರೆ... </p><p><br /></p><p>ಇದು ಒಂದು ಪಕ್ಷಕ್ಕೆ ಮಾತ್ರ ಸ್ಥಿಮಿತವಲ್ಲ. ಇದೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರಿನ ಹೊರವರ್ತೂಲ ರಸ್ತೆಯ ಒಂದು ಸುತ್ತು ಹಾಕಿ ರಸ್ತೆಯ ಸ್ಥಿತಿ ಗತಿ ಬಗ್ಗೆ ರಿಪೋರ್ಟ್ ಮಾಡಿದ್ದೆ... ಇದು ಸುಮಾರು 60 ಕಿ ಮೀ ಇರಬಹುದು, ನಮಗೆ ನಾಲ್ಕು ಗಂಟೆ ತೆಗೆದುಕೊಂಡ ನೆನಪು. ಯಾಕೆ ಅದ್ರ್ ನಾನು ಮತ್ತು ಫೋಟೋಗ್ರಾಫರ್ ಮದ್ಯೆ ಮದ್ಯೆ ನಿಂತು ರಿಪೋರ್ಟ್ ಮಾಡಿಕೊಂಡು ಹೋಗಿದ್ದು. ಆಗ ನಾನು ಬಿಬಿಎಂಪಿ ಬೀಟ್ ಕವರ್ ಮಾಡ್ತಾ ಇದ್ದೆ, ಬಿಸಿಲ ಬೇಗೆ... Ring with million holes ಅಂತ headline ಕೊಟ್ಟು article ಬಂದಿತ್ತು . ಇದೆ ಟ್ವಿಟ್ಟರ್ ನಲ್ಲಿ ಇದನ್ನು ಪೋಸ್ಟ್ ಮಾಡಿದಾಗ, ಮಧ್ಯಪ್ರದೇಶಕ್ಕೆ ಬನ್ನಿ, ರಸ್ತೆ ಎಷ್ಟು ಕೆಟ್ಟದಾಗಿದೆ, ಯಾಕೆ ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧ ಬರೀತೀರಾ, ಗೋದಿ ಮೀಡಿಯಾ ಅಂತೆಲ್ಲ ಅಂದ್ರು. ದುಡ್ಡು ಬಂದಿರ್ಬೇಕು, ಅದಕ್ಕೆ ಮಾಧ್ಯಪ್ರದೇಶದ ಹಳ್ಳ ಕೊಳ್ಳ ರಸ್ತೆ ನುನುಪಾಗಿ ಕಾಣಿಸಿದೆ ಈ ಮಾದ್ಯಮದವರಿಗೆ ಅಂತೆಲ್ಲ ಹೇಳಿದ್ರು.</p><p><br /></p><p>ಇಂತಹ ನೂರಾರು ಇನ್ಸಿಡೆಂಟ್ ಇವೆ. ನನ್ನ ಟ್ವಿಟ್ಟರ್ ನಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ನಲ್ಲಿ ಇದ್ದರೂ, ಸಿದ್ದರಾಮಯ್ಯ ಅವರ, ಯಡಿಯೂರಪ್ಪ ಅವರ, ಮೋದಿ ಅವರ.. ಅಥವಾ ಇನ್ಯಾವುದೇ ಪಕ್ಷದ ಹಿರಿಯರು ಇದ್ದಲ್ಲಿ, ಅವರು ಅಂತ ಸೇರಿಸ್ತೇನೆ... Modi avaru, siddaramaiah avaru ಅಂತ... ಬರೀತೀನಿ... ಆಗ ಸಹ ಕೆಲವೊಮ್ಮೆ ಜನ, ದುಡ್ಡು ಕೊಡೊ ಪೊಲಿಟಿಷಿಯನ್ಸ್ ಗೆ ಪತ್ರಕರ್ತೆ ಕೊಡುವ ಮರ್ಯಾದೆ ನೋಡಿ ಅಂತಾರೆ... ಏನ್ ಮಾಡಣ 🙃</p><p>ಟ್ವಿಟ್ಟರ್ ನಲ್ಲಿ ತುಂಬಾ ಜನಕ್ಕೆ ನೋಡಿದೇನೇ... ಅವರಿಗೆ ದೇಶದ ಮೂಲೆ ಎಲ್ಲೇ ಏನೇ ಆದರೂ ಪತ್ರಕರ್ತರು ಬರೀಬೇಕು ಅಂತ ನಿರೀಕ್ಷಿಸುತ್ತಾರೆ. ಆದ್ರೆ ಯಾವ ಪತ್ರಕರ್ತರು ಯಾವುದನ್ನು ಬರೀಬಹುದು, ಅವರ ಸೀಮೆ ಎಲ್ಲಿವರೆಗೆ ಅಂತ ಅವರಿಗೆ ಹೇಳೋದು ಕಷ್ಟ. ಬಹುಶ ಅರ್ಥ ಆಗಲ್ಲ.</p><p>ಇಷ್ಟೇ ಅಲ್ಲ, ನಮ್ಮಲ್ಲಿ ಜಾತಿ ಆಧಾರದ ಮೇಲೆ, ಅವರ ಕೆಲ್ಸದ ಆಧಾರದ ಮೇಲೆ ಅಥವಾ ಇನ್ನೊಂದು, ಇಂತಹವರು ಈ ಪಕ್ಷಕ್ಕೆ ಒಲವು ಇರುವವರು ಅಂತ ಭಾವಿಸ್ತಾರೆ. ಟ್ವಿಟ್ಟರ್ ನಲ್ಲಿ ಹಲವು ಬಾರಿ, ನನ್ನ ಟ್ವೀಟ್ ಒಂದು ಪಕ್ಷಕ್ಕೆ ಸ್ಥಿಮಿತ ಅನ್ನಿಸಿದರೆ, ನೀವು ಬ್ರಾಹ್ಮಣರು, ಅದಕ್ಕೆ ಬಿಜೆಪಿ ಪರ ಅಂತಾರೆ. ಮಜಾ ಏನ್ ಅಂದ್ರೆ, ನಾನು ಮದುವೆ ಅಥವಾ ಇನ್ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋದ್ರೆ, ನೀವು ಬಿಡಿಪ ಮೀಡಿಯಾದವರು ಕಾಂಗ್ರೆಸ್ ಪರ ಅಂತಾರೆ. ನನ್ನ ವಿಷಯದಲ್ಲಿ ಎರಡು ಆಲೋಚನೆಗಳು ಸರಿಯಲ್ಲ.</p><p>ಅಂದ ಹಾಗೆ, ವಿಷಯ ಹೇಳೋದ್ನೇ ಮರೆತಿದ್ದೆ. ಟ್ರೊಲ್ ಮಾಡೋರನ್ನ ಏನ್ ಮಾಡ್ತೀನಿ ಅಂತ ಕೆಲವರು ಕೇಳ್ತಾರೆ, ಬ್ಲಾಕ್ ಮಾಡು ಅಂತ ಕೂಡ ಹೇಳ್ತಾರೆ. ಆದರೆ ನಾನು ಬ್ಲಾಕ್ ಮಾಡಲ್ಲ, MUTE ಮಾಡ್ತೇನೆ. India is a democratic country. Everyone can express their opinion, ಅದು ಹಾಗೆ ಇರಲು ಬೇಕು. ವಿವಿಧತೆಯಲ್ಲಿ ಸೊಗಸಿದೆ. ನಾನು ಬ್ಲಾಕ್ ಮಾಡೋದಿಲ್ಲ (ಇನ್ನ ಮುಂದೆ ಕೂಡ ಅನ್ಕೋತೀನಿ ), ಮನಸ್ಸಲ್ಲಿ ಕೆಲವೊಮ್ಮೆ ಬೇಡದ ಚಿಂತೆ ಇದ್ರೆ, mute ಮಾಡ್ಕೊಳ್ಳಿ ಸ್ವಲ್ಪ ಹೊತ್ತು. ಮುಂದಕ್ಕೆ ಹೋಗಬಹುದು ಆಮೇಲೆ... </p><p><br /></p><p><br /></p>Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-9343548911257057622024-02-12T18:12:00.000-08:002024-02-12T18:12:19.771-08:00ಮನಸು ಮತ್ತು ಮಿದುಳು <p> ಕಳೆದ ವಾರ ಸ್ಪೀಕರ್ U T ಖಾದರ್ ಅವರು ಆಫೀಸ್ ಗೆ ಬಂದಿದ್ರು. ಈ ಬಾರಿ ಸದನವನ್ನು ಬೆಳಿಗ್ಗೆ 9 ಕ್ಕೆ ಶುರು ಮಾಡ್ತೀವಿ ಅಂತ ಹೇಳಿದ್ರು. ನಾನು ಅಷ್ಟು ಬೇಗ ಶಾಸಕರು ಬರೋದಿಲ್ಲ ಅಂತ ಸಮಾಧಾನದಲ್ಲಿ ಇದ್ದೆ. ಆದರೆ ಈ ಬಾರಿ ಸದನವನ್ನು ಬೆಳಿಗ್ಗೆ 9.30 ಗೆ ಶುರು, ಅದು ಇವತ್ತಿಂದ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEitrVlp-yzQ0APrQRiRPlYVULIP_OJ-J31lhWHRLBc7WCCUOonesWSBY4Urz1zthGKNtzOXFaDvBQDk50dnKJP9LxsA_1MvjHi8crNq3c48SUTchu23UQIP0aa3Hl7OYw1CM39ZlcqRjKLiIYKyhxJ3OAG7q2vu-BPjejejdPajcyPkD1Fh2Tt5s6bWtK4/s1631/Screenshot_2024-02-13-06-40-08-20_6012fa4d4ddec268fc5c7112cbb265e7.jpg" imageanchor="1" style="margin-left: 1em; margin-right: 1em;"><img border="0" data-original-height="1631" data-original-width="1079" height="320" src="https://blogger.googleusercontent.com/img/b/R29vZ2xl/AVvXsEitrVlp-yzQ0APrQRiRPlYVULIP_OJ-J31lhWHRLBc7WCCUOonesWSBY4Urz1zthGKNtzOXFaDvBQDk50dnKJP9LxsA_1MvjHi8crNq3c48SUTchu23UQIP0aa3Hl7OYw1CM39ZlcqRjKLiIYKyhxJ3OAG7q2vu-BPjejejdPajcyPkD1Fh2Tt5s6bWtK4/s320/Screenshot_2024-02-13-06-40-08-20_6012fa4d4ddec268fc5c7112cbb265e7.jpg" width="212" /></a></div><br /><p></p><p>ಇದರ ಬಗ್ಗೆ ನಿನ್ನೆಯಿಂದ ತಲೇಲಿ ಇತ್ತ. ಬೆಳಿಗ್ಗೆ ಎದ್ದು ಇಂಟರ್ನೆಟ್ ಆನ್ ಮಾಡಿ ನೋಡಿದೆ, ಬಿಜೆಪಿ ವಾಟ್ಸಪ್ಪ್ ಗ್ರೂಪ್ ನಲ್ಲಿ ವಿಜಯೇಂದ್ರ ಅವರ ಟ್ವೀಟ್ ಹಾಕಿದ್ರು... ಅದರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಫೋಟೋ ಕಾಣಿಸಿತು.</p><p>ಬಡಪಾಯಿ ಪತ್ರಕರ್ತೆ ಮನಸು, ಏನೇನೊ ಯೋಚನೆ ಮಾಡಿತು... ಅಯ್ಯೋ ಪಾಪ ಜಯಲಲಿತ ಅವರು ಹೋಗಿಬಿಟ್ರೆ, ಹಾಗೀದ್ರೆ ಸದನ ಇವತ್ತು ಸಂತಾಪ ಮಾಡಿ ಬಿಟ್ಟುಬಿಡ್ತಾರೆ ಅಂತ, no assembly session today ಅಂತ ಅನ್ಕೊಂಡೆ. ಅದರ ಹಿಂದೇನೆ ಮಿದುಳು ಹೇಳಿತು, ಇವ್ರು ಹೋಗಿ ತುಂಬಾ ವರ್ಷ ಆಯ್ತ. ಸದನ 9.30 ಗೆ ಇದೆ, ಎದ್ದು ಹೋಗು ಅಂತ.</p><p>ಇಷ್ಟರ ಮದ್ಯೆ ಜಯಲಲಿತ ಅವರು ಕರ್ನಾಟಕದವರು , ಏನ್ ಏನ್ ಸ್ಟೋರಿ ಆಂಗಲ್ ಮಾಡಬಹುದು ಅಂತೆಲ್ಲ ಯೋಚನೆ ಮಾಡಿದ್ದೆ 🤷♀️🙃😂</p><p><br /></p><p>.</p>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-29204954970876586172023-11-08T08:35:00.001-08:002023-11-08T08:35:27.505-08:00ಸುದ್ದಿ ಬರಹ... ಕೈಯಿಂದ ಕೀಲಿ ಮಣೆವರೆಗೆ <p><br /></p><div dir="auto"><div dir="auto"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhbhRvZ2zWmlqMQU2VVluhVbdQY-s6NBGuP42b5m_wMKAiNI301pkIwQvdVvYhJgKNt2mr5Bbk-gyL8BPZdib9x5l1FBSOjp90PWTZSxgjwywKW9WtjFMa9P0pnfJueMLCx1S3R3cj7xmZ6i3oHGcEGQIim7BqQRVS7WwwOpGwlpuGuxe2-GIdMSvAcspY/s1024/IMG-20231108-WA0058.jpg" imageanchor="1" style="margin-left: 1em; margin-right: 1em;"><img border="0" data-original-height="1024" data-original-width="755" height="391" src="https://blogger.googleusercontent.com/img/b/R29vZ2xl/AVvXsEhbhRvZ2zWmlqMQU2VVluhVbdQY-s6NBGuP42b5m_wMKAiNI301pkIwQvdVvYhJgKNt2mr5Bbk-gyL8BPZdib9x5l1FBSOjp90PWTZSxgjwywKW9WtjFMa9P0pnfJueMLCx1S3R3cj7xmZ6i3oHGcEGQIim7BqQRVS7WwwOpGwlpuGuxe2-GIdMSvAcspY/w236-h391/IMG-20231108-WA0058.jpg" width="236" /></a></div><div dir="auto"><br /></div> ಸುದ್ದಿ ಬರಹ... ಕೈಯಿಂದ ಕೀಲಿ ಮಣೆವರೆಗೆ </div><div dir="auto"><br /></div><div dir="auto"><br /></div><div dir="auto">ನನ್ನ ಬಾಲ್ಯದ ಮೊದಲ ಕೆಲವು ವರ್ಷ ಕಳೆದದ್ದು ಮೈಸೂರಿನ ಡಿ ಸುಬ್ಬಯ್ಯ ರಸ್ತೆಯಲ್ಲಿ. ಪಕ್ಕದಲ್ಲೇ ಇದ್ದದ್ದು ಸಾಧ್ವಿ ಪ್ರೆಸ್ಸ್. ಹಳೆಯ ಮನೆ ಅದು , ಅದರ ಮುಂಭಾಗವನ್ನು ಪತ್ರಿಕೆ ತರಲು ಬಳಸಿಕೊಂಡಿದ್ದರು. ಅಲ್ಲಿ ಅಕ್ಷರ ಜೋಡಿಸುತ್ತಿದ್ದರು, ನಾವು ಮಕ್ಕಳಿಗೆ ಅದೇನೋ ಕುತೂಹಲ. ನೋಡಲು ಹೋಗುತ್ತಿದ್ದೆವು. ಆಗ ನಾನು ಪತ್ರಿಕೋದ್ಯಮಕ್ಕೆ ಬರುತ್ತೇನೆ ಎಂಬ ಸುಳಿವು ಕೂಡ ಇರಲಿಲ್ಲ. ಮಕ್ಕಳಲ್ಲಿ ಇರುವ ಸಹಜ ಕುತೂಹಲಕ್ಕಾಗಿ ಹೋಗುತ್ತಿದ್ದೆ.</div><div dir="auto"><br /></div><div dir="auto">ಆಮೇಲೆ ಟೈಪ್ ರೈಟರ್ ಬಂತು. ನಮ್ಮ ಆಫೀಸಿನಲ್ಲಿ ಹಳೆಯ ಟೈಪ್ ರೈಟರ್ ಒಂದನ್ನು ಇಟ್ಟಿದ್ದಾರೆ, ಅದರ ನೆನಪಿಗಾಗಿ. </div><div dir="auto"><br /></div><div dir="auto">ಶಿವಮೊಗ್ಗ ಮೂಲದ ಅರುಣ್ ಸಾರ್ , ನಮ್ಮ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನ ಸ್ಥಾನಿಕ ಸಂಪಾದಕರಾದ ಅವರು , ಶಿವಮೊಗ್ಗದಲ್ಲಿ ಬ್ಯುರೋ ಚೀಫ್ ಆಗಿದ್ದವರು. ಆಗೆಲ್ಲ ಅವರು ದೊಡ್ಡ breaking news ಅಷ್ಟೇ ಅಲ್ಲ, ಪ್ರಮುಖ ಸುದ್ದಿಯನ್ನು ಟೆಲಿಗ್ರಾಂ ಮುಖಾಂತರ ಕಳುಹಿಸುತ್ತಾ ಇದ್ದಾರಂತೆ. ಪೋಸ್ಟಲ್ department ಅವರು ಪತ್ರಕರ್ತರಿಗೆ ಕಡಿಮೆ ದರದಲ್ಲಿ ಕಳುಹಿಸುವ ಅವಕಾಶ ಇತ್ತಂತೆ.</div><div dir="auto"><br /></div><div dir="auto">ಅದೆಷ್ಟೋ ವರ್ಷದ ನಂತರ ಅಂದುಕೊಳ್ಳದೆ ಪತ್ರಿಕೋದ್ಯಮಕ್ಕೆ ಬಂದೆ. ಸ್ನಾತಕೋತ್ತರ ಪದವಿ ಮುಗಿಸಿ, ವಿಜಯ ಟೈಮ್ಸ್ ನಲ್ಲಿ 2004 ಸೇರಿದಾಗ ಪತ್ರಿಕೋದ್ಯಮದಲ್ಲಿ ಕಂಪ್ಯೂಟರ್ ಕಾಲಿಟ್ಟಾಗಿತ್ತು. ನನ್ನ ಹಿರಿಯ ಸಹೋದ್ಯೋಗಿ ಹೇಳಿದ್ದ ಕತೆ ಇದು. ಅವರ ಹಿರಿಯರು ನಿವೃತ್ತಿಯಾದ ಬಳಿಕ ಪತ್ರಿಕಾ ಕಚೇರಿ ನೋಡಬೇಕೆಂದು ಬಂದಿದ್ದರಂತೆ. ಇಡೀ ಕಚೇರಿ ತುಂಬಾ ಕಂಪ್ಯೂಟರ್, ಕೀಲಿಮಣೆ. ಇದೇನು ಸಾಫ್ಟ್ವೇರ್ ಕಂಪನಿ ಇದ್ದಂಗೆ ಇದೆ ಅಂತ ಹೇಳಿದರಂತೆ. ಕೈ ಬರಹವಿಲ್ಲದೆ , ಸುದ್ದಿಗಳು ಹೆಂಗೆ ಬರೆಯುತ್ತಾರೆ ಎಂಬ ಕುತೂಹಲ. </div><div dir="auto"><br /></div><div dir="auto">ಪತ್ರಿಕೋದ್ಯಮ ಸಾಕಷ್ಟು ಬದಲಾವಣೆ ಕಂಡಿದೆ, ತಂತ್ರಜ್ಞಾನ ಬಂದ ಮೇಲೊಂತು ವೇಗವಾಗಿ ಬದಲಾಗುತ್ತಿದೆ. ನಾನು ಕೆಲ್ಸಕ್ಕೆ ಸೇರಿದಾಗ, ಸುದ್ದಿಗಳನ್ನು ಕಂಪ್ಯೂಟರ್ ನಲ್ಲಿ ಮಾಡುತ್ತಿದ್ದೆವು. ಒಮ್ಮೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿಯಲ್ಲಿ ಕಾರ್ಯಕ್ರಮ ಒಂದು ಇತ್ತು. ಆಗ ಮೆಟ್ರೋ ಇರಲಿಲ್ಲ, ಸಂಜೆ ಆರು ಗಂಟೆ, ಮೈಸೂರು ರಸ್ತೆ ಟ್ರಾಫಿಕ್ ಜಾಮ್. ಬರೋದು ತಡ ಆಯ್ತು ಅಂತ ಸುದ್ದಿಯನ್ನ SMS ಮುಖಾಂತರ ಕಳುಹಿಸಿದೆ. ಅದೆಷ್ಟು SMS ಕಳುಹಿಸಿದೆ ಲೆಕ್ಕವಿಲ್ಲ. ಸಹೋದ್ಯೋಗಿ ಅದನ್ನು ಪ್ರತಿ ಸಾಲನ್ನು ಕಂಪ್ಯೂಟರ್ ಮೇಲೆ ಟೈಪ್ ಮಾಡಿಕೊಂಡಿದ್ದಳು. ನಾನು ಆಫೀಸು ಹೋಗುವಷ್ಟರಲ್ಲಿ ಸುದ್ದಿ ರೆಡಿ ಆಗಿತ್ತು. ಈಗ ಅದು ಮೊಬೈಲ್ ಗೆ ಬಂದು ನಿಂತಿದೆ. ಈಗೀಗ chatGPT ತಂತ್ರಜ್ಞಾನ ಬಗ್ಗೆ ಕೂಡ ಅಲ್ಲಲ್ಲಿ ಕೇಳುತ್ತಿದೆ. ಮುಂದೆ ಹೊತ್ತಿಲ್ಲ, ಎಲ್ಲೆಲ್ಲಿ ಹೋಗತ್ತೆ ಅಂತ.</div><div dir="auto"><br /></div><div dir="auto">ಇಷ್ಟೆಲ್ಲಾ ಯಾಕೆ ನೆನಪಾಯಿತು ಎಂದರೆ, ನಮ್ಮ ಫೋಟೋ ಜರ್ನಲಿಸ್ಟ್ ಸಹೋದ್ಯೋಗಿ ನಾಗರಾಜ್ ಗಡೇಕಲ್ ಅವರು ಹಿರಿಯ ಪತ್ರಕರ್ತ ಶೇಷಾಚಂದ್ರಿಕಾ ಸಾರ್ ಅವರ ಕೈ ಬರಹದ ಸುದ್ದಿ ಕಳುಹಿಸಿದರು. ಪತ್ರಿಕಾ ರಂಗದಲ್ಲಿ ಇವರು ಶೇಷಣ್ಣ ಎಂದೇ ಪರಿಚಿತ. ಇವರಿಗೆ ಈಗ ಸುಮಾರು 85 ವರ್ಷ ನಿನ್ನೆ ನಿಧನ ಹೊಂದಿದ್ದ ಹಿರಿಯ ರಾಜಕಾರಣಿ ಡಿ ಬಿ ಚಂದ್ರೆಗೌಡ ಅವರ ಬಗ್ಗೆ ಇದ್ದ ಸುದ್ದಿ. ಸುದ್ದಿ ಹೀಗೆ ಬರೆದರೆ ಸುದ್ದಿ ಎನ್ನುತ್ತಾರೆ ಎಂಬಂತಿದೆ. ಎಲ್ಲೂ ಉತ್ಪ್ರೇಕ್ಷೆ ಇಲ್ಲ, ಇಷ್ಟೇ ಪ್ಯಾರದಲ್ಲಿ ಎಲ್ಲವೂ ಒಳಗೊಂಡಂತೆ ಇರುವ ಕೈ ಬರಹದ ಸುದ್ದಿ, ತುಂಬಾ ಆಪ್ತ ಬರಹ ಅನ್ನಿಸಿತು.<br /><div dir="auto"><br style="font-family: sans-serif; font-size: large;" /></div></div></div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-19125933526855761652023-07-02T00:06:00.002-07:002023-07-02T00:06:50.245-07:00ಕಾಮೆಗೌಡರ ಕೆರೆಗಳು<p><br /></p><p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjXeZZpwDjX_Zfqns3TsORi7WG5LZ_DWyQRnjn0TjtrhGZJjSVXu7y72ou90aj7TWKTFmu2VOYyPcpmL0HRMebVY1R9WuQLg1Upd2rmFeTyJothybKahPDQkOoZ10xHQqVhwlQXTN_ge-VZ4MK9o5BlqFUCGhHziMoTZtJFhUpADD3I71JjqdBOfCKHk4w/s885/FB_IMG_1688281441872.jpg" imageanchor="1" style="margin-left: 1em; margin-right: 1em;"><img border="0" data-original-height="885" data-original-width="720" height="320" src="https://blogger.googleusercontent.com/img/b/R29vZ2xl/AVvXsEjXeZZpwDjX_Zfqns3TsORi7WG5LZ_DWyQRnjn0TjtrhGZJjSVXu7y72ou90aj7TWKTFmu2VOYyPcpmL0HRMebVY1R9WuQLg1Upd2rmFeTyJothybKahPDQkOoZ10xHQqVhwlQXTN_ge-VZ4MK9o5BlqFUCGhHziMoTZtJFhUpADD3I71JjqdBOfCKHk4w/s320/FB_IMG_1688281441872.jpg" width="260" /></a></div><p><br /></p> ಕೆರೆ ಕಾಮೆಗೌಡ, ಅಕ್ಷರ ಕಲಿಯದ , ಶಾಲೆ ಮುಖ ಮಾಡದ ಅಪ್ಪಟ ಹಳ್ಳಿ, ಕುಂದನಿ ಬೆಟ್ಟದ ತಪ್ಪಲಲ್ಲಿ ಸಣ್ಣ ಕೆರೆಯಂತೆ ಅಗೆದು ನೀರು ಕಟ್ಟುವಂತೆ ಮಾಡಿದವ. ಕೆರೆಯ ನದಿಯ ಅಂತ ಗೌಡರ ಜೊತೆ ನನಗೂ ಹಿಯಾಳಿಸಿದವರು ಉಂಟು. ಅದು ಪುಟ್ಟ ನೀರಿನ ಸೆಲೆ ಅಷ್ಟೆ. ವರ್ಷದ 365 ದಿನ ನೀರು ಇದ್ದಂತೆ ಇತ್ತು. <p></p><p>ಈಗೇಕೆ ಎಂಬ ಪ್ರಶ್ನೆ. ಗೌಡರು ಹೋಗಿ ಎಂಟು ತಿಂಗಳು ಮೇಲೆ ಆಯ್ತು. ಅವ ಸಾಮಾನ್ಯನೂ ಹಾಗೂ ಅಸಾಮಾನ್ಯನೂ ಎರಡು ಆಗಿದ್ದವ. ಹುಚ್ಚುತನ ಇತ್ತು, ತಾನು ಮಾಡಿದ ಕೆಲ್ಸದ ಮೇಲೆ ಸ್ವಲ್ಪ ಜಂಬ ಕೂಡ ಇತ್ತು. ತಪ್ಪೇನೂ ಇಲ್ಲ. ಅದು ಸರ್ಕಾರಿ ಜಾಗ, ತನ್ನ ಜಾಗ ಎಂಬಂತೆ ವರ್ತಿಸುತ್ತಿದ್ದ ಎಂಬ ಕೋಪ ಇತ್ತು ಜನರಲ್ಲಿ, ಇದು ತಪ್ಪು ಇಲ್ಲದೆ ಇರಬಹುದು. ತಾನು ನೆಟ್ಟ ಗಿಡ, ಯಾರಾದರೂ ಮುಟ್ಟಿದರೆ ಕೋಪ ಅವರಿಗೆ. ಅವರಲ್ಲಿ ಸ್ವಾರ್ಥ ಇತ್ತಾ, ನಿಸ್ವಾರ್ಥ ಇತ್ತಾ ಗೊತ್ತಿಲ್ಲ. ಆದರೆ ಕೆರೆಗಳ ಬಗ್ಗೆ ಹುಚ್ಚು ಪ್ರೀತಿ ಇತ್ತು.</p><p>ಅವರನ್ನು ಮೊದಲ ಬಾರಿಗೆ ಬೇಟಿಯಾಗಿದ್ದು ಸುಮಾರು ಐದು ವರ್ಷ ಹಿಂದೆ. ಮದ್ಯೆ ಮದ್ಯೆ ಅವರು ಕರೆ ಮಾಡಿ, ಕೆರೆ ಬಗ್ಗೆ, ಇಲ್ಲ ಮತ್ತೊಂದರ ಬಗ್ಗೆ ಹೇಳ್ತಾ ಇದ್ರು. ಮಂಡ್ಯದ ಮಳವಳ್ಳಿ ಆದರೂ, ಅವರ ಕನ್ನಡದಲ್ಲಿ ಚಾಮರಾಜನಗರದ ಕನ್ನಡ ಸೋಗಡಿತ್ತು. ಒಮ್ಮೊಮ್ಮೆ ನಂಗೆ ಅರ್ಥ ಆಗ್ತಾ ಇರ್ಲಿಲ್ಲ. ಅದನ್ನು ಒಮ್ಮೆ ಹೇಳಿದಾಗ, ಸರಿಯಾಗಿ ಗದರಿಸಿದರು.</p><p>ಅದೇನೇ ಇರಲಿ, ಮೂರು ವರ್ಷದ ಹಿಂದೆ ನನ್ನದೊಂದು ಸಣ್ಣ ಟ್ವೀಟ್ ಮಾಡಿದ್ದೆ. ಅವರ ಮತ್ತು ನನ್ನ ನಡುವೆ ಇದ್ದ ಒಂದು ಸಣ್ಣ conversation. ಅದು viral ಆಗಿತ್ತು, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಕೂಡ ತಲುಪಿತ್ತು. ಅವರಿಂದ ಕಾಮೆಗೌಡರಿಗೆ ವಿಡಿಯೋ ಕಾಲ್ ಆಗಿದಲ್ಲದೆ, ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ನಲ್ಲಿ ಅವರ ಬಗ್ಗೆ ಉಲ್ಲೇಕವಾಯಿತು. ಅದಾಗಿ ಮಾರನೇ ದಿನಾ ಅವರನ್ನು ಕಾಣಲು ಹೋಗಿದ್ದೆ, ಅವರ ಮತ್ತೆರೆಡು ಇಚ್ಛೆ ಇದ್ದದ್ದು, ಮಗನಿಗೆ ಅರಣ್ಯ ಇಲಾಖೆಯಲ್ಲಿ ಸಣ್ಣ ಕೆಲ್ಸ ಮತ್ತು ತನಗೆ ಉಚಿತ ಬಸ್ ಪಾಸ್. ಮಗನಿಗೆ ಕೆಲ್ಸ ಕೇಳಿದ್ದು ತಪ್ಪು ಎಂಬಂತೆ ಕೆಲವರು ಹಿಯಾಳಿಸಿದ್ದು ಉಂಟು. ಆತ ಒಬ್ಬ ತಂದೆಯಂತೆ ಕೇಳಿದ್ದು, ಸರಿ ತಪ್ಪು ಅದರ ಬಗ್ಗೆ ಹೇಳಲಾರೆ. ನಾನು ಬಸ್ ಪಾಸ್ ಬೇಕು, ಹತ್ತಿರದ ಮಾದಪ್ಪನ ನೋಡಕ್ಕೆ ಹೋಗುವೆ ಎಂದಿದ್ದ ನೆನಪು. ನಮ್ಮ ಪತ್ರಿಕೆಯಲ್ಲಿ ಬರೆದ ಮಾರನೇ ದಿನ, ಆಗಿನ ಮುಖ್ಯ ಮಂತ್ರಿ ಯಡಿೂರಪ್ಪ ಅವರು ಬಸ್ ಪಾಸ್ ವ್ಯವಸ್ಥೆ ಮಾಡಿದ್ದರು. </p><p>ಅವರು ಕಳೆದ ವರ್ಷ ಹೋಗಿಬಿಟ್ಟರು ಎಂದು ಅವರ ಮಗ ಮೆಸೇಜ್ ಮಾಡಿದಾಗ, ನನ್ನ ಅತ್ತೆ ಹೋಗಿ ಎರಡು ದಿನ ಆಗಿತ್ತು. ಏನು ಹೇಳಲು, ಬರೆಯಲು ಆಗಿರಲಿಲ್ಲ. ಇವತ್ತು Facebook ನಲ್ಲಿ ಕಾಮೆಗೌಡರ ಬಸ್ ಪಾಸ್ ಸಿಕ್ಕಿ ಮೂರು ವರ್ಷ ಅಂತ ನೆನಪಿಸಿತು. </p><p>ಕಾಮೆಗೌಡರ ಭೇಟಿ ನನ್ನ ವೃತ್ತಿ ಜೀವನದಲ್ಲಿ ಒಂದು ದಿಕ್ಕು ತೋರಿಸಿತ್ತು. Scam, corruption, protest, political, ಹೀಗೆ ಸುದ್ದಿ ಮಾಡುತ್ತಿದ್ದವಳಿಗೆ ಸುದ್ದಿ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟವರು. ಇವರ ಬಗ್ಗೆ ಈಗಲೂ ಕೆಲವರು , including ನನ್ನ ವೃತ್ತಿ ಬಾಂಧವರು ಹಿಯಾಳಿಸುವುದಿದೆ. </p><p>ಪತ್ರಿಕೋದ್ಯಮ ಹೊಸ ಆಯಾಮ ತೋರಿಸಿಕೊಟ್ಟ ಕಾಮೆಗೌಡರಿಗೆ 🙏<br /><br /></p><p><br /></p><p><br /></p><p><br /></p><p> </p>Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-84929844542094308642022-10-30T09:45:00.003-07:002022-10-30T21:46:44.310-07:00 ಎಲ್ಲರಂತಲ್ಲ ನನ್ನ ಅತ್ತೆ<p> ಎಲ್ಲರಂತಲ್ಲ ನನ್ನ ಅತ್ತೆ </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEizvbyf4BteLXTJiraHqrYZDtIFL4LKwMrJi2bDeCmZTFaTv2Nx4iju3tF4P79sCujp7-s_crtHxxz05o0cAnhzrwyLqI4EMGtKMc-RH0mAGhcKICzKxsWcYj6wK8PgOZbI3pgl5xa2b9cqh99zkcBzyakscB-b5CQ8hkqcUskn_LMHTLwouHNScaXg/s960/FB_IMG_1667148164584.jpg" style="margin-left: 1em; margin-right: 1em;"><img border="0" data-original-height="720" data-original-width="960" height="240" src="https://blogger.googleusercontent.com/img/b/R29vZ2xl/AVvXsEizvbyf4BteLXTJiraHqrYZDtIFL4LKwMrJi2bDeCmZTFaTv2Nx4iju3tF4P79sCujp7-s_crtHxxz05o0cAnhzrwyLqI4EMGtKMc-RH0mAGhcKICzKxsWcYj6wK8PgOZbI3pgl5xa2b9cqh99zkcBzyakscB-b5CQ8hkqcUskn_LMHTLwouHNScaXg/s320/FB_IMG_1667148164584.jpg" width="320" /></a></div><br /><p></p><div dir="auto"><span style="font-family: arial;"><b>ಫೋಟೋ: ಅತ್ತೆ ಮತ್ತು ನನ್ನ ಮಗಳು, OT ಹೊರಕ್ಕೆ ತೆಗೆದ ಚಿತ್ರ</b></span></div><div dir="auto"><span style="font-family: arial;"><b><br /></b></span></div><div dir="auto"><br /></div><div dir="auto"><br /></div>ಜಗತ್ತಿನಲ್ಲಿ ಎಲ್ಲವೂ ಇದೆ. ಈ ಕ್ಷಣಕ್ಕೆ ನನ್ನೊಳಗಿನ, ಮನೆಯೊಳಗಿನ ಖಾಲಿತನ ತುಂಬಲು ಅಸಾಧ್ಯ. ಹಾಗಂತ ಜೀವನ ಹಿಂಗೇ ಇರೋದಿಲ್ಲ ಅಂತಾನೂ ಗೊತ್ತು. ಅತ್ತೆ ನಮ್ಮನ್ನಗಲಿ 16 ದಿನ ಆಯ್ತು. ಮಾವ ಹೋಗಿ ಆರಕ್ಕೂ ಹೆಚ್ಚು ವರ್ಷ ಆಗಿತ್ತು. ಆಗೆಲ್ಲ ಇಷ್ಟೆಲ್ಲಾ ಅನ್ನಿಸ್ಲಿಲ್ಲ, ಬೇಜಾರಾಗಿತ್ತು ನಿಜ , ಆದರೆ ಮನೇಲಿ ದೊಡ್ಡವರು ಅಂತ ಅತ್ತೆ ಇದ್ರು.<div><div dir="auto"><br /></div><div dir="auto">ಅತ್ತೆ ಹೆಸರು ಮಾಲತಿ, ಅವರು ಡಾಕ್ಟರ್ ಆಗಿದ್ರು. ಪ್ರಸೂತಿ ತಜ್ಞೆ. ಅವರ ತಂದೆ ಕೂಡ ವೈದ್ಯರೇ. ಕಣ್ಣಿನ ಡಾಕ್ಟರ್, ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿ ಇದ್ದವರು, ಬೆಂಗಳೂರು ಮೆಡಿಕಲ್ ಕಾಲೇಜಿನ ಬೋರ್ಡ್ ನಲ್ಲಿ ಇದ್ದವರು. ಇದೇ ಕಾರಣಕ್ಕೆ ಅತ್ತೆಯೂ ಡಾಕ್ಟರ್ ಆದರೂ ಎಂದರೆ ತಪ್ಪು. ಅವರ ತಂದೆ ಆಗಿನ ಕಾಲದಲ್ಲಿ ಲಂಡನ್ ನಲ್ಲಿ ಓದಿಕೊಂಡು ಬಂದವರು, ಆದರೂ ಹೆಣ್ಣು ಮಕ್ಕಳನ್ನು SSLC ಆದಮೇಲೆ ಶಾಲೆ ಬಿಡಿಸಿ ಮನೆಯಲ್ಲಿ ಇರುವಂತೆ ಮಾಡಿದ್ದರಂತೆ. Davis road ನಲ್ಲಿ 80x 120 ಸೈಟ್ ನಲ್ಲಿ ದೊಡ್ಡ ಮನೆ. ಆಗಿನ ಕಾಲದಲ್ಲಿ ಕಾರು ಎಲ್ಲವೂ ಇತ್ತು, ಸ್ವತಂತ್ರ್ಯ ಒಂದು ಬಿಟ್ಟು.</div><div dir="auto"><br /></div><div dir="auto">ಆ ಹತ್ತು ವರ್ಷದಲ್ಲಿ ಮದುವೆ ಕೂಡ ಮಾಡಿಲ್ಲ, ಮುಂದೆ ಓದಿಸಲು ಇಲ್ಲ. ಹತ್ತು ವರ್ಷದ ನಂತರ, ಒಂದು ಸಂಜೆ, ತಾಯಿಯ ಸಹಾಯದಿಂದ ಹುಬ್ಬಳ್ಳಿಗೆ ತಮ್ಮ ಸೋದರ ಮಾವ ಮತ್ತು ಅತ್ತೆ ಯವರು ಇದ್ದ ಮನೆಗೆ ಹೋದರು. ಅಲ್ಲಿಂದ ಅವರ ಇನ್ನೊಂದು ಅಧ್ಯಾಯ. 25 ವರ್ಷದ ಅತ್ತೆ, PUC ಸೇರಿಕೊಂಡರು. ಮೊನ್ನೆ ಇಷ್ಟೊಂದು ಸರ್ಟಿಫಿಕೇಟ್ ಗಳು, ವಿವಿಧ sports ನಲ್ಲಿ ಭಾಗವಹಿಸಿ, ಬಹುಮಾನಗಳು. ತಮಗಿಂತ ಹತ್ತು ವರ್ಷ ಚಿಕ್ಕವರೊಂದಿಗೆ ಭಾಗವಹಿಸಿ ಬಹುಮಾನ ಪಡೆದಿದ್ದು ನೆನೆಸಿಕೊಂಡರೆ ಅವರ dedication ಬಗ್ಗೆ ಹೆಮ್ಮೆಯಾಗತ್ತೆ.</div><div dir="auto"><br /></div><div dir="auto">PU ಆದಮೇಲೆ, MBBS ಸೇರಿಕೊಳ್ಳುವ ಇಚ್ಛೆ, 28 ವಯಸ್ಸಿನ ಆಸು ಪಾಸು. ತಂದೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಬೋರ್ಡ್ ನಲ್ಲಿ ಇದ್ದರೂ, ಅವರ ಹಂಗು ಬೇಡವೆಂದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸೇರಿಕೊಂಡು MBBS ಪದವಿ ಮುಗಿಸಿ, ರಾಯಚೂರಿನ ಸಿಂಧನೂರೆಂಬ ಸಣ್ಣ ಊರಿನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು.</div><div dir="auto"><br /></div><div dir="auto">ಮುಂದೆ ನಮ್ಮ ಮಾವನವರ ಮದುವೆ ನಂತರ ಮಂಡ್ಯ ಕಡೆಗೆ transfer ಮಾಡಿ ಕೊಂಡು ಬಂದರು. ನನ್ನ ಅತ್ತಿಗೆ (husband's elder sister ) ಹಾಗೂ ನನ್ನ ಹಸ್ಬೆಂಡ್ ಹುಟ್ಟಿದ ಮೇಲೆ, ಹಾಸ್ಟೆಲ್ ನಲ್ಲಿ ಇದ್ದುಕೊಂಡು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ Gynecology ದಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದರು. ತಮ್ಮ ವೃತ್ತಿ ಜೀವನದಲ್ಲಿ ಚನ್ನಪಟ್ಟಣ, ಮಳವಳ್ಳಿ, ಕೆ ಆರ್ ಪೇಟೆ, ಮಂಡ್ಯ, ರಾಮನಗರ, ಕೊನೆಗೆ ಬೆಂಗಳೂರಿನ ವಾಣಿವಿಲಾಸದಲ್ಲಿ ಬಂದು ಸ್ವಯಂ ನಿವೃತ್ತಿ ಪಡೆದರು.</div><div dir="auto"><br /></div><div dir="auto">ಚೆನ್ನಾಪಟ್ಟಣದಲ್ಲಿ ವೈದ್ಯ ವೃತ್ತಿಯಲ್ಲಿದ್ದಾಗ, ಹತ್ತು ದಿನ, ಚನ್ನಪಟ್ಟಣದಿಂದ ಬೆಂಗಳೂರಿನ ಜಯನಗರಕ್ಕೆ ದಿನ ಓಡಾಡಿ, ಅಲ್ಲಿದ್ದ ಡ್ರೈವಿಂಗ್ ಸ್ಕೂಲ್ ನಲ್ಲಿ ಕಾರ್ ಕಲಿತು, ambasador ಕಾರ್ ಓಡಿಸೋದನ್ನ ರೂಡಿ ಮಾಡಿಕೊಂಡರು. ಆಗೆಲ್ಲ ರಾತ್ರಿ 2 ಕ್ಕೂ ಕರೆ ಬಂದರೆ, ಒಬ್ಬರೇ ಕಾರ್ ಓಡಿಸಿಕೊಂಡು ಹೋಗಿದ್ದು ಉಂಟು.</div><div dir="auto"><br /></div><div dir="auto">ಮುಂದೆ ತಮ್ಮ 60 ವಯಸ್ಸಿನ ನಂತರ ಕಂಪ್ಯೂಟರ್ ಕ್ಲಾಸ್ ಸೇರಿಕೊಂಡು, ಬೇಸಿಕ್ ಕಂಪ್ಯೂಟರ್ ಕಲಿತದ್ದು ಕೂಡ ಇದೆ.</div><div dir="auto"><br /></div><div dir="auto">ನಂದು ಪಕ್ಕ arrange marriage. 10 to 6 ಜಾಬ್ ಅಲ್ಲದ, weekend ಎಂಬ ಕನ್ಸೆಪ್ಟ್ ಇಲ್ಲದ, ರಾತ್ರಿ 8, 9 ಅಥವಾ 10 ಗಂಟೆಗೆ ಕೆಲಸ ಮಾಡಿ ಮನೆಗೆ ಬಂದಾಗ, ನನ್ನ ಕೆಲಸವನ್ನು ನನ್ನನ್ನು ಒಪ್ಪಿಕೊಂಡರು, ಕೆಲ್ಸಕ್ಕೆ ಗೌರವ ಕೊಟ್ಟರು. ನನ್ನ ಮದುವೆ ನಂತರ, ನಂಗೆ ಮಗಳು ಹುಟ್ಟಿದ ಮೇಲೂ ಬೆನ್ನೆಲುಬಾಗಿದ್ದು ನನ್ನ ಅತ್ತೆ. ಪತ್ರಿಕೋದ್ಯಮದಲ್ಲಿ ಇಷ್ಟು ವರ್ಷ ಕೆಲಸ ಮಾಡಿದ್ದ ಶ್ರೇಯಸ್ಸು ನನ್ನ ಅಮ್ಮ ಅಪ್ಪಗೆ ಎಷ್ಟು ಸೇರಬೇಕೋ, ಅಷ್ಟೇ ಶ್ರೇಯಸ್ಸು ನನ್ನತ್ತೆ ಮಾವ ಮತ್ತು ನನ್ನ ಹಸ್ಬೆಂಡ್ಗೆ ಸೇರಬೇಕು. ನನ್ನ ಡೆಲಿವೆರಿ ಮಾಡಿದ್ದು ನನ್ನ ಅತ್ತೆಯೇ, ಡೆಲಿವರಿ ಮುನ್ನ C ಸೆಕ್ಷನ್ (ಸಿಸೆರಿಯನ್ ) ಮಾಡಬೇಕಾದಾಗಲೂ, ಅತ್ತೆ ಅದಕ್ಕೂ explain ಮಾಡಿ ಹೇಳಿದರು. ನಾನು ಆಗಬಹುದು ಎಂದಾಗ, ಅತ್ತೆ ಭಾನುವಾರ ಮಾಡುತ್ತೇನೆ, ಬರೋರಿಗೆ ಅನುಕೂಲ ಎಂದರು, ನಾನು ರಾಯರನ್ನು ಹೆಚ್ಚಾಗಿ ನಂಬುವ ಕಾರಣ, ಗುರುವಾರ ಮಾಡಿ ಅಂದೆ. ನನ್ನಷ್ಟೇ ರಾಯರನ್ನು ನಂಬುವ ಅತ್ತೆ, ತಕ್ಷಣ ಒಪ್ಪಿಕೊಂಡರು.</div><div dir="auto"><br /></div><div dir="auto">ಅವರ ಅಮ್ಮ ಹೋದಾಗ, ಅದರ ದುಃಖ ಮರೆಯಲು, ವೃತ್ತಿ ಜೀವನಕ್ಕೆ ಜಾಸ್ತಿ ಒತ್ತು ಕೊಟ್ಟರಂತೆ, ಅವರಂತೆ ಗಟ್ಟಿಗಿತ್ತಿಯಲ್ಲ, ಪ್ರಯತ್ನ ಮಾಡುತ್ತೇನೆ.</div><div dir="auto"><br /></div><div dir="auto">ಅಷ್ಟೆಲ್ಲಾ ಇಟ್ಟಿಮಿತಿಯಲ್ಲೂ, ವಿಜ್ಞಗಳ ನಡುವೆ ಓದಿ, ಮುಂದೆ ಬಂದು, ಮನೆ ಹಾಗೂ ವೃತ್ತಿ ಜೀವನ ಎರಡನ್ನೂ ನಿಭಾಯಿಸಿದ ಅತ್ತೆ ಅವರ ಈ ಪ್ರಯಾಣ, ಮತ್ತಷ್ಟು ಜನಕ್ಕೆ ಸ್ಫೂರ್ತಿಯಾಗಲಿ ಎಂದು ಈ ಬರಹ ಬರೆದಿದ್ದೇನೆ.</div><div dir="auto"><br /></div><div dir="auto">ನಾಳೆಯಿಂದ ಮತ್ತೆ ಆಫೀಸ್! ಬೌತಿಕವಾಗಿ </div><div dir="auto">ಅವರಿಲ್ಲದ ಮನೆ ಖಾಲಿ ಇದೆ, ಅವರ ನೆನಪಲ್ಲಿ, ಅವರ ಹೆಸರಿನ ಶಕ್ತಿಯಲ್ಲಿ, ಮತ್ತಷ್ಟು ಮುಂದಿನ ಹೆಜ್ಜೆಗಳು....</div><div dir="auto"><br /></div><div dir="auto"><br /></div><div dir="auto"><br style="font-family: sans-serif; font-size: large;" /></div></div>Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-13455284149746215912022-03-23T03:34:00.002-07:002022-03-23T03:34:32.744-07:00ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ....<p> </p><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ಬಜೆಟ್ ಅಧಿವೇಶನದ ಸಮಯದಲ್ಲಿ, ಮಧ್ಯಾಹ್ನದ ವೇಳೆ ಸಾಮಾನ್ಯವಾಗಿ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗು ಹಿರಿಯ ನೇತಾರರು ಊಟ ಹಾಕಿಸುವ ಪರಿಪಾಠವಿದೆ. ಅಂತಹ ದಿನ , ಯಾರು ಆಯೋಜಿಸುವರೋ, ಅವರೇ ಖುದ್ದಾಗಿ ಅಥವಾ ಅವರ ಸಿಬ್ಬಂದಿ ಬಂದು, ಎಲ್ಲ ಶಾಸಕರಿಗೆ, ಅಧಿಕಾರಿಗಳಿಗೆ ಹಾಗು ಮಾಧ್ಯಮದವರಿಗೆ ಊಟಕ್ಕೆ ಆಹ್ವಾನಿಸುವುದು ಪರಿಪಾಠ.<br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ಇಂದು ಮಂತ್ರಿಯೋರ್ವರ ಊಟದ ಆಯೋಜನೆ ಇತ್ತು. ಅವರ ಸಿಬ್ಬಂದಿ ಬಂದು ಕಾರ್ಡ್ ಕೊಟ್ಟು ಹೋದರು. ಇವರು ಮಂತ್ರಿಗಳಾಗಿ ಎರಡು ವರ್ಷ ಆಗಿರಬೇಕಷ್ಟೆ. ಆ ನಂತರ ಅದೇ ಮಂತ್ರಿಗಳು ಅಲ್ಲಿದ್ದ ಕೆಲ ಹಿರಿಯ ಶಾಸಕರಿಗೆ ಖುದ್ದು ಹೇಳಿ ಹೋದರು. ಮಾಧ್ಯಮದ ಗ್ಯಾಲರಿ ಬಳಿ ಬಂದ್ದರೂ , ಸೌಜನ್ಯಕ್ಕೇನು ಕರಿಯಲಿಲ್ಲ (ನಾನು ಅವರನ್ನು ದೂಷಿಸುತ್ತಿಲ್ಲ ).<br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ನಾನು ಇಲ್ಲಿ ಹೇಳಹೊರಟಿರೋದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ. ನಾಳೆ ಅವರಿಂದ ಔತಣಕೂಟವಿದೇ. ಸದನದ ಬಲ ತುದಿಯಲ್ಲಿ ಅವರ ಆಸನವಿದೆ. ಸದನದ ಮಧ್ಯೆ ಎದ್ದು, ಪ್ರತಿಯೊಬ್ಬ ಶಾಸಕನ ಬಳಿ ಹೋಗಿ ಊಟಕ್ಕೆ ಆಹ್ವಾನಿಸಿದರು. ಅದರಲ್ಲಿ ಹಿರಿಯರು, ಕಿರಿಯರು, ಆ ಪಕ್ಷ , ಈ ಪಕ್ಷ , ಅಂತ ಭೇಧವಿರಲಿಲ್ಲ. ಸದನದಲ್ಲಿ ಆಸನಗಳ arrangement U ಆಕಾರದಲ್ಲಿ ಇರುತ್ತದೆ, ಹಿರಿಯ ಸದಸ್ಯರು ಮುಂದಿನ ಸಾಲುಗಳು, ಹಿಂದಿನ ಸಾಲುಗಳಲ್ಲಿ ಕಿರಿಯರು ಕೂತಿರುತ್ತಾರೆ. ಯಡಿಯೂರಪ್ಪ ಅವರ ಮುಖ ಸ್ವಲ್ಪ ಸಿಡುಕು , ಆದರೆ ಇವತ್ತು ಸ್ವಲ್ಪ ನಗು ಮುಖ ಇತ್ತು.<br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ಹಾಗೆ ಬಂದು, ಕಾಂಗ್ರೆಸ್ ಗ್ಯಾಲರಿ ಬಳಿ ಬಂದರು . ಸಿದ್ದರಾಮಯ್ಯ ಅವರು ಮುಂದಿನ ಸಾಲುಗಳಲ್ಲಿ ಕುಳಿತುಕೊಂಡು, ಹೆಡ್ ಫೋನ್ ಹಾಕಿಕೊಂಡು ಸದನದಲ್ಲಿ ಮಾತನಾಡುತ್ತಿದ್ದವರ ಮಾತುಗಳನ್ನು ಆಲಿಸುತ್ತಿದ್ದರು. ಹಿಂಬದಿಯಿಂದ ಬಂದ ಯಡಿಯೂರಪ್ಪನವರನ್ನು ಸಿದ್ದರಾಮಯ್ಯ ಅವರು ನೋಡಲಿಲ್ಲ. ಹೆಡ್ ಫೋನ್ ಧರಿಸಿದ್ದರಿಂದ ಯಡಿಯೂರಪ್ಪನವರು ಬಂದರೆಂದು ಹೇಳಿದ್ದು ಕೂಡ ಕೇಳಿಸಲಿಲ್ಲ.<br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ಆಗಲೇ ನಾನು ನೋಡಿರದ ಯಡಿಯೂರಪ್ಪ ಕಂಡರು. ಸಣ್ಣ ಹುಡುಗನಂತೆ, ಸಿದ್ದರಾಮಯ್ಯ ಅವರ ಹೆಡ್ ಫೋನ್ ತೆಗೆದು ಜೋರಾಗಿ ನಗಲು ಶುರು ಮಾಡಿದರು. ಸಿದ್ದರಾಮಯ್ಯನವರ ಹೆಡ್ ಫೋನ್ ತೆರೆಯುವ ಸಾಹಸಕ್ಕೆ ಕೈ ಹಾಕಲು ಸ್ವಲ್ಪ ಧೈರ್ಯ ಇರಬೇಕು ಇಲ್ಲ ಏನಂದ್ರೆ ಅವರು ಯಡಿಯೂರಪ್ಪ ಆಗಿರಬೇಕು. ಕೆಲ ದಿನಗಳ ಹಿಂದೆ ನಮ್ಮಪ್ಪರಾಣೆ ಸಿ ಎಂ ಆಗಲ್ಲ , ಎಂದೆಲ್ಲ ಒಬ್ಬರಿಗೊಬ್ಬರು ದೂಷಿಸಿಕೊಂಡಿದ್ದ ಇಬ್ಬರಲ್ಲು ಆ ಭಾವನೆ ಇರಲಿಲ್ಲ. ಯಡಿಯೂರಪ್ಪ ಅವರನ್ನು ತಮ್ಮ ಬಳಿ ಕುಳಿಸಿಕೊಂಡು ಕೆಲಹೊತ್ತು ಮಾತನಾಡಿದರು ಕೂಡ.<br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ಯಡಿಯೂರಪ್ಪ ಅವರು ನಡೆದು ಬಂದಂತೆಲ್ಲ, ಪಕ್ಷಾತೀತವಾಗಿ ಸದಸ್ಯರು ಎದ್ದು ನಿಂತಿದ್ದನ್ನು ಕಂಡೆ.ಬಂದು ವಾಪಾಸ್ ನಡೆದು ಕೊಂಡು ಹೋಗುವಾಗಲೂ, ಕಾಂಗ್ರೆಸ್, ಜೆಡಿಎಸ್ ಅಥವಾ ಅವರದ್ದೇ ಪಕ್ಷದ ಸದಸ್ಯರು ಮತ್ತೊಮ್ಮೆ ನಿಂತರು. ಯಡಿಯೂರಪ್ಪ ಅವರನ್ನು , ಅವರ ಸಿಟ್ಟನ್ನು , ಅಥವಾ ಹಠವನ್ನು , ಅಥವಾ ಅವರ ideology ಅಥವಾ ಅವರ ಮೇಲಿನ ಆರೋಪಗಳನ್ನು ಅನೇಕರು ಹೇಳಿಕೊಂಡಿದ್ದಾರೆ, ಬೈಯ್ದುಕೊಂಡಿದ್ದಾರೆ, ದ್ವೇಷ ಕೂಡ ಮಾಡಿದ್ದಾರೆ , ಅಷ್ಟೇ ಪ್ರೀತಿ ಕೂಡ ಮಾಡಿದ್ದಾರೆ.<br /></div><div style="font-family: sans-serif; font-size: 12.8px;"><br /></div><div style="font-family: sans-serif; font-size: 12.8px;">ನಾನು ಕೂಡ ಅನೇಕ ಪತ್ರಕರ್ತರಂತೆ ಅವರ ಮೇಲಿನ ಆರೋಪಗಳನ್ನು ಬರೆದಿರಬಹುದು, ಅವರ ಒಳ್ಳೆ ಕೆಲ್ಸವನ್ನು ಹೊಗಳಿರಲುಬಹುದು.ಇಂದು ಈ ಲೇಖನ ಬರೆದ ಉದ್ದೇಶ ಅವರ ವಯಕ್ತಿಕ ಸೌಜನ್ಯತೆಗೆ ಹಾಗು ಇಂದೇ ಇನ್ನೊಬ್ಬ ಸಚಿವರ, ಅದು ಅವರದೇ ಪಾಕ್ಷದ ಸಚಿವರ ಔತಣಕೂಟದಲ್ಲಿ ನಡೆದುಕೊಂಡ ಬಗ್ಗೆ ವ್ಯತ್ಯಾಸದಲ್ಲಿ ಅಜಗಜಾಂತರವಿತ್ತು. ಏರಿದವನು ಬೀಳದೆ ಇರುವುದಿಲ್ಲ, ಏರಿದವನು ಬಾಗಿದರೆ ಒಂದೇ ಸಂದೇಶ. ಹೊಸ ನೇತಾರರಿಗೆ ಇದು ಉದಾಹರಣೆ ಆಗಬೇಕು .</div>Ashwini M Sripadhttp://www.blogger.com/profile/01699731701824302054noreply@blogger.com3tag:blogger.com,1999:blog-6673691930118722471.post-14648095075327113642022-03-04T09:07:00.000-08:002022-03-04T09:07:04.833-08:00ಬಜೆಟ್ ಬಜೆಟ್ <p> <span style="font-family: sans-serif; font-size: large;">ನನ್ನ ವೃತ್ತಿಯ ಮೊದಲ ಕೆಲ ದಿನಗಳು. ಸಿದ್ದರಾಮಯ್ಯ, ಅಂದಿನ ವಿತ್ತ ಸಚಿವ (ಉಪಮುಖ್ಯಮಂತ್ರಿ ಕೂಡ ಇರಬಹುದು, ನೆನಪಿಲ್ಲ) ಅವರು 2005 ರಲ್ಲಿ ಮಂಡಿಸಿದ್ದು. ನಾನು ಲೆಕ್ಕದಲ್ಲಿ ಅಷ್ಟಕ್ಕೇ ಅಷ್ಟೇ, ಬಜೆಟ್ ನನಗೆ ಈಗಲೂ ಕಬ್ಬಿಣದ ಕಡಲೆ. ಅಂದು ಆಫೀಸಿಗೆ ಬಂದೆ, ಟ್ರೈನಿ ರಿಪೋರ್ಟರ್ ಆಗ. ಜನಾಭಿಪ್ರಾಯ (voxpop ) ಕೇಳಿಕೊಂಡು ಬಾ ಎಂದಾಗ, ಏನು ಕೇಳುವುದು ಅಂತ ಮೊದಲು ನಂಗೆ ಬಜೆಟ್ ನಲ್ಲಿ ಏನಿದೆ ಅಂತ ಗೊತ್ತಿರಬೇಕಲ್ಲ , ನನ್ನ ಹಿರಿಯ ಸಹೋದ್ಯೋಗಿ, ಗಿಣಿ ಪಾಠದಂತೆ ಮಾಡಿ, ಇಷ್ಟೇ ಕೇಳು ಎಂದು ಹೇಳಿ ಕಳುಹಿಸಿದರು.</span></p><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ನಾನೇ ಪೆದ್ದು, ಬಜೆಟ್ ಬಗ್ಗೆ ಗೊತ್ತಿಲ್ಲದೇ , ಜನಾಭಿಪ್ರಾಯ ಕೇಳಕ್ಕೆ ಹೊರಟೆ, ಒಟ್ಟು ಆರು ಜನರ ಅಭಿಪ್ರಾಯ ಬೇಕಿತ್ತು , ಎಲ್ಲ ವಯೋಮಾನದವರನ್ನು ಕೇಳಬೇಕೆಂದು ಹೇಳಿ ಕಳುಹಿಸಿದರು. ಅಷ್ಟಾಗಿ ನೆನಪಿಲ್ಲ . ಹೆಂಗೋ ಮಾಡಿಕೊಂಡು ಬಂದೆ. ಆರು ಜನರ ಅಭಿಪ್ರಾಯಕ್ಕೆ , ಹತ್ತು ಜನರ ಹತ್ತಿರ ಹೋಗಿದ್ದು ಆಯಿತು, ಅರ್ಧ ಸಮಯ ಅವರಿಗೆ ನನಗೆ ಗೊತ್ತಿದ್ದ ಅರ್ಧ ಜ್ಞಾನ ಹೇಳಿ , ಕೇಳುತ್ತಿದ್ದೆ, ಅದರಲ್ಲಿ ಅವರಿಗೆ ಬಜೆಟ್ ಬಗ್ಗೆ ಏನು ಗೊತ್ತಿರದೆ ಇದ್ದವರು ಇದ್ದರು. ಇನ್ನು ಜಾಸ್ತಿ ಬಲ್ಲವರು ಇದ್ದರು, ಅವರು ಹೇಳಿದ್ದು ನನಗೆ ಅರ್ಥ ಆಗ್ತಾ ಇರಲಿಲ್ಲ . ಒಟ್ಟಿನಲ್ಲಿ ಮಕ್ಕಳಕೂಟ ಹತ್ತಿರ ಕೆಲವು ರಸ್ತೆಗಳಿಗೆ ಹೋಗಿ ಬಂದದ್ದು ಆಯಿತು. ಈ ಪ್ರಕ್ರಿಯೆಯಲ್ಲಿ , ಅವರ ಫೋಟೋ ಕೂಡ ತೆಗೆದುಕೊಳ್ಳಬೇಕಿತ್ತು, ಅದಕ್ಕೆ ನಮ್ಮ ಫೋಟೋಗ್ರಾಫರ್ ನಮ್ಮ ಜೊತೆ ಬರ್ತಾ ಇದ್ರು. ಕೆಲವೊಮ್ಮೆ ಒಬ್ಬೊಬ್ಬರು ಮಾತನಾಡಿದರು, ಆದರೆ ಫೋಟೋ ತೆಗಿಬೇಡಿ ಅಂತ ಹೇಳ್ತ ಇದ್ರು. ಫೋಟೋ ಇಲ್ಲದೆ , ಬರಿ ಅಭಿಪ್ರಾಯ ತೆಗೆದುಕೊಳ್ಳುವ ಹಾಗೆ ಇಲ್ಲ . ಥಾಂಕ್ ಯು ಅಂತ ಹೇಳಿ ಮುಂದಕ್ಕೆ ಹೋಗ್ತಾ ಇದ್ವಿ.</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ನಾನು ಸೇರಿದ ಒಂದೆರೆಡು ವರ್ಷಗಳಲ್ಲಿ ಹೊಸಬರು ಬಂದು ಸೇರಿಕೊಂಡರು, ಆಗೆಲ್ಲ ನಾನು ಸ್ವಲ್ಪ ಟ್ರೈನೀ ಇಂದ ರಿಪೋರ್ಟರ್ ಆಗಿದ್ದೆ. ಜನಾಭಿಪ್ರಾಯ ತನ್ನಿ ಎಂದರೆ, ಆಗೆಲ್ಲ ಆರ್ಕುಟ್ (ಈಗಿನ facebook ) ನಂತೆ ಇತ್ತು, ಹೊಸಬರಿಗೆ ಇದೆ ರೀತಿ ಜನಾಭಿಪ್ರಾಯ ತನ್ನಿ ಎಂದರೆ, ತಮ್ಮ ಸ್ನೇಹಿತರಿಗೆ ಕರೆ ಮಾಡಿ, ಅರ್ಕುಟ್ ಗೆ ಹೋಗಿ ಅವರ ಸ್ನೇಹಿತರ ಫೋಟೋ ತೆಗೆದುಕೊಂಡು, ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದರು. ತಂತ್ರಜ್ಞಾನ ಬಂದಂತೆಲ್ಲ Armchair journalist ಜಾಸ್ತಿ ಆಗುತ್ತಾ ಬಂದರು.</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಆ ನಂತರ ದಿನಗಳಲ್ಲಿ ಬೇರೆ ಬೇರೆ ಬೀಟ್ ಮಾಡ್ತಾ ಇದ್ದೆ. ಸಾರಿಗೆ, ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಬಿಬಿಎಂಪಿ.. ಹೀಗೆ. ಆಗೆಲ್ಲ ಬಜೆಟ್ ಸಮಯದಲ್ಲಿ ಆಯಯ ಬಿಟ್ ಸಂಬಂಧಿಸಿದ್ದೆ ಬರೆಯಬೇಕಿತ್ತು. ನಾವು ಕೂಡಾ ಅದೇ ವಿಷಯ ಸಂಬಂಧಿಸಿದ ತಜ್ಞರ ಜೊತೆ ಮಾತನಾಡಿ, analyisis ಬರೀಬೇಕಿತ್ತು. ಇದಲ್ಲದೆ ಬಿಬಿಎಂಪಿ ಬಿಟ್ ಮಾಡುವಾಗ ಸಾಕಷ್ಟು ಪಾಲಿಕೆ ಬಜೆಟ್ ಕವರ್ ಮಾಡಿದ್ದೇನೆ. </div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಇವತ್ತು ನಮ್ಮ ಪೇಪರ್ ಗೆ ಬಜೆಟ್ ಮುಖ್ಯ ಕಾಪಿ (Main copy ) ನಾನು ಬರೆದೆ. ನನ್ನೊಟ್ಟಿಗೆ ಕೆಲ್ಸಕ್ಕೆ ಸೇರಿದವರು ಇದನ್ನು ಯಾವಾಗಲೋ ಮಾಡಿದ್ದಾರೆ, ನನಗಿಂತ ಕಿರಿಯರು ಕೂಡಾ ಮಾಡಿದ್ದಾರೆ. ನನಗೆ ಈ ಅವಕಾಶ ಬಂದದ್ದು ತಡ. ನನ್ನ ವೃತ್ತಿ ಜೀವನದಲ್ಲಿ ರಾಕೆಟ್ ನಂತೆ ನಾನು ಒಮ್ಮೆಲೇ ಮೇಲೆ ಯಾವಾಗಲೂ ಹೋಗಲೇ ಇಲ್ಲ. ಒಂದೊಂದೇ ಹೆಜ್ಜೆ. ಹಾದಿ ಬೀದಿಯಲ್ಲಿ ಜನರ ಅಭಿಪ್ರಾಯ ತೆಗೆದು ಕೊಂಡದ್ದು ದಿನ ಯಾಕೋ ನೆನಪಾಯ್ತು, ಅಲ್ಲಿಂದ ಹಿಡಿದು ಇವತ್ತಿನ ಮುಖಪುಟ ಕಾಪಿಯವರೆಗೆ ಒಂದಷ್ಟು ದೂರ ಬಂದಾಗಿದೆ . ಸಾಕಷ್ಟು ಬಜೆಟ್ ನೋಡಿದ್ದೇನೆ. ಬಹುಶ: ಇದೇ ನನ್ನ ವೃತ್ತಿ ಜೀವನದ ಕೊನೆಯ ಬಜೆಟ್ ಇರಬಹುದಾ? ಕಾಲವೇ ಹೇಳುತ್ತದೆ!</div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-38250393173384885332022-01-16T11:41:00.001-08:002022-01-16T11:41:30.846-08:00ಮರುಕಳಿಸದಿರಲಿ 2021<p> ಕಳೆದ ವರ್ಷ, ಬಹುಷಃ ಏಪ್ರಿಲ್ ತಿಂಗಳು. ಕೋವಿಡ್ ಕೆಸಸ್ ಜಾಸ್ತಿ ಆಗಕ್ಕೆ ಶುರು ಆಗಿತ್ತು. ನಮಗೆ ವರ್ಕ್ ಫ್ರಮ್ ಹೋಮ್. ಒಂದು ರೀತಿಯ ಬಂಧಿಖಾನೆ. ವರದಿಗಾರರಿಗೆ ಮನೆಯಿಂದ ಕೆಲಸ, ಒಂದು ಹಿಂಸೆ.</p><div dir="auto">ಅಲ್ಲಿವರೆಗೆ ರೈತ ಸಹಾಯ ಟ್ವೀಟ್ ಮಾಡ್ತಾ ಇದ್ದೆ, ಅದು ಅಲ್ಲೊಂದು ಇಲ್ಲೊಂದು ಜನರಿಗೆ ಆ ಔಷಧ ಇಲ್ಲ, oxygen ಇಲ್ಲ, ಬೆಡ್ ಇಲ್ಲ ಅಂತ ಶುರು ಆಯ್ತು, ಒಬ್ಬರಿಗೆ ಸಿಗ್ತಲ್ಲ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು, ಮಗದೊಂದು... ಲೆಕ್ಕನೆ ಇರಲಿಲ್ಲ. ರಾತ್ರಿ ಹನ್ನೊಂದಕ್ಕೆ ಮಲಗುವಳು, ರಾತ್ರಿ ಒಂದು ಎರಡು ಗಂಟೆವರೆಗೆ ಎದ್ದೆ ಇರ್ತಿದ್ದೆ. ಅಷ್ಟರಲ್ಲಿ ಆಫೀಸ್ ಕೆಲಸ ಮುಗಿಸಿ, ಮನೆ ಕೆಲಸ ಬಾಕಿ ಮುಗ್ಸಿ, ಆ ಆಸ್ಪತ್ರೆ, ಈ ಆಸ್ಪತ್ರೆ ಕಾಲ್ ಮಾಡು, ಬೆಡ್ arrange ಮಾಡು, ಔಷಧಿ ಕೇಳು... ಒಬ್ಬಲ್ಲೇ ಮಾಡ್ತಿರಲಿಲ್ಲ, ನನ್ನಂತೆ ಅನೇಕರು ಇದ್ದರು, ಕೆಲವೊಮ್ಮೆ ಅವರೊಂದಿಗೆ cordinate ಮಾಡ್ತಾ ಇದ್ದೆ. ಮತ್ತೆ ಬೆಳಗ್ಗೆ ಆಫೀಸ್ ಕೆಲಸ, ಜೊತೆಗೆ ಈ ರೀತಿ ಕೆಲಸ. ಒಮ್ಮೊಮ್ಮೆ ಹುಚ್ಚು ಹಿಡಿತಾ ಇತ್ತು. ಒಂದು ಗಂಟೆಗೆ ರಾತ್ರಿ ಮಲಗುವಳು, ಒಮ್ಮೊಮ್ಮೆ ಎರಡಕ್ಕೆ ಮಲಗ್ತೀದ್ದೆ, in case ಯಾರದ್ರು ಟ್ವಿಟ್ಟರ್ ನಲ್ಲಿ tag ಮಾಡಿ, ಬೆಳಗ್ಗೆ ಹಂಗೆ ಲೇಟ್ ಆಗ್ಬಿಟ್ರೆ ಅಂತ ಭಯ.</div><div dir="auto"><br /></div><div dir="auto">ಈ ರೀತಿ inquiries ಬೆಂಗಳೂರು, ಮೈಸೂರು, ಬೆಳಗಾವಿ... ಮಂಡ್ಯ... ಯಾದ್ಗೀರಿ... ಎಲ್ಲಾ ಕಡೆ ಇಂದಲೂ ಬರ್ತಿತ್ತು. ಅದಕ್ಕೆ ಲೆಕ್ಕವೇ ಇರಲಿಲ್ಲ.</div><div dir="auto">ರಾಜಕೀಯ ವಾರದಿಗಾರಿಕೆ ಮಾಡೋದ್ರಿಂದಲೋ ಏನೋ, ಕೆಲವೊಮ್ಮೆ ಪಕ್ಷದ ಕಾರ್ಯಕರ್ತರು personally ಗೊತ್ತಿತ್ತು, ಸಹಾಯ ಮಾಡುತ್ತಿದ್ದರು. ಇದರಲ್ಲಿ. ಆಡಳಿತ ಹಾಗೂ ವಿಪಕ್ಷ ಕಾರ್ಯಕರ್ತರು ಇದ್ದರು. ಅವರೆಲ್ಲರಿಗೂ ನಾನು ಅಬಾರಿಯಾಗಿದ್ದೇನೆ.</div><div dir="auto"><br /></div><div dir="auto">ಇನ್ನೊಮ್ಮೆ ಮೂರು ತಿಂಗಳ ಹಸಿ ಬಾನಂತಿ, ಹಂಗು ಹಿಂಗು ಬೆಡ್ ಸಿಗ್ತು, ಆದರೆ ಆಕೆ ಆರು ದಿನದ ನಂತರ ಹೋಗಿಬಿಟ್ಟಳು. ದೇವರೆ ಎಂತ ಸಂಕಟ ಆಯ್ತು. ಆದರೆ ಸಂಕಟ ಮಾಡಿಕೊಳ್ಳುವ ಹಾಗೆ ಇರಲಿಲ್ಲ. ಮತ್ತೊಂದು patient ಕಡೆಯಿಂದ request ಇರ್ತಿತ್ತು. </div><div dir="auto"><br /></div><div dir="auto">ಹೀಗೆ ಒಂದು ದಿನ, ನನ್ನ ಸಹೋದ್ಯೋಗಿ ಕೋವಿಡ್ ಎಂದು ಗೊತ್ತಾಯ್ತು. ಅವರೊಟ್ಟಿಗೆ hello ಬಿಟ್ಟು ಬೇರೇನೂ ಮಾತನಾಡಿದ್ದೆ ಇಲ್ಲ. ಆತ ಇಲ್ಲಿಯವರಲ್ಲ, ಹೆಂಡತಿ ಹಾಗು ಎರಡು ವರ್ಷದ ಮಗು. ಅವರಿಗೆ ಕೋವಿಡ್ ಬಂದು ಒಂದು ಎರೆಡು ದಿನ ಆದ ನಂತರ ನಂಗೆ ಗೊತ್ತಾಗಿದ್ದು. ಅಷ್ಟರಲ್ಲಿ ಅವರ ಆಕ್ಸಿಜನ್ ಲೇವಲ್ 90ಕ್ಕೆ ಕಡಿಮೆ ಯಾಗಿತ್ತು. ಎಲ್ಲೂ ಬೆಡ್ ಸಿಗ್ತಿಲ್ಲ. ಮನೆ ಯಾರಿಗೂ ಗೊತ್ತಿಲ್ಲ. ಕೊನೆಗೆ ಸಿಕ್ಕಿದ್ದು whitefield ಬಳಿ,</div><div dir="auto">ಆಕ್ಸಿಜನ್ ಲೆವೆಲ್ 80 ಕ್ಕೆ ಬಂದಿತ್ತು. ಆದರೆ ಈತ ಹೆಂಡತಿ ಮಗಳನ್ನು ಬಿಟ್ಟು ಹೋಗಲು ಒಪ್ತಿಲ್ಲ, ಅವರನ್ನು ಒಪ್ಪಿಸಿದ್ದು ಆಯ್ತು, ಆಂಬುಲೆನ್ಸ್ ಸಿಗ್ತಿಲ್ಲ, ಕೊನೆಗೆ ಹಂಗು ಹಿಂಗು ಆಂಬುಲೆನ್ಸ್ ಬಂದಾಗ, ಅವರ ಆಕ್ಸಿಜನ್ ಲೆವೆಲ್ 69. ಕೈ ಕಾಲು ನಡಕ ಶುರು ಆಗಿತ್ತು. ಇವತ್ತು ಕೂಡಾ ಭಯ ಆಗತ್ತೆ. ಅವರು ಈಗ ಆರೋಗ್ಯವಾಗಿದ್ದರೆ.</div><div dir="auto"><br /></div><div dir="auto">ಹೀಗೆ ಮಾಡುವಾಗ, ಅದಾಗಿ ಒಂದೆರೆಡು ದಿನವಾಗಿರಬೇಕು, ಅಮ್ಮ ಕಾಲ್ ಮಾಡಿ ಅಣ್ಣಂಗೆ ಹುಷಾರಿಲ್ಲ ಅಂದಾಗ, ಮಾಮೂಲಿ ಇರಬೇಕು, ಕೋವಿಡ್ ಇರೋದಿಕ್ಕೆ ಸಾಧ್ಯವೇ ಇಲ್ಲ ಅಂತ.. ಆದರೂ ನಾನು ಅಕ್ಕ ಹಂಗೆ ಮೈಸೂರಿಗೆ ಹೊರಟ್ವಿ, ಚಿಕ್ಕಮ್ಮನ ಮಗಳು ಅಳಿಯ ಅಮ್ಮನ ಜೊತೆ ಇದ್ರು ಅಂತ ಧೈರ್ಯ, ಅಪೋಲೋ ಆಸ್ಪತ್ರೆಯಲ್ಲಿ outpatient ನಲ್ಲಿ ಅಣ್ಣಂಗೆ ಪಾಸಿಟಿವ್ ಅಂತ ಗೊತ್ತಾಯ್ತು. ನಾವಾಗ ಚನ್ನಪಟ್ಟಣ ಹತ್ರ.</div><div dir="auto"><br /></div><div dir="auto">ಇಂತವರಿಗೆ ಕಾಲ್ ಮಾಡಿಲ್ಲ ಅಂತ ಇಲ್ಲ. ಇಂತವರು ನನಗೆ ಕಾಲ್ ಮಾಡಿಲ್ಲ ಅಂತ ಇಲ್ಲ. ಬೆಳಿಗ್ಗೆ ಅಪೋಲೋ ಇಂದ ಶುರು ಆಗಿದ್ದು, ನಮಗೆ ಸಂಜೆ ಸಿಕ್ಕಿದ್ದು ಮೈಸೂರಿನ ಕೆ ಆರ್ ಆಸ್ಪತ್ರೆ. ಸರ್ಕಾರಿ ಆಸ್ಪತ್ರೆ ಅಭ್ಯಾಸವಿಲ್ಲದ ನಮಗೆ ಅಂದು ಬೇರೆ ದಾರಿಯಿರಲಿಲ್ಲ. ಸಮುದ್ರ ಜೊತೆ ನೆಂಟ, ಉಪ್ಪಿಗೆ ಬರ. ನನ್ನ ಪರಿಸ್ಥಿತಿ.ಅಲ್ಲಿ ನರಕವನ್ನು ನೋಡಿದೆ. ರಾತ್ರಿ 11. ಅಣ್ಣನನ್ನ ಒಬ್ಬರೇ ಬಿಟ್ಟು ಬಂದ್ವಿ.ಅದರ ಮಾರನೇ ದಿನದಿಂದ almost ದಿನ ಹೋಗ್ತ ಇದ್ವಿ, ನಾನು and ಅಕ್ಕ. ಸ್ವಲ್ಪ ಮೆತ್ತನೆಯ stretcher ಇದ್ರೆ ಬದುಕಿದವರಿಗೆ, ಇಲ್ಲ ಕಾಲಿ ಮೆಟಲ್ stretcher ಇದ್ರೆ ಸತ್ತವರಿಗೆ. ಇದಕ್ಕೆ ಲೆಕ್ಕ ಇರಲಿಲ್ಲ. ಇಡ್ಲಿ ವಡೆ ಪಾರ್ಸೆಲ್ ತರ ಸತ್ತವರನ್ನ ಪ್ಯಾಕ್ ಮಾಡ್ತಾ ಇದ್ರು. ಇಲ್ಲಿ ನೋಡ್ದಿದ್ದಾರೂ ಗೌತಮ್ ಬುದ್ಧ ಆಗಲಿಲ್ಲ ನಾನು. ಆ ಹದಿನೈದು ದಿನ, ಯಾವ ಶತ್ರುಗು ಬರೋದು ಬೇಡ. ಆದರೆ ಆಸ್ಪತ್ರೆಯ ಅಷ್ಟು ಜನ ವೈದ್ಯರಿಗೆ, ಆಯಗಳಿಗೆ, ನರ್ಸ್ ಗಳಿಗೆ ನಾನು ಚಿರರುಣಿ. ಇದರಲ್ಲಿ ತುಂಬಾ ತುಂಬಾ ಇದೆ ಹೇಳಲು, ಯಾಕೋ ಇದರ ಬಗ್ಗೆ ಬರಯಲು ಆಗ್ತಿಲ್ಲ. ನರಕ ನೋಡಿ ಬಂದೆ.</div><div dir="auto"><br /></div><div dir="auto">ಅಣ್ಣಂದು ನೆಗೆಟಿವ್ ಬಂದ ಮೇಲೆ ಬೆಂಗಳೂರಿನ ನಾರಾಯಣ ಮಲ್ತಿಸ್ಪೆಷಲಿಟಿ ಕರ್ಕೊಂಡು ಬಂದ್ವಿ. ಅವರಿನ್ನೂ ಪೂರ್ತಿ ಹುಷಾರಾಗಿರಲಿಲ್ಲ. ಅಲ್ಲಿಂದಲೂ ಅಣ್ಣ ಬಂದ್ರು, ಆಮೇಲೆ ಇನ್ನೇನು ಚೇತರಿಸಿಕೊಂಡೆ ಬಿಟ್ರು ಅನ್ನೋ ಅಷ್ಟರಲ್ಲಿ ಅವರು ಇಲ್ಲವಾದರೂ...</div><div dir="auto"><br /></div><div dir="auto">ಮಾರ್ಚ್ ಇಂದ ಜೂನ್ ತಿಂಗಳವರೆಗೆ ಆರು ಜನ ಮನೆಯವರನ್ನು ಕಳೆದುಕೊಂಡೆವು... ಆ ವರ್ಷ ಆ ದಿನಗಳು ಮತ್ತೆಂದೂ ಯಾರಿಗೂ ಬಾರದಿರಲಿ. ನನ್ನ ಕಷ್ಟದ ದಿನಗಳಲ್ಲಿ ನನ್ನೊಟ್ಟಿಗೆ ನಿಂತವರು ತುಂಬಾ ಜನರಿದ್ದಾರೆ, ಅವರಿಗೆಲ್ಲ ನಾನು ಅಬಾರಿ. Thanks ಚಿಕ್ಕಪದ </div><div dir="auto"><br /></div><div dir="auto">ಈಗ ಮತ್ತೆ ಕೇಸ್ ಜಾಸ್ತಿ ಆಗ್ತಾ ಇದೆ. ಕಳೆದ ವರ್ಷದಂತೆ </div><div dir="auto"> Hospitalisation ಅಷ್ಟಿಲ್ಲ. ಹಂಗೆ ಆಗೋದು ಬೇಡ. ಕಳೆದ ವರ್ಷ ಬೆಡ್ ಔಷದಿಗಾಗಿ ರಾತ್ರಿ ಎದ್ದಿರುತ್ತಿದ್ದೂ, ಈಗಲೂ ನಿದ್ದೆ ಬರಲ್ಲ. ಈಗ ಬೇರೆ ಕಾರಣ. ಅಣ್ಣನ ಆಸ್ಪತ್ರೆ ಎಲ್ಲಾ ನೆನಪಾಗತ್ತೆ, ದಿನ, ಅದೇ scene... Trying to come out... ಕಷ್ಟ ಸಾಧ್ಯವಿದೆ....</div><div dir="auto"><br /></div><div dir="auto">ಈ ಮಹಾಮಾರಿ ಬೇಗ ಹೋಗಲಿ, ಎಲ್ಲರಿಗೂ ಅರೋಗ್ಯ ಭಾಗ್ಯ ಕೊಡೊ ಕೃಷ್ಣ 🙏🙏🙏</div><div dir="auto"><br /></div><div dir="auto"><br /></div><div dir="auto"><br /></div><div dir="auto"><br style="font-family: sans-serif; font-size: large;" /></div>Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-26842129352430997502021-04-02T04:04:00.004-07:002021-04-02T04:04:33.914-07:00#RaithaSahaaya<p> </p><p>#RaithaSahaaya <span style="font-family: sans-serif; font-size: 12.8px;">ಕ್ಕೆ </span><span style="font-family: sans-serif; font-size: 12.8px;">ಒಂದು ವರ್ಷ</span></p><p><br /></p><p>ಕಳೆದ ಮಾರ್ಚ್ - ಏಪ್ರಿಲ್ , ಮನೆಯೊಳಗ್ಗೆ ತಣ್ಣಗೆ ಕೂತ ಕಾಲ. ಮನೆಯಿಂದ ಹೊರಹೋಗದೆ , ರಿಪೋರ್ಟಿಂಗ್ ಮಾಡಿದ್ದೆ ಮಾಡಿದ್ದು. ಏಪ್ರಿಲ್ (ಬಹುಶ ಎರಡನೇ ವಾರ ಇರಬಹುದು), ನನ್ನ ಫ್ರೆಂಡ್ ತಮ್ಮ , ಕೇರಳದ ಕಾಸರಗೋಡಿನ ರೈತನೊಬ್ಬ ಬೆಳೆದ ಸೋರೆಕಾಯಿ ಮಾರಾಟವಾಗ್ತಿಲ್ಲ ಅಂತ ಇರೋ ಪೋಸ್ಟ್ ಒಂದು ಫೇಸ್ಬುಕ್ ನಲ್ಲಿ ಹರಿದಾಡುತಿತ್ತು , ಅದಕ್ಕೆ ನಂಗೆ ಟ್ಯಾಗ್ ಮಾಡಿದ್ದ . ನಾನು ಅದನ್ನೇ ಏತಾವತ್ತಾಗಿ ಟ್ವಿಟ್ಟರ್ನಲ್ಲಿ ಹಾಕಿದ್ದೆ .</p><p><br /></p><p>ಅದೇ ದಿನ ಸಂಜೆಯೊಳಕ್ಕೆ ಕೇರಳ ರಾಜ್ಯದ ತೋಟಗಾರಿಕಾ ಮಂತ್ರಿಯವರು ಆ ರೈತನೊಂದಿಗೆ ಮಾತನಾಡಿ ಐದು ಟನ್ ಸೋರೆಕಾಯಿ ತಮ್ಮ ಮಳಿಗೆ (ಇಲ್ಲಿನ ಹಾಪ್ಕಾಮ್ಸ್ ನಂತೆ ಇರುವ ಮಳಿಗೆ ) ಕೊಂಡುಕೊಳ್ಳಲು ಆದೇಶ ಮಾಡಿ ಕೊಂಡುಕೊಂಡರು . ಇದು ನನ್ನ ಟ್ವಿಟ್ ಇಂದ ಅಂತಾನೋ ಅಥವಾ ಬೇರೆಕಡೆ ಇಂದಲೋ ಗೊತ್ತಿಲ್ಲ , ಆದರೆ ಸೋಶಿಯಲ್ ಮೀಡಿಯಾ ಶಕ್ತಿಗೆ ಉದಾಹರಣೆ . ಇದು ಮೊದಲು , ಅದಾದ ನಂತರ ಶುರುವಾಗಿದ್ದೇ #RaithaSahaaya !</p><p><br /></p><p>ಒಂದು ಟ್ವಿಟ್ , ಎರೆಡು ಟ್ವೀಟ್ , ಮತ್ತೊಂದು, ಮಗದೊಂದು , ನಿಲ್ಲಲೇ ಇಲ್ಲ . ಹೆಚ್ಚು ಹೆಚ್ಚು ಜನ ನನ್ನ ಸಂಪರ್ಕಿಸಿದರು , ನಾನು ಟ್ವೀಟ್ ಮಾಡುತ್ತಲೇ ಹೋದೆ . ನಾನು ಟ್ವೀಟ್ ಮಾಡೋದು ಅನ್ನೋದಕ್ಕಿಂತ ನಾನು ಕಲಿಯುತ್ತ ಹೋದೆ . ಪಕ್ಕ ನಗರ ಪ್ರದೇಶ ದಿಂದ ಬಂದವಳಿಗೆ ಕೃಷಿ ಬಗ್ಗೆ , ತೋಟಗಾರಿಕೆ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿಯುತ್ತ ಹೋದೆ , ನಿಜ ಹೇಳಬೇಕೆಂದರೆ ಕಾಮನ್ ಸೆನ್ಸ್ ಕೂಡ ಇಲ್ಲದವಳಿಗೆ , ಇದೆ ರೈತರು ತಿಳಿಸುತ್ತ ಹೋದರು , ಕೆಲವೊಮ್ಮೆ ಸಿಲ್ಲಿ ಸಿಲ್ಲಿ ಪ್ರಶ್ನೇ ಕೇಳಿದ್ದೇನೆ (ಅವರಿಗೆ ಗೊತ್ತಾಗೇ ಇರತ್ತೆ , ಇವಳು ಎಲ್ಲಿಂದ ಬಂದವಳು ಅಂತ ), ಆದರೂ ಸಮಾಧಾನದಿಂದ ಉತ್ತರಿಸಿದರು . ಮಾರಾಟ ಆದಾಗಲೂ , ಮಾರಾಟ ಆಯಿತು ಅಕ್ಕ ಅಂತ ಹೇಳುತ್ತಿದ್ದರು , ಒಂದು ರೀತಿಯ ಆಪ್ಯತೆ ಬೆಳೆದುಕೊಂಡಿತ್ತು . ಮಣ್ಣಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನ ಹಚ್ಚಿದ , ಅಷ್ಟು ಜನ ರೈತಾಪಿಗಳಿಗೆ, ನನ್ನ ಗುರುಗಳಿಗೆ ನಮಸ್ಕಾರ</p><p><br /></p><p>ಕೆಲವೊಮ್ಮೆ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಥವಾ ರಾಜಕಾರಣಿಗಳು ಅಥವಾ ಎನ್ ಜಿ ಓ ಲಾಕ್ಡೌನ್</p><p>ಸಮಯದಲ್ಲಿ ನಗರದ ಬಡವರಿಗೆ ತರಕಾರಿ ಹಂಚಲು ಕೂಡ ಇದೆ #RaithaSahaaya ಬಳಸುತ್ತಿದ್ದರು , ಅವರಿಗೆಲ್ಲ ಆಬಾರಿಯಾಗಿದ್ದೇನೆ . ಈಗೀಗ ಹೋದ ಕಡೆ #RaithaSahaaya ಬಗ್ಗೆ ಕೇಳುತ್ತಾರೆ , ಅದರಿಂದ ಗುರ್ತಿಸುತ್ತಾರೆ . ಮೊನ್ನೆ RSS ಕಾರ್ಯಕ್ರಮಕ್ಕೆ ಹೋದಾಗ , ಅವರ ಯಾವುದೋ ಒಂದು ಪ್ರೆಸೆಂಟೇಷನ್ ನಲ್ಲಿ ನನ್ನ #RaithaSahaaya ಕ್ಲಿಪ್ಪಿಂಗ್ಸ್ ತೋರಿಸಿ , ಸೋಶಿಯಲ್ ಮೀಡಿಯಾ ಸದ್ಬಳಕೆ ಮಾಡಿರುವುದರ ಬಗ್ಗೆ ಉಲ್ಲೇಖಿಸಿದರಂತೆ . ಖುಷಿ ಆಗಿದೊಂತು ನಿಜ .</p><p><br /></p><p>ಹಾಗಂತ ಟೀಕೆ ಮಾಡಿಲ್ಲ ಅಂತಲ್ಲ , ಸಾಕಷ್ಟು ಮಾಡಿದ್ದು ಉಂಟು . ಇಷ್ಟೆಲ್ಲಾ ಟ್ವೀಟ್ ಮಾಡುವವರು , ಎಷ್ಟು ತರಕಾರಿ ಕೊಂಡು ಕೊಂಡಿರಿ , ಹಣ್ಣು ಮಾರಾಟ ಮಾಡಿಸಿದ್ರ ? ನಿಮಗೆ ಎಷ್ಟು ಕಮಿಷನ್ ಕೊಡಬೇಕು ? ನೀವು ದಳ್ಳಾಳಿಯ ಅಂತ ? ಮೊದಲು ಬೇಜಾರು ಆಗ್ತಿತ್ತು , ಈಗ I have learnt to ignore.</p><p><br /></p><p>ಈ ವರ್ಷ ಹದಿನೇಳು ವರ್ಷ ಆಗತ್ತೆ ಪತ್ರಿಕೋದ್ಯಮಕ್ಕೆ ಸೇರಿ . ಒಂದು ವೇಳೆ ಇದೆ ಕೊನೆ ವರ್ಷ ಆದರೂ , ನಾನು ಹಿಂದಿರುಗಿ ನೋಡಿದರೆ , #RaithaSahaaya ನನಗೆ ಅತ್ಯಂತ ಸಮಾಧಾನ ತಂದ ವಿಚಾರವಾಗಿರುತ್ತದೆ .</p>Ashwini M Sripadhttp://www.blogger.com/profile/01699731701824302054noreply@blogger.com5tag:blogger.com,1999:blog-6673691930118722471.post-34151967331328616762021-02-01T09:53:00.000-08:002021-02-01T09:53:10.615-08:00ಈಡುಜೋಡು<p> <span style="font-family: sans-serif; font-size: large;">ಕೋವಿಡ್ ಸಮಯದಲ್ಲಿ ಇದು ಮೂರನೇ ಬಾರಿಗೆ ವಿಧಾನ ಮಂಡಲ ಅಧಿವೇಶನ. ಮದ್ಯಾಹ್ನ ವಿರಾಮದ ನಂತರ ನನಗೆ ಇತ್ತು. ಊಟ ಮಾಡಿ, ಆಟೋ ಹತ್ತಿ, ಸೀದಾ ವಿಧಾನಸೌಧ. ಮೂರು ಕಡೆ ಸೆಕ್ಯುರಿಟಿ ಚೆಕಿಂಗ್. ಯಥಾ ಪ್ರಕಾರ, ಬ್ಯಾಗ್ ಮತ್ತು ಫೋನು ಇಟ್ಟು, ಮೊದಲು ಮೀಡಿಯಾ ಲಾಂಜ್ಗೆ ಹೋದೆ. ಸಹೋದ್ಯೋಗಿ ಸ್ನೇಹಿತರು ಆಗಲೇ ಕಂಪ್ಯೂಟರ್ನಲ್ಲಿ ಟೈಪಿಂಗ್ ಶುರು ಮಾಡಿಕೊಂಡಿದ್ದರು. ನಾನು ಅಲ್ಲಿದ್ದಾಗ ಸಾಮಾನ್ಯವಾಗಿ ಮೊಬೈಲ್ ಇಂದಲೇ ಟೈಪ್ ಮಾಡಿ ಸುದ್ದಿ ಕಳಿಸುತ್ತೇನೆ. ಸ್ನೇಹಿತರೊಬ್ಬರು ಮೊಬೈಲ್ ತಂದು ಇಲ್ಲೇ ಟೈಪ್ ಮಾಡು ಅಂದ್ರು ಅಂತ ಎದ್ದು, ನಾಲ್ಕು ಹೆಜ್ಜೆ ಹಾಕಿದೆ , ಯಾಕೋ ವಿಚಿತ್ರ ಅನ್ನಿಸ್ತು, ಕಾಲ ನಡಿಗೆಯಲ್ಲಿ ಏನೋ ಸರಿ ಇಲ್ಲ ಅಂತ ಭಾವನೆ. ಬಗ್ಗಿ ನೋಡಿದರೆ, ಎರಡು ಕಾಲಿನಲ್ಲಿ ಬೇರೆ ಬೇರೆ ಚಪ್ಪಲಿ. ಒಂದು ಚಪ್ಪಲಿ terrace garden ಗೆ ನೀರು ಹಾಕಲು ಹೋಗುವಾಗ ಧರಿಸುವಂತದು, ಮಣ್ಣು ಮಯ ಆಗಿರುವ ಚಪ್ಪಲಿ ಮತ್ತೊಂದು</span></p><div dir="auto" style="font-family: sans-serif; font-size: large;">ನನ್ನ ಬಾಟ ಚಪ್ಪಲಿ. ಭಗವಂತ !</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಅಲ್ಲೇ ಅರ್ಧ ಜೀವ ನಿಂತೋಯ್ತು. ವಿಧಾನ ಸೌಧದಲ್ಲಿ ಅಧಿವೇಶನಕ್ಕೆ ಬೇರೆ ಬೇರೆ ಚಪ್ಪಲಿ ಧರಿಸಿ</div><div dir="auto" style="font-family: sans-serif; font-size: large;">ಬಂದ ಮೊದಲ ಪತ್ರಕರ್ತೆ ನಾನೇ ! ಸೆಕ್ಯೂರಿಟಿ ಹತ್ರ ಹೋಗಿ ಫೋನ್ ತೆಗೆದುಕೊಂಡು ಬರಲು ಏನೋ ಅಳಕು, ಅಲ್ಲಿಗೆ ಹೋಗದೆ ಸೀದಾ ಮೀಡಿಯಾ ಲಾಂಜ್ ಗೆ ಬಂದೆ. ಸ್ನೇಹಿತರಿಗೆ ತೋರಿಸಿದೆ, ಅದೊಂಥರಾ ಸ್ಟೈಲ್ , ಏನು ಆಗಲ್ಲ ಅಂತ ಹೇಳಿ ಕಳಿಸಿದರು. ಸೆಕ್ಯುರಿಟಿ ಹತ್ರ ಹೋಗಿ ಫೋನ್ ತೊಗೊಂಡು ಬಂದೆ. ಇಡೀ ವಿಧಾನಸೌಧ ನನ್ನನೇ ನೋಡ್ತಾ ಇದೆ ಅಂತ ಭಾವನೆ, ಎಲ್ಲರೂ ಅವರವರ ಕೆಲ್ಸ ಮಾಡುತ್ತಿದ್ದರು, ಕಳ್ಳನ ಮನಸ್ಸು ಹುಳ್ಳಗೆ. ಚಪ್ಪಲಿ ತೆಗೆದು ಬಚ್ಚಿಟ್ಟು ಚಕ್ಕಲಮಕ್ಕಲ ಹಾಕಿ ಕೂತೆ. ಸಿದ್ದರಾಮಯ್ಯ, ಬೊಮ್ಮಾಯಿ ಮಾತಾಡ್ತಾ ಇದ್ರೆ, ನಂಗೆ ನನ್ನ ಚಪ್ಪಲಿಯದೆ ಕನವರಿಕೆ. ರೇವಣ್ಣ ಅವರ ತರ ಬರಿ ಕಾಲಲ್ಲಿ ನಡೆದು ಬಿಡಲೇ? ಯಾಕೋ ಸರಿ ಅನ್ನಿಸಲಿಲ್ಲ</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಹಾಗೆ 5.30 ಎದ್ದೆ, ಬಜೆಟ್ ಕಾಪಿ ಕೂಡ ಇತ್ತು. ಆಫಿಸ್ಗೆ ಹೋಗಬೇಕಿತ್ತು. ಎರೆಡನೆ ಮಹಡಿ ಇಂದ ಇಳಿಯಲು ಲಿಫ್ಟ್ ಹತ್ರ ಬಂದೆ, ಜನವೋ ಜನ. ಅವರ ದೃಷ್ಟಿ ಎಲ್ಲ ಕೆಳಕ್ಕೆ ಇಳಿಯುವ ನಂಬರ್ ಮೇಲೆ ಇದ್ರು, ನನನ್ನೇ ನೋಡ್ತಾ ಇದ್ದಾರೆ ಅಂತ ಭಯ. ಸರಿ ಮೆಟ್ಟಿಲು ಇಳಿದು ಹೋಗೋಣ ಅಂದ್ರೆ , ಎರೆಡು ಚಪ್ಪಲಿ ಸಪ್ಪಳ ಬೇರೆ ಬೇರೆ , ಸ್ವರ ಸೇರುತ್ತಲೇ ಇರಲಿಲ್ಲ. ಹಾಗೆ ಬಂದೆ ಕೆಳಕ್ಕೆ, ಯಾರು ಸಿಗಬಾರದಪ್ಪ ಅಂತ ದೇವರಲ್ಲಿ ಕೇಳಿದ್ದೆ ಕೇಳಿದ್ದು, ಪುಣ್ಯ ಯಾರು ಸಿಗಲಿಲ್ಲ. ವಿಧಾನಸೌಧದ gate ಹೊರ ಬಂದೆ, ಅಲ್ಲಿಂದ ನಮ್ಮ ಆಫೀಸ್ನ್ನ್5 ನಿಮಿಷ ನಡಿಗೆ, ಯಾಕೋ ರಿಸ್ಕ್ ಬೇಡ, bus ನಲ್ಲಿ ಹೋಗಣ, ಒಂದೇ ಸ್ಟಾಪ್ ಅನ್ನಿಸಿತು. ನನ್ನ ದುರದೃಷ್ಟ , ಬಸ್ ಬರಲಿಲ್ಲ, ಅಲ್ಲೇ ಇದ್ದ ಆಟೋ ಹತ್ತಿ ನೆಕ್ಸ್ಟ್ ಸ್ಟಾಪ್ ಅಂದೆ, ವಿಚಿತ್ರವಾಗಿ ನೋಡಿದ. ನನ್ನಗೆ ಚಪ್ಪಲಿಯದ್ದೇ ಚಿಂತೆ. </div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಆಫಿಸ್ಗೆ ಬಂದು, ನಮ್ಮ ಚೀಫ್ ಮತ್ತು ಸಹೋದ್ಯೋಗಿಗಳಿಗೆ ನಾನೇ ತೋರಿಸಿಬಿಟ್ಟೆ, ಒಂತರ ಅವರು ನೋಡಿ ಕೇಳಿವ ಮೊದಲು ನಾನೇ ಹೇಳಿಬಿಟ್ಟರೆ, embarassment ಇರಲ್ಲ ಅಂತ. ಅವರೆಲ್ಲರೂ ಇದೊಂಥರಾ ಫ್ಯಾಷನ್ ಅಂದ್ರು. ಚ್ಚಪ್ಪಳಿಗೆ ಹಿಡಿ ಶಾಪ ಹಾಕಿದೆ. ಇದು ಮೊದಲ ಬಾರಿಗೆ ಆಗಿದಲ್ಲ, ಸುಮಾರು ಒಂದು ತಿಂಗಳ ಹಿಂದೆ ಹಿಂಗೆ ಹಾಕಿ ಹೋಗಿದ್ದೆ, ಆದರೆ ಮನೆಯ ಮೆಟ್ಟಿಲು ಇಳಿಯುವಾಗ ನೋಡಿಕೊಂಡಿದ್ದೆ. ಆಚೆ ಕಾಫಿಗೂ ಹೋಗಕ್ಕೆ ಭಯ. ಗೊತ್ತಿರುವ ಸಹೋದ್ಯೋಗಿ, ಗೊತ್ತಿರದ ಸಹೋದ್ಯೋಗಿಗಳಿಗೆ ಈ ಕತೆ ಹೇಳಿದ್ದೆ ಹೇಳಿದ್ದು. ಕೆಲವರು ತಮ್ಮ ಚಪ್ಪಲಿ ಕತೆ ಹೇಳಿದರು.</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಕೆಲ್ಸ ಮುಗಿಸಿ ಮತ್ತೆ ಆಟೋ ಹತ್ತಿದೆ. ಈ ಬಾರಿ ಕಾಲ್ ಮೇಲೆ ಕಾಲು ಹಾಕಿದೆ. ಒಂದು ಕಾಲು ಕೆಳಕ್ಕೆ ಇತ್ತು, ಇನ್ನೊಂದು ಕಾಲು ಮೇಲೆ ಹಾಕಿಕೊಂಡಿದ್ದೆ. ಸಿಗ್ನಲ್ನಲ್ಲಿ ಆಟೋ ನಿಂತರು ಜನಕ್ಕೆ ನನ್ನ ಒಂದೇ ಚಪ್ಪಲಿ ಕಾಣುವಂತೆ . As if ಜನಕ್ಕೆ ಬೇರೆ ಕೆಲಸ ಇಲ್ಲ ನೋಡಿ...</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಮನೆಗೆ ಬರ್ತಿದ್ದ ಹಾಗೆ ಕುಂಭ ಮೇಳದಲ್ಲಿ ಅದಲು ಬದಲು ಆಗುವ ಅವಳಿ ಜವಳಿ ಮತ್ತೆ ಒಂದಾಗುವಂತೆ ಅದರ ಜೋಡಿ ಪಕ್ಕ ಇಟ್ಟೆ. ಸಂಮಿಶ್ರ ಸರ್ಕಾರದಂತೆ ಇವತ್ತಿನ ಈ ನಡಿಗೆ ಇಲ್ಲಿಗೆ ಸಂಪೂರ್ಣ</div>Ashwini M Sripadhttp://www.blogger.com/profile/01699731701824302054noreply@blogger.com7tag:blogger.com,1999:blog-6673691930118722471.post-69641744562997130422020-09-29T21:28:00.003-07:002020-09-29T21:28:43.537-07:00Breaking news and rumours<p> <span style="font-family: sans-serif; font-size: large;">ರುಮರ್ ಎಂಬಾ ಮಹಾಮಾರಿ ....</span></p><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;"><br /></div><span style="font-family: sans-serif; font-size: large;">ಆಗೆಲ್ಲ ಎರಡು ನ್ಯೂಸ್ ಚಾನೆಲ್ ಮತ್ತು ದೂರದರ್ಶನ. ಪ್ರೆಸ್ ಮೀಟ್ ಅಂದ್ರೆ ಬರಿ ಪತ್ರಿಕೆಯವರು ಅನ್ನೋ ಕಾಲ. ನ್ಯೂಸ್ ಚಾನೆಲ್ ಆದ್ರೂ ದಿನಕ್ಕೆ ಒಮ್ಮೆ ಮಾತ್ರ ಬುಲೆಟಿನ್. ನಮ್ಮಂತೆ , ನಾವು ದಿನಕ್ಕೊಂದು ಪತ್ರಿಕೆ ತಂದಂತೆ , ದಿನದಲ್ಲಿ ಒಮ್ಮೆ ಮಾತ್ರ ನ್ಯೂಸ್ ಬುಲೆಟಿನ್. ಒಂದೇ ದಿನಕ್ಕೆ ಇದ್ದ ನ್ಯೂಸ್ ಬುಲೆಟಿನ್, ದಿನಕ್ಕೆ ಮೂರು ಬಾರಿ ಶುರು ಮಾಡಿದ್ದರು.</span><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ನಾವು ಯಾವುದೋ ಪ್ರೆಸ್ ಮೀಟ್ ಇದ್ದರೆ, ಒಮ್ಮೊಮ್ಮೆ ಇತರೆ ಪತ್ರಿಕೆಯವರು ಹಾಗೆ</div><div dir="auto" style="font-family: sans-serif; font-size: large;">ಕಾಫಿ ಕುಡಿದು ಹೋಗ್ತಾ ಇದ್ವಿ. ದಿನಕ್ಕೆ ಮೂರು ದಿನ ಬುಲೆಟಿನ್ ಶುರು ಮಾಡಿದ ಮೇಲೆ ಟಿವಿ ಪತ್ರಕರ್ತರು ಬುಲೆಟಿನ್ ಶುರು ಆಗತ್ತೆ, deadline ಇದೆ ಅಂತೆಲ್ಲ ಬೇಗ ಬೇಗ ಹೋಗ್ತಾ ಇದ್ರು. ಕಾಫಿ ಕುಡಿಯಕ್ಕೂ ಬರ್ತಾ ಇರಲಿಲ್ಲ. ಆಗೆಲ್ಲ ಅವರಿಗೂ ಹೊಸತು. ನಾನು ಪೇಪರ್ ಪತ್ರಕರ್ತರು ಅವರನ್ನು ನೋಡಿ ನಕ್ಕು, ಸದ್ಯ ನಮಗೆ ಈ ಕಷ್ಟ ಇಲ್ಲ ಅಂತ ಇದ್ವಿ.</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಕಾಲ ಹಂಗೆ ಇರಲ್ಲ. ದಿನಕ್ಕೆ ಮೂರು ಹೊತ್ತು ಬುಲೆಟಿನ್ ನೀಡುವವರು ದಿನದ ಇಪ್ಪತ್ತು ನಾಲ್ಕು ಗಂಟೆಗೆ ಬದಲಾದರು. ಅವರ ಹಾವಳಿಯಲ್ಲಿ, ಪತ್ರಿಕೆ ಪತ್ರಕರ್ತರಿಗೆ ತಾವು ಪತ್ರಕರ್ತರು ಅಂತ ಹೇಳಿದರೆ ಮೈಕ್ ಎಲ್ಲಿ ಅಂತ ಕೇಳುವಷ್ಟು ಜನರ ಮನಸ್ಸಿನಲ್ಲಿ ಮಾಧ್ಯಮದ ಚಿತ್ರಣ ಬದಲಾಯಿತು. </div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಸುದ್ದಿ ಕೊಡುವಲ್ಲಿ ಅವರಿಗೆ ಸಮಾ ಸಮಾ ಓಡಬೇಕಾದ ಪರಿಸ್ಥಿತಿ ಬಂತು. ಬೆಳಿಗ್ಗೆ ಆದ ಪ್ರೆಸ್ ಮೀಟ್, ಕಾರ್ಯಕ್ರಮ ಸಂಜೆ ಕೊಡ್ತಾ ಇದ್ದ ನಾವುಗಳು, ಅದು ಮುಗಿದ ಕೂಡಲೇ online ಕೊಡಬೇಕಾದ ಪರಿಸ್ಥಿತಿ ಬಂತು. ಮುಂದೆ ಅದೇ ಟ್ವಿಟ್ಟರ್ ತನಕ ಬಂತು. ನಾವು breaking ನ್ಯೂಸ್ ಕೊಡಬೇಕಾಗಿ ಬಂತು.</div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಇದೆಲ್ಲ ಯಾಕೆ ನೆನಪಾಯಿತು ಅಂದ್ರೆ ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರು ಕೋವಿಡ್ ಇಂದ ಮರಣ ಹೊಂದಿದರು. ಅವರು ಇನ್ನು ಉಸಿರಾಡುತ್ತಿದ್ದಾಗಲೇ ಹೋಗಿಬಿಟ್ಟರೆಂಬ ಸುದ್ದಿ ಬಂತು. ಟಿವಿ ಅವರೆಲ್ಲರೂ ಬ್ರೆಅಕಿಂಗ್ ನ್ಯೂಸ್ ನಲ್ಲಿ ಕೊಟ್ಟೆ ಬಿಟ್ಟರು. ಅದನ್ನು ನೋಡಿ ರಾಜಕೀಯ ನೇತಾರರು ತಮ್ಮ ಖಾತೆಯಲ್ಲಿ ಶ್ರದ್ಧಾಂಜಲಿ ಹೇಳಿಬಿಟ್ಟರು. </div><div dir="auto" style="font-family: sans-serif; font-size: large;"><br /></div><div dir="auto" style="font-family: sans-serif; font-size: large;">ಸುದ್ದಿ ಮತ್ತು ರುಮರ್ ನಡುವೆ ಯಾವಾಗಲೂ ಯುದ್ಧ. ಸಮಯ ಕಡಿಮೆ ಇರುತ್ತದೆ. ಪುಣ್ಯಕ್ಕೆ, ನಾವು ಟ್ವಿಟ್ಟರ್ ನಲ್ಲಿ ಹಾಕಿರಲಿಲ್ಲ. ಆಸ್ಪತ್ರೆಯವರಿಗೆ ಕೇಳಿದಾಗ, ಅವರು ಬದುಕಿದ್ದ ಬಗ್ಗೆ ಮಾಹಿತಿ ಕೊಟ್ಟರು. ನಮ್ಮ express handle ಇಂದ ಹಾಕಲಿಲ್ಲ . ಸುದ್ದಿ, ಸುಳ್ಳು ಸುದ್ದಿ ಮದ್ಯೆ ತುಂಬಾ ಅಂತರವಿದ್ದರೂ, ತುಂಬಾ ಸರ್ತಿ ಅದು ಕಾಣೋದೆ ಇಲ್ಲ. </div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-67705180377649661242020-09-27T01:38:00.003-07:002020-09-27T01:38:31.019-07:00Twitter politics<p> </p><div class="mail-message expanded" id="m#msg-a:r-6960906914420935471" style="font-family: sans-serif; font-size: 12.8px;"><div class="mail-message-header spacer" style="height: 80px;"></div><div class="mail-message-content collapsible zoom-normal mail-show-images " style="margin: 16px 0px; overflow-wrap: break-word; user-select: auto; width: 328px;"><div class="clear"><div dir="auto"> ಟ್ವಿಟ್ಟರ್ ಅಕೌಂಟ್ ತೆಗೆದು ತುಂಬಾ ವರ್ಷಗಳೆ ಆಗಿವೆ, ಯಾಕೋ ಅದು ನನಗೆ ಹಿಡಿಸ್ತಾ ಇರಲಿಲ್ಲ. ಆದ್ರೆ ಇತ್ತೀಚೆಗೆ ಮೂರು ವರ್ಷಗಳಿಂದ ಕಚೇರಿಯಲ್ಲಿ ಸೋಷಿಯಲ್ ಮಿಡಿಯಾಗೆ ಒತ್ತು ಕೊಡಬೇಕಾಗಿ ಬಂದಾಗ, ಅನಿವಾರ್ಯ ಕಾರಣದಿಂದ ಕಲಿಯಲು ಆರಂಭಿಸಿದೆ. ಬಹುತೇಕ ಜನರಲ್ಲಿ, ಮಾಧ್ಯಮದವರು ಅಂದಾಗ ಯಾವುದೇ ಪಕ್ಷದ ಬಗ್ಗೆ ಒಲುವು ಇರುವವರು ಅಂತ ಅಂದುಕೊಳ್ತಾರೆ, ಅದು ಬಾಗಶ ನಿಜ ಕೂಡ. ನಂಗೆ ರಾಜಕೀಯ , ಅತಿಯಾದ ರಾಜಕೀಯ, ಪ್ರತಿಯೊಂದು ವಿಷಯಕ್ಕೂ ರಾಜಕೀಯ ಬೆರೆಸೋದು ಅಸಯ್ಯದ ವಿಷಯ. ನಾನು ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ನೇತಾರರನ್ನು<div dir="auto">ಎಷ್ಟು ಬೈಯ್ದುಕೊಂಡಿದ್ದೇನೋ, ಅಷ್ಟೇ ಒಳ್ಳೆ ಮಾತು ಆಡಿದ್ದೇನೆ, ಪಕ್ಷದ ಹೊರತಾಗಿ. ಇದರ ದೊಡ್ಡ ಸಮಸ್ಯೆ ಅಂದರೆ , ಸಾಮಾನ್ಯವಾಗಿ ಅವರಿಗೆ ಬೇಕಾಗುವ ಪಕ್ಷದವರನ್ನು ಹಿಯಾಳಿಸಿದರೆ , ನನ್ನನ್ನು ಮತ್ತೊಂದು ಪಕ್ಷದ ಪರವಾಗಿ ಬರೆಯುವ ಪತ್ರಕರ್ತೆ ಅಂಥ ಬ್ರಾಂಡ್ ಮಾಡಿಕೊಳ್ಳುತ್ತಾರೆ . ಇದು ಎಲ್ಲ ಪಕ್ಷದ follower ಗೂ ಅನ್ವಯ . </div><div dir="auto"><br /></div><div dir="auto">ಇತ್ತೀಚೆಗೆ ಬಿಜೆಪಿಯ ಎಂಪಿ ಕನ್ನಡ ಹಾಡೊಂದನ್ನು ಹೇಳಿದನ್ನು tweet ಮಾಡಿದ್ದೆ, ಜೆಡಿಎಸ್ ಹಿಂಬಾಲಕನೊಬ್ಬ ಬಿಜೆಪಿ ಏಜೆಂಟ್ ಅಂದ. ಅದಾಗಿ ಎರೆಡು ದಿನಕ್ಕೆ ಜೆಡಿಎಸ್ ಶಾಸಕನೊಬ್ಬ ಉಳುಮೆ ಮಾಡುತಿದ್ದ, ಬಿಜೆಪಿ ಹಿಂಬಾಲಕರು ಜೆಡಿಎಸ್ ಪತ್ರಕರ್ತೆ ಅಂದರು. ಒಮ್ಮೆ ಬೆಂಗಳೂರಿನ ರಿಂಗ್ ರಸ್ತೆ ನಯಂಡಹಳ್ಳಿ ಇಂದ ನಾಯಂಡಹಳ್ಳಿ ವರೆಗೆ ನಾಲ್ಕು ಗಂಟೆ ಓಡಾಡಿ, ರಸ್ತೆ ಗುಂಡಿ ಬಗ್ಗೆ ಲೇಖನ tweet ಮಾಡಿದ್ದೆ. ಆಗ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಹಿಂಬಾಲಕನೊಬ್ಬ ಮಧ್ಯಪ್ರದೇಶಕ್ಕೆ ಬಂದು ನೋಡಿ , ನಿಮ್ಮ ಬಿಜೆಪಿ ಮುಖ್ಯಮಂತ್ರಿ ಸರಕಾರ ಇದೆ. ರಸ್ತೆಗಳು ಕೆಟ್ಟದಾಗಿದೆ. ಅದು ನಿಮ್ಮ ಕಣ್ಣುಗೆ ಕಾಣೋದಿಲ್ಲ. ಕೇವಲ ಕಾಂಗ್ರೆಸ್ ಬಗ್ಗೆ ಯಾಕೆ ಅಂತ . ಇಂದಿರಾ canteen ಬಡವರಿಗೆ ಅನುಕೂಲ ಆಗುತ್ತಿದೆ ಅಂತ ಹೇಳಿದಾಗ, ಬಿಜೆಪಿ ಹಿಂಬಾಲಕರು ಕಾಂಗ್ರೆಸ್ ಅಂದ್ರು. </div><div dir="auto"><br /></div><div dir="auto">ನನ್ನ ಬಗ್ಗೆ ಕಾರಣಾಂತರದಿಂದ ಪ್ರತಿ ಪಕ್ಷದ ಶಾಸಕ /ಶಾಸಕಿ ಮುನಿಸಿಕೊಂಡಿದ್ದು ನಿಜ. ಅವರ ಬಗ್ಗೆ ಸರಿಯಾಗಿ ಬರೆದಿಲ್ಲ ಅಂತ. ನಾನಿರೋದು ಯಾವುದೇ ಪಕ್ಷದ ಗುಣಗಾನ ಮಾಡಕ್ಕೆ ಅಲ್ಲ, ಹಾಗಂತ ಯಾವಾಗಲೂ ತಪ್ಪು ಹುಡುಕುವುದಷ್ಟೇ ನನ್ನ ಕೆಲಸ ಅಲ್ಲ.</div><div dir="auto"><br /></div><div dir="auto">ಇನ್ನು ಕೆಲವರು ಮಾಧ್ಯಮ ಅಂದರೆ ತಮ್ಮದೇ ಒಂದು ನಿಲುವು . ನನ್ನ ಪತ್ರಿಕೆ ಯಿಂದ , ನಾನು ಹುಟ್ಟಿದ ಜಾತಿಯಿಂದ ಅಥವಾ ನಾನು ಬಂದ ಊರಿಂದ ನೋಡಿ ಅಳೆಯುತ್ತಾರೆ. ನಿಮ್ಗೆ ಏನ್ರಿ ಗೊತ್ತು ಹಳೆ ಮೈಸೂರಿನವರಿಗೆ, ಅದರ ಬಿಟ್ಟು ಆಚೆ ಬರೋದೆ ಇಲ್ಲ ಅಂತಾರೆ. (ನಾನು ಹುಟ್ಟಿದ್ದೇ ಬೀದರ್ ನಲ್ಲಿ .) ಇಲ್ಲ ಅಂದ್ರೆ ನೀವು ಬ್ರಾಹ್ಮಣರು ಹಿಂಗೆ ಅಂಥ ಹಿಯಾಳಿಸ್ತಾರೆ (ನಾನು ಜಾತಿ ಬಗ್ಗೆ application ಹಾಕಿ ಹುಟ್ಟುದವಳು ಅಲ್ಲ ). ನೀವು ಇಂಗ್ಲಿಷ್ ಪತ್ರಿಕೆ ಅವರಿಗೆ ಕನ್ನಡದ ಬಗ್ಗೆ ಎನ್ ಗೊತ್ತು ಅಂತಾರೆ (ನಾನು ಕನ್ನಡದ ಪರವಾಗಿ ಪತ್ರಿಕೆಯಲ್ಲಿ ಸಾಧ್ಯ ಆದಷ್ಟು ಲೇಖನ ಬರೆದದ್ದು ಕಾಣಿಸೋದೆ ಇಲ್ಲ ಅವರಿಗೆ ). </div><div dir="auto"><br /></div><div dir="auto">ಇಷ್ಟೆಲ್ಲದ್ದರ ನಡುವೆ, ನನ್ನದೇ ನಿಲುವಿಗೆ, ನನ್ನದೇ ಚಿಕ್ಕ ಪ್ರಯತ್ನಕ್ಕೆ ಪ್ರೊತ್ಸಾಹಿಸುವ ಮನಸುಗಳಿವೆ. ರೈತ ಸಹಾಯಕ್ಕೆ ಬೆನ್ನು ತಟ್ಟಿದ್ದಾರೆ. ಆವರಿಗೆಲ್ಲಾ ಅಬಾರಿ ! </div><div dir="auto"><br /></div><div dir="auto"><br /></div><div dir="auto"><br /></div><div dir="auto"><br /></div><div dir="auto"><br /></div><div dir="auto"><br /></div></div></div></div><div class="mail-message-footer spacer collapsible" style="height: 0px;"></div></div>Ashwini M Sripadhttp://www.blogger.com/profile/01699731701824302054noreply@blogger.com9tag:blogger.com,1999:blog-6673691930118722471.post-49439127894088901042019-07-03T03:26:00.000-07:002019-07-03T03:26:36.265-07:00<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEixHX5JQYUJa5Rn2M8ztBWsX7iO5-kp2HCU02Bgp-oPb9Cgdi8cHKLm8Jm8rl42WGpXo44lVK0TdARGUQ-BT7q04wlP6y_np6dg6Rbmd_4cm_r_UzO99orGF7fl0OFiL2eyrzJW3U7Rvp0/s1600/journalist-news-reporter-interview-camera-260nw-404419120.jpg" imageanchor="1" style="margin-left: 1em; margin-right: 1em;"><img border="0" data-original-height="280" data-original-width="349" height="256" src="https://blogger.googleusercontent.com/img/b/R29vZ2xl/AVvXsEixHX5JQYUJa5Rn2M8ztBWsX7iO5-kp2HCU02Bgp-oPb9Cgdi8cHKLm8Jm8rl42WGpXo44lVK0TdARGUQ-BT7q04wlP6y_np6dg6Rbmd_4cm_r_UzO99orGF7fl0OFiL2eyrzJW3U7Rvp0/s320/journalist-news-reporter-interview-camera-260nw-404419120.jpg" width="320" /></a></div>
<br /><br />ಪತ್ರಿಕೋದ್ಯಮ ಓದುವಾಗ , ಟಿವಿ ಮತ್ತು ರೇಡಿಯೋ ಬಗ್ಗೆ ಒಂದು ಸಬ್ಜೆಕ್ಟ್
ಇತ್ತು . ವಿಭಾಗದಲ್ಲಿ ಒಂದು ಸ್ಟುಡಿಯೋ ಕೂಡ ಇತ್ತು, ಹೆಣ ಭಾರ ಕ್ಯಾಮೆರಾಗಳು,
ಎಡಿಟಿಂಗ್ ರೂಮುಗಳು , ಅವೆಂದು ನಂಗೆ ಆಕರ್ಷಿಸಲೇ ಇಲ್ಲ . ಕ್ಯಾಮೆರಾ ಮುಂದೆ
ಹಿಂಜರಿಕೆಯೂ, ಭಯವೋ ಗೊತ್ತಿಲ್ಲ . ಕಳೆದ ಹದಿನೈದು ವರ್ಷದಲ್ಲಿ ಪತ್ರಿಕೆ ಬಿಟ್ಟು, ಟಿವಿ
ಮುಂದೆ ಹೋಗುವಂತಹ ಸಾಹಸ ಮಾಡಲೇ ಇಲ್ಲ . ಕನ್ನಡ ಮಾತನಾಡುವ ಇಂಗ್ಲಿಷ್ ಬಲ್ಲ
ಪತ್ರಕರ್ತೆ ಅಂತಾನೋ ಏನೋ, ಸುಮಾರು ಟಿವಿ ನ್ಯೂಸ್ ಚಾನ್ನೆಲ್ ಇಂಗ್ಲಿಷ್ ಮತ್ತು
ಕನ್ನಡದಿಂದ ಆಫರ್ ಅಂತ ಬಂತು, ಹೋಗಲಿಲ್ಲ . ಪುಕ್ಕಲು ಪತ್ರಕರ್ತೆ , ಪೆನ್ನು ಮತ್ತು
ಪೇಪರ್ ಅಷ್ಟೇ ನೆಚ್ಚಿಕೊಂಡಿದ್ದೆ . ಬಹುಶ ನಾನು ಕ್ಯಾಮೆರಾ ಮುಖ ಮಾಡಿದ್ದು ನನ್ನ
ಮದುವೆಯಲ್ಲಿ ಅಂತ ಕಾಣತ್ತೆ , ಅದರಲ್ಲಿ ಬೇರೆ ವಿಧಿ ಇರಲಿಲ್ಲ . ಬಡಪಾಯಿ ಪತ್ರಿಕೆ ,
ಮಾಧ್ಯಮ ಕ್ಷೇತ್ರದ ಸ್ಪರ್ಧೆಯಲ್ಲಿ ,ನೋಡ ನೋಡುತ್ತಿದ್ದಂತೆ ರಾಕ್ಷಸನ ಹೊಟ್ಟೆಯಂತೆಏನೇನೋ
ಕೇಳುತ್ತ ಹೋಯಿತು . ಮೊದಲು ಆನ್ಲೈನ್ ಅಂದ್ರು, ಸರಿ ಅಂತ ಕೊಟ್ಟೆವೋ. ಮತ್ತೆ ಸೋಶಿಯಲ್
ಮೀಡಿಯಾ ಬಂದ ಮೇಲೆ ಫೇಸ್ಬುಕ್, ಟ್ವಿಟ್ಟರ್ ಅಂತೆಲ್ಲ ಹಾಕಬೇಕಾಯ್ತು, ಅದಕ್ಕೂ
ಒಪ್ಪಿಕೊಳ್ಳಲೇ ಬೇಕಾಯ್ತು . ವಾಟ್ಸಪ್ಸ್ ಬಂತು, ಮತ್ತಷ್ಟು ಹಿಂಸೆ , ಈಗ ನಾವು ದೃಶ್ಯ
ಮಾದ್ಯಮಕ್ಕೆ ಒಗ್ಗಬೇಕು ಅಂದಿದ್ದಾರೆ . ನನಗೋ ಜೀವ ಬಾಯಿಗೆ ಬಂದಂತೆ . ಕಳೆದ ತಿಂಗಳು
ಸಂಸ್ಕೃತ ಮಾತನಾಡುವ ಡ್ರೈವರ್ ಒಬ್ಬರ ಸ್ಟೋರಿ ಮಾಡಿದ ಮೇಲೆ , ಚೆನ್ನೈ ಆಫೀಸ್ ಇಂದ
ವಿಡಿಯೋ ಮಾಡ್ಬೇಕು , ಅದರಲ್ಲಿ ನಾನು ಮಾತನಾಡಬೇಕು ಅಂತ ತಾಕಿತ್ತು ಮಾಡಿದ್ದರು . ನಿಜ
ಹೇಳಬೇಕೆಂದರೆ ಒಂದೆರೆಡು ದಿನ ನಿದ್ದೆ ಬಾರದಂತೆ ಆಗಿದ್ದು ನಿಜ . ಮಗಳ ಶಾಲಾ ಸ್ಪರ್ಧೆಗೆ
ಹಾಗೆ ಮಾತಾಡು, ಹೀಗೆ ಮಾತಾಡು ಅಂತ ಹೇಳೋದು ಸುಲಭ , ಬಟ್ ನಾವು ಮಾಡಬೇಕಲ್ಲ , ಬಾರಿ ಭಯ
. ನಮ್ಮ ಸಂಪಾದಕರಿಗೂ ಗೊತ್ತಾಗಿ , ಪತ್ರಿಕೋದ್ಯಮ ಸದಾ ಕಲಿಬೇಕು , ಕಲಿತಾಯಿರಬೇಕು ಅಂತ
ಹೇಳಿದ್ದಕ್ಕೆ ಹೂ ಅನ್ನೋದು ಬಿಟ್ಟು ಬೇರೇನೂ ಹೇಳಕ್ಕೆ ಆಗಲಿಲ್ಲ . ಮನೆಯಲ್ಲಿ ಒಂದು
ಹತ್ತು ಸರ್ತಿ ಸೆಲ್ಫಿ ವಿಡಿಯೋ ಮಾಡಿದ್ದೆ ಮಾಡಿದ್ದು , ನಾಲಗೆ ಒಣಗ್ತಾ ಇತ್ತು . ಇದೆ
ಹಿಂಗೇ ಆಗತಿದ್ದೆ , ಮುಂದೇನಾಪ್ಪ ಅನ್ಕೊಂಡೆ. ನನ್ನ ಆಫೀಸ್ ನ ಹಿರಿಯ ಸಹೋದ್ಯೋಗಿ ಬಂಸಿ
ಅವರು ಟಿವಿ ಇಂದ ಬಂದವರು , ಹೀಗೆ ಮಾತನಾಡಬೇಕು ಅಂತ ಹೇಳೋದಲ್ಲದೆ, ಒಂದೆರೆಡು ಸಾರಿ
ಪ್ರಾಕ್ಟೀಸ್ ಕೂಡ ಮಾಡಿಸಿದರು . ಜೊತೆಗೆ ಅನುಷಾ ನನ್ನ ಸಹೋದ್ಯೋಗಿ ಟಿಪ್ಸ್ ಕೂಡ
ಕೊಟ್ಟರು. ಭಯ ಎಲ್ಲಿ ಹೋಗ್ಬೇಕು ? ಹಾಗೆ ಇತ್ತು . ಸಂಜೆ ಶೂಟಿಂಗ್ ಗೆ ಹೋಗಾಯ್ತು . ಅವರ
ಮನೆ ಇದ್ದದ್ದು ಕುರುಬರಹಳ್ಳಿ , ಸಣ್ಣ ರಸ್ತೆ . ಅವರಿಗೆ ಹೇಳಿ ಸ್ವಲ್ಪ ಜನ ನಿಭಿಡ
ಜಾಗದಲ್ಲಿ ಶೂಟಿಂಗ್ ಮಾಡೋಣ ಅಂತ ಕರ್ಕೊಂಡು ಹೋದೆವು , ಅಲ್ಲೊಂದು ರಸ್ತೆ . ಜನ ಅಷ್ಟಾಗಿ
ಇರಲಿಲ್ಲ . ಏನೋ ಧೈರ್ಯ ಮಾಡಿ ಅಲ್ಲೇ ಮಾಡೋದು ಅಂತ ಆಯಿತು. ಅವತ್ತಿನ ದೊಡ್ಡ ಧೈರ್ಯ
ಇದ್ದದ್ದು ನಮ್ಮ ಫೋಟೋಗ್ರಾಫರ್ ಕಮ್ ವಿಡಿಯೋಗ್ರಾಫರ್ ನಾಗರಾಜ ಗಡೆಕಲ್. ಕಾಮೆರಾ,
ಟ್ರೈಪಾಡ್ ಹಾಕುತ್ತಿದ್ದಂತೆ ಎಲ್ಲಿದ್ದರೋ ಏನೋ , ಚಿಲ್ಟಾ ಪಿಲ್ಟಿ ಎಲ್ಲರು ಬಂದು ನಿಂತು
ಬಿಟ್ಟರು, ಅವರಿಗೆಲ್ಲ ಸಿನೆಮಾ ಶೂಟಿಂಗ್ ನೋಡುವ ರೇಂಜ್ ನಲ್ಲಿ . ಜೀವ
ಹೊರಟೇಹೋಗತ್ತೆನೋ ಅಂತ ಆಗಿತ್ತು, ನೀರಲ್ಲಿ ಇಳಿದವಳಿಗೆ ಚಳಿಯೇನು , ಬಿಸಿಲೇನು ಅಂತ
ದೇವರ ಮೇಲೆ ಭಾರ ಹಾಕಿ ಶುರು ಮಾಡಿದೆ . ಅಷ್ಟರಲ್ಲಿ, ಅಲ್ಲೇ ಇದ್ದ ಸಣ್ಣ ಹುಡುಗಿಯ ಅಮ್ಮ
ಅಂತ ಕಾಣತ್ತೆ , ಅವಳ ಹೆಸರನ್ನು ಕೂಗುತ್ತ ಇರೋದು ಕೇಳಿಸಿತು. ಅವಳು ಇಲ್ಲಿಂದಲೇ
''ಅಮ್ಮ ತಿಕ ತೊಳಕೊಂಡು ಬಂದಿದ್ದೇನೆ'' ಅಂತ ಜೋರಾಗಿ ಹೇಳಿದಳೋ, ನಂಗೆ ಜೋರಾಗಿ
ಕೇಳಿಸಿತೋ ಗೊತ್ತಿಲ್ಲ, ನಗುವುದೋ , ಅಳುವುದೋ ಎಂಥ ಪರಿಸ್ಥಿತಿ ಎಂಬಲ್ಲಿಗೆ ನನ್ನ ಮೊದಲ
ವಿಡಿಯೋ ಶೂಟಿಂಗ್ ಪುರಾಣ ಸಮಾಪ್ತಿ ಆಗಿದ್ದು :)</div>
Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-62274510748152252012014-01-25T08:59:00.004-08:002014-01-26T00:53:10.695-08:00ಎ ಮೇರೆ ವತನ್ ಕೆ ಲೋಗೋ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiparbBCnDs8pbgJX2RRnywtTf3eCq7vfRB0huJs2xqTAtdfb5I7VRYwnWf0krwf-rjues5NHlOGeUVs30aZpQnEwhyphenhyphen0LfFxCxhP9lTjl0w3VgqVfqDwRdHYRSqICvONF3q8OF393ObGo0/s1600/a1.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEiparbBCnDs8pbgJX2RRnywtTf3eCq7vfRB0huJs2xqTAtdfb5I7VRYwnWf0krwf-rjues5NHlOGeUVs30aZpQnEwhyphenhyphen0LfFxCxhP9lTjl0w3VgqVfqDwRdHYRSqICvONF3q8OF393ObGo0/s1600/a1.jpg" /></a></div>
<span style="background-color: white; color: #222222; font-family: arial;">ಆಫಿಸ್ ಇಂದ ಮನೆಗೆ ದಿನಾ ಬಸ್ನಲ್ಲಿ ಬರುವಾಗ ಮೊಬೈಲ್ ನಲ್ಲಿ FM ಕೇಳುವ ಅಭ್ಯಾಸ. ಇಂದು ಕೂಡ ಅದೇ ಮಾಡಿದ್ದೆ. ನಾಳೆ ಗಣ ರಾಜ್ಯೋತ್ಸವ ಅನ್ನುವ ಕಾರಣಕ್ಕೆ ಕೆಲವು ಚಾನಲ್ ಗಳಲ್ಲಿ ರಾಷ್ಟ್ರ ಭಕ್ತಿ ಗೀತೆ ಪ್ರಸಾರವಾಗುತ್ತಿತ್ತು. ನಂಗೆ ಮುಂಚಿನಿಂದಲೂ ಇಂತಹ ಗೀತೆ ಕೇಳಿದರೆ, ಏನೋ ಹುರುಪು. ಬಸ್ ನಲ್ಲಿ ಸೀಟು ಸಿಕ್ಕಿದರಿಂದ ಹಾಡು ಕೇಳಿಕೊಂಡು,ಗುನುಗಿಕೊಂಡು ಬರ್ತಾ ಇದ್ದೆ. </span><br />
<div style="color: #222222; font-family: arial;">
<br /></div>
<div style="color: #222222; font-family: arial;">
ಸುಮಾರು ಒಂದು ದಶಕದ ನನ್ನ ಪತ್ರಿಕೋದ್ಯಮದಲ್ಲಿ ಮೇಲು ಬೀಳು ಇದ್ದೆ ಇತ್ತು. ಯಾಕೋ ಇತ್ತೀಚಿಗೆ ಕೆಲವೊಂದು ಕಾರಣಗಳಿಂದ ಪತ್ರಿಕೋದ್ಯಮ ಜಿಗುಪ್ಸೆ ಬಂದಿತ್ತು , ಕೆಲಸ ಬಿತ್ತುಬಿದುವಷ್ಟು. ಇದೆ ಬೇಸರದಲ್ಲಿ ಇಂದು ಕಚೇರಿ ಯಿಂದ ಹೊರಟಿದ್ದೆ. FM ಕೇಳುತಿದ್ದ ನನಗೆ ವಿವಿಧ ಭಾರತಿ ಯಲ್ಲಿ ನೆಹರು ಅವರಿಗೆ ಕಣ್ಣಿರು ತಂದ ಗೀತೆ ಅಂತ ಹೇಳಿ "ಎ ಮೇರೆ ವತನ್ ಕೆ ಲೋಗೋ ", ಲತಾ ಮಂಗೇಶ್ಕರ್ ಅವರ ಗೀತೆ ಪ್ರಸರ ಆಯಿತು . </div>
<div style="color: #222222; font-family: arial;">
<br /></div>
<div style="color: #222222; font-family: arial;">
ದೇಶ ಕಾಯುವ ಸೈನಿಕರನ್ನು ಮರೆಯದಿರಿ ಅಂತ ಫೇಸ್ ಬುಕ್ ನಲ್ಲಿ ಟ್ಯಾಗ್ ಮಾಡುವ, ಶೇರ್ ಮಾಡುವ, ಇಲ್ಲ ಇ-ಮೇಲ್ ಗಳಲ್ಲಿ ಫಾರ್ವರ್ಡ್ ಮಾಡುವ ಜನಗಳಿಗೇನು ಕಡಿಮೆ ಇಲ್ಲ. ಇಷ್ಟನ್ನು ಮಾಡಿ, ಗಡಿ ಕಾಯುವರನ್ನು ನೆನದಂತೆ ಅನ್ನುವ ಭ್ರಮೆ ಇದೆ. ಲತಾ ಅವರ ಈ ಹಾಡಿನಲ್ಲಿ "ಜೋ ಲೊಟ್ಕೆ ಘರ್ ನ ಆಯೆ " ಅನ್ನುವ ಸಾಲು ಕೇಳುತಿದ್ದ ಹಾಗೆ, ನನ್ನ ಕೆಲಸದ ಬಗ್ಗೆ compare ಮಾಡಕ್ಕೆ ಶುರು ಮಾಡಿದೆ. ದಿನ ಮನೆಗೆ ಬಂದೆ ಬರ್ತೀನಿ (BMTC ಬಸ್ ಕೆಳಕ್ಕೆ ಸಿಗದಿದ್ದರೆ). ಆದರೆ ಸೈನಿಕ ರಜೆಗೆಂದು ಬಂದರೆ, ಪುನಃ ಮನೆಗೆ ಹೋಗದಿರಬಹುದು. </div>
<div style="color: #222222; font-family: arial;">
<br /></div>
<div style="color: #222222; font-family: arial;">
ಒಮ್ಮೊಮ್ಮೆ ರಾತ್ರಿ ಮನೆಗೆ ಲೇಟ್ ಆಗಿ ಹೋದ್ರೆ, ಹಾಗೆ ಕಾರಣ ಆದವರಿಗೆ ಶಾಪ ಹಾಕಿಕೊಂಡು ಕೆಲಸ ಮುಗಿಸಿ ಹೊಗ್ತಿನಿ. ಕೆಲವೊಮ್ಮೆ ಲೇಟ್ assignment ಹಾಕಿದ ಚೀಫ್ ರಿಪೋರ್ಟರ್ಗೆ, ತಡವಾಗಿ ಬಂದ ಮಂತ್ರಿಗಳಿಗೆ, traffic ಜಾಮ್ ಎಲ್ಲಕ್ಕೂ ಶಾಪ ಹಾಕಿದುಂಟು. ಆದರೆ ಸೈನಿಕರು, ತಡ ಅನ್ನುವ ಶಬ್ದವೇ ಇಲ್ಲ. ದಿನದ ಇಪ್ಪತ್ತು ನಾಲ್ಕು ಗಂಟೆ ಕೆಲ್ಸ. ಒಂದರ್ಥದಲ್ಲಿ ಕೆಲಸ ನಿಲ್ಲುವುದೇ ಇಲ್ಲ. ಕೆಲವು ಸಾಫ್ಟ್ವೇರ್ ಕಂಪನಿಗಲಳ್ಳಿ ವಾರದಲ್ಲಿ ಐಯ್ದು ದಿನ ಕೆಲಸ ಮಾಡುವರನ್ನು, ಸರ್ಕಾರಿ ರಜೆ ಇದ್ದಾಗ, ನಾನು ಮನೆಯಿಂದ ಆಚೆ ಹೋಗಿ ಕೆಲಸ ಮಾಡುವಾಗ, ಹಾಗೆ ಭಾನುವಾರದ ಒಂದೇ ರಜೆ ಹಾಗೆ ಕರಗಿ ಹೋದಾಗ, ತುಂಬಾ ಬೇಸರ ಆಗತ್ತೆ. ಆದರೆ ಈ ಹಾಡಿನಿಂದ ಸೈನಿಕರನ್ನು ನೆನದೆ, ನನ್ನ ಬಗ್ಗೆ ನನಗೆ ಬೇಸರ ಆಯಿತು. </div>
<div style="color: #222222; font-family: arial;">
<br /></div>
<div style="color: #222222; font-family: arial;">
ವರದಿಗಾರರಿಗೆ ಬೈ-ಲೈನ್ ಬಗ್ಗೆ ತುಂಬಾ ಪ್ರೀತಿ. ಒಮ್ಮೊಮ್ಮೆ ನನ್ನ ಬೈ-ಲೈನ್ ಕಾಪಿ ಹಾಳು ಮಾಡಿದಕ್ಕೆ, ತಪ್ಪು ತಪ್ಪು ಹಾಕಿ ಕೊಂಡಿದಕ್ಕೆ , ಕಷ್ಟ ಪಟ್ಟು ಸ್ಟೋರಿ ಮಾಡಿದ್ರೆ, ಹಾಳು ಮಾಡಿಬಿಟ್ಟರಲ್ಲ, ಫೀಲ್ಡ್ ಇಂದ ಆಚೆ ಹೋಗಿದಿದ್ರೆ ಇವರಿಗೆ ಇದರ ಕಷ್ಟ ಗೊತ್ತಾಗುತ್ತಿತ್ತು ಅಂತ ನಮ್ಮ ಉಪ ಸಂಪಾದಕರಿಗೆ ಮತ್ತು ಇನ್ನಿತರರಿಗೆ ಸಾಕಷ್ಟು ಬಾರಿ ಬೈಯ್ದಿದ್ದೆನೆ. ಪುಟ ಒಂದರ ಸ್ಟೋರಿ ಪುಟ ಎರಡರಲ್ಲಿ ಹಾಕಿದ್ದಾರೆ ಅಂತ ಬೇಸರ ಆಗಿದುಂಟು ಇದೆ ಸೈನಿಕರು ಗಡಿ ಕಾಯುತಿದ್ದಾರೆ, ಅವರಿಗೆ ಗಡಿಕಾಯುವವರು ಅಂತ ಹೆಸರು ಇಟ್ಟಿದ್ದೇವೆ. ಅವರು ಮರಣ ಹೊಂದಿದ್ದರೆ, ಒಳಗಿನ ಪುಟದಲ್ಲಿ ಕಾಣದಷ್ಟು ಚಿಕ್ಕದಾಗಿ ಹಾಕುತ್ತೆವೆ. ಓದುವುದೇ ಇಲ್ಲ. ಮರೆತು ಹೋಗುತ್ತೇವೆ ಕೂಡ. </div>
<div style="color: #222222; font-family: arial;">
<br /></div>
<div style="color: #222222; font-family: arial;">
ಪತ್ರಕರ್ತರು ಸ್ವಾರ್ಥರಾಗಿಬಿಟ್ಟಿದ್ದೇವೆ. ಒಂದು ದಿನ ಊದಿ, ರದ್ದಿಯಾಗುವ ಪೇಪರ್ ಬಗ್ಗೆ ತಲೆ ಕೆಡಸಿಕೊಳ್ತಿವಿ. ಕೆಲವು ವರ್ಷಗಳ ಹಿಂದೆ, ಅಲಸೂರಿನ ಬಳಿ ಆರ್ಮಿ assignment ಇತ್ತು. ಮಡಿದ ಸೈನಿಕನ ಮಡದಿ ಅಥವಾ ತಾಯಿ ಅಥವಾ ಮಕ್ಕಳಿಗೆ ಹಣದ ಚೆಕ್ ವಿತರಿಸುವ ಕಾರ್ಯಕ್ರಮ. ಪ್ರತಿಯೊಬ್ಬರೂ, ಚೆಕ್ ಪಡಿಯುವಾಗ ಕಣ್ಣಿರು ಹರಿಯುತ್ತಿತ್ತು, ಕೆಲವರು ನಿರ್ಭಾವುಕರಾಗಿದ್ದರು. ನಾನು ಪತ್ರಕರ್ತೆ ಅನ್ನುವ ಹಮ್ಮು ಬಿಟ್ಟು ಅತ್ತೆ. ಕಾರ್ಯಕ್ರಮದ ನಂತರ ನಮ್ಮಲ್ಲಿ ಬಂದ ಹಿರಿಯ ಪತ್ರಕರ್ತರೊಬ್ಬರು, ತಾವು ಆರ್ಮಿ ಬಗ್ಗೆ ಬರೆದ ಲೇಖನಗಳ "BREAKING STORY " ಮತ್ತು "EXCLUSIVE STORIES " ಪೇಪರ್ ಕಟ್ಟಿಂಗ್ ತಂದಿದ್ರು. ಬಡಾಯಿ ಕೊಚ್ಚಿಕೊಂಡು ಯಾರೋ ಹಿರಿಯ ಆರ್ಮಿ ಅಧಿಕಾರಿಯೊಬ್ಬರಿಗೆ ತೋರಿಸುತ್ತಿದ್ದರು. ತುಂಬಾ ಅಸಹ್ಯ ಆಯ್ತು. ಸತ್ತವರ ಮನೆ ಮುಂದೆ ಹಾಕುವ ಬೆಂಕಿಯಲ್ಲು ತಮ್ಮ ಅಕ್ಕಿ ಬೇಯಿಸಿಕೊಳ್ಳುವರ ಬಗ್ಗೆ ಹೇಸಿಗೆ ಅಯ್ಥು. </div>
<div style="color: #222222; font-family: arial;">
<br /></div>
<div style="color: #222222; font-family: arial;">
ಯಾವುದೋ ಕಾರಣಕ್ಕೆ ಒಂದು ವಾರದಿಂದ ವಿಶೇಶ ವರದಿ ಬರೆದುಕೊಡುತಿಲ್ಲ. ಒಂದು ಅರ್ಥದಲ್ಲಿ strike ಅನ್ನಬಹುದು. ಯಾಕೆ ಬರಿಯಬೇಕು ಅನ್ನುವ ಮನೋಭಾವ ಬಂದಿತ್ತು. ಇದೆ ಸೈನಿಕರು ಒಂದು ವಾರ ತಮ್ಮ ಕೆಲಸ ಮಾಡುವುದಿಲ್ಲ ಅಂತ ನಿಲ್ಲಿಸಿಬಿಟ್ಟರೆ ... ಆ ಯೋಚನೆಯೇ ಹೆದರಿಕೆ ತರುತ್ತದೆ !!! </div>
</div>
Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-28461406034043201362012-02-04T23:02:00.000-08:002012-02-04T23:02:20.974-08:00ವರ "ಪ್ರಸಾದ"<div dir="ltr" style="text-align: left;" trbidi="on">
<div style="text-align: left;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgbW4O6iPFOpHZiUhcJJqJjjA-IgC8f305djaaVebTbMh1g1CNDk9ZoQ6UJ4jo3D4mTHiMeRkYjM2adGr-sqKTWQvY-eOKNwKKdJghOqn6PRBKsaTl8ri5kG9DOxa9Ydj0Ls9M15IWOOlQ/s1600/prasada.gif" imageanchor="1" style="clear: left; float: left; margin-bottom: 1em; margin-right: 1em;"><img border="0" height="227" src="https://blogger.googleusercontent.com/img/b/R29vZ2xl/AVvXsEgbW4O6iPFOpHZiUhcJJqJjjA-IgC8f305djaaVebTbMh1g1CNDk9ZoQ6UJ4jo3D4mTHiMeRkYjM2adGr-sqKTWQvY-eOKNwKKdJghOqn6PRBKsaTl8ri5kG9DOxa9Ydj0Ls9M15IWOOlQ/s320/prasada.gif" width="320" /></a></div>
<div style="text-align: left;">
ದೇವರು ವರ ಕೊಟ್ರು ಪೂಜಾರಿ ವರ ಕೊಡಲ್ಲ ಅನ್ನೋ ಗಾದೆ ನಮ್ಮ ಮಾದ್ಯಮದಲ್ಲಿರುವವರಿಗೆ ಕೊಂಚ ಚೇಂಜ್ ಮಾಡಿ ಹೇಳಬಹುದು. ಪೂಜಾರಿ ಪ್ರಸಾದ ಕೊಡ್ತಾರೋ ಬಿಡ್ತಾರೋ, ಗೊತ್ತಿಲ್ಲ, ನಮ್ಮ P R (Public Relation) ನಲ್ಲಿ ಕೆಲಸ ಮಾಡುವವರು ಇದನ್ನೇ ತಮ್ಮ ಅಸ್ತ್ರಗಳಲ್ಲಿ ಬಳಸದೆ ಇರುವುದಿಲ್ಲ.</div>
<div style="text-align: left;">
<br /></div>
<div style="text-align: left;">
ನಾನು ವಿಜಯ್ ಟೈಮ್ಸ್ ನಲ್ಲಿ ಆಗಿನ್ನೂ ಕೆಲಸಕ್ಕೆ ಸೇರಿದ ಹೊಸತು. ನಾನು ಹಾಗು ನನ್ನ ಸಹೋದ್ಯೋಗಿಯೋಬ್ಬಳು ಆಗಷ್ಟೇ ಎರೆಡನೆ ವರ್ಷಕ್ಕೆ ಕಾಲಿಟ್ಟ "ಬೆಂಗಳೂರು ಹಬ್ಬ" ಕವರ್ ಮಾಡಕ್ಕೆ ಹೋಗಿದ್ವಿ. ಚಾಮರಾಜಪೇಟೆ ಯಲ್ಲಿ ಇರುವ ದೇವಸ್ಥಾನದಲ್ಲಿ ಲಕ್ಷ ದೀಪ ಹತ್ತಿಸಿ ಪೂಜೆ, ಬೆಂಗಳೂರಿನ ಸಂಸ್ಕೃತಿಯ ಪ್ರತೀಕ ಎಂದು, ಅದನ್ನು ಕೂಡ "ಬೆಂಗಳೂರು ಹಬ್ಬದಲ್ಲಿ" ಸೇರಿಸಲಾಗಿತ್ತು. ಸರಿ, ನಾವು ಹೋದಾಗ ಮಹಾಮಂಗಳಾರತಿ ಆಗುತಿತ್ತು. ಅರ್ಚಕರು "busy" ಆಗಿದ್ದರು. ನಾವು ಅವರನ್ನು ಮಾತನಾದಿಸಲೆಂದು ಹೋದೆವು, ಅದೇ ಸಮಯದಲ್ಲಿ ಅಲ್ಲಿದ್ದ ದೇವಸ್ಥಾನದ ಸದಸ್ಯರೊಬ್ಬರು ನಾವು ಪ್ರೆಸ್ ನವರು ಅಂತ ತುಂಬಾ ಮುತುವರ್ಜಿಯಿಂದ ಹಣ್ಣು , ಕಲ್ಲು ಸಕ್ಕರೆ ಹಾಗು ಹೆಸರು ಕಾಳು ಹುಸಲಿಯನ್ನು ಪ್ರಸಾದ ಅಂತ ಕೊಟ್ಟು ಕಳಿಸಿದ್ದು, ಅಂದಿನ ಆಫೀಸ್ ಸಹೋದ್ಯ್ಗಿಗಳೆಲ್ಲ ತಿಂದದ್ದು ನೆನಪಿದೆ. </div>
<div style="text-align: left;">
<br /></div>
<div style="text-align: left;">
ಒಮ್ಮೆ ಪ್ರೆಸ್ ಕ್ಲಬ್ ನಲ್ಲಿ ಎಂತದೋ ಒಂದು ಧಾರ್ಮಿಕ ಪ್ರೆಸ್ ಮೀಟ್ ಇತ್ತು. ನಾನು ಹೋಗಿದ್ದೆ. ಅದು ಮುಗಿದ ನಂತರ ಹೊರ ಬರುತಿದ್ದಂತೆ, PR ಒಬ್ಬ ಬಾಗಿಲ ಬಳಿ ನಿಂತು ಪ್ಯಾಕೆಟ್ ಒಂದನ್ನು ಕೊಡ್ತಾ ಇದ್ದ. ಗಿಫ್ಟ್ ಬಾಕ್ಸ್ ತರ ಇತ್ತು, ಗೋಲ್ಡನ್ ಪಪೆರ್ನಲ್ಲಿ ಸುತ್ತಿದ್ದರಿಂದ ಪಳ ಪಳ ಹೊಳೆಯುತ್ತಿತ್ತು. ನಾನು ಹೊರ ಹೋಗಿದ್ದೆ ತಡ, ಪ್ಯಾಕೆಟ್ ನನ್ನ ಮುಂದೆ ಹಿಡಿದ. ನಾನು ಬೇಡವೆಂದೆ, ಅದಕ್ಕೆ ಆಟ, ಮೇಡಂ ಇದು ಮಾತಜಿಯವರ ಪ್ರಸಾದ, ಬೇಡ ಅನ್ನದಿರಿ ಅಂತ advice ಕೊಟ್ಟ. ಬೇಡ ಅಂತ ಮತ್ತೊಮ್ಮೆ ಅಂದಾಗ, ಏನ್ ಮೇಡಂ ಈ ಪ್ರಸಾದಕ್ಕಾಗಿ ಲಕ್ಷಾಂತರ ಜನ ಕಾಯ್ತಾ ಇರ್ತಾರೆ, ಸಿಗುವುದೇ ದುರ್ಲಭ, ವಿದೇಶದಿಂದ ಡಾಲರ್ ಹಾಕಿ ಪಡೆಯುವವರು ಇದ್ದಾರೆ, ನೀವು ನೋಡಿದ್ರೆ ಹಿಂಗೆ....ಅಂದ. ಬೇಡ ಅಂತ ಹೇಳಲಿಲ್ವ ಅಂತ ಸ್ವಲ್ಪ ಸಿಡುಕಿಯೇ ಬಂದೆ. </div>
<div style="text-align: left;">
<br /></div>
<div style="text-align: left;">
ಮೊನ್ನೆ ಹೀಗೆ ಆಯಿತು. ವೈಕುಂಠ ಏಕಾದಶಿಗಾಗಿ ಮಾಜಿ ಮಂತ್ರಿ ಹಾಗು ಬೆಂಗಳೂರಿನ ಪ್ರತಿಷ್ಟಿತ ಚಿನ್ನದ ಅಂಗಡಿ ಮಾಲೀಕರು ಸೇರಿ ಸುಮಾರು 3.5 ಲಕ್ಷ ಲಾಡು ಮಾಡಿಸಿದ್ದರು. ರಾಜ್ಯದಲ್ಲಿ ಇರುವ ಎಲ್ಲ ಶ್ರೀನಿವಾಸ ದೇವಸ್ಥಾನಕ್ಕೂ ಇದನ್ನು ಹಂಚುತ್ತೇವೆ ಅಂತ ಹೇಳಿಕೊಂಡರು. ಕೋಟ್ಯಂತರ ರುಪಾಯಿ ಖರ್ಚು ಮಾಡಿ ತುಪ್ಪ, ಕಡಲೆ ಹಿಟ್ಟು, ಗೋಡಂಬಿ, ದ್ರಾಕ್ಷಿ ಸುರಿದು, ತಿರುಪತಿ ಲಾಡುವಿನಂತೆ ಉತ್ಕೃಷ್ಟ ಅಂತ ಹೇಳಿದ್ದು ಆಯಿತು. ಅದೃಷ್ಟವೋ ದುರದೃಷ್ಟವೋ ಈ ಬಗ್ಗೆ ನಾನೇ ಬರೆದೆ. ಮಾರನೆ ದಿನ ಆಫೀಸಿನಲ್ಲಿ ನೋಡ್ತೇನೆ ದೊಡ್ಡ ಬುತ್ತಿ ತುಂಬಾ ಲಾಡು ಪ್ರಸಾದ !! ಬೇಡ ಬೇಡ ಅಂತ ಹೇಳುತಿದ್ದ ನನ್ನ ಸಹೋದ್ಯೋಗಿಗಳಿಗೆ ಎರೆಡೆರೆಡು ಲಾಡು!!</div>
<div style="text-align: left;">
<br /></div>
<div style="text-align: left;">
ಇಂತಹ ಪ್ರಯತ್ನಕ್ಕೆ ಇಸ್ಕೊನ್ ದೇವಸ್ಥಾನದವರು ಹೊರತಾಗಿಲ್ಲ. ಪ್ರತಿ ಬಾರಿ ಪ್ರೆಸ್ ರಿಲೀಸ್ ಕೊಡಕ್ಕೆ ಬರುವವರು "ಪ್ರಶಾದ್" ಪ್ಯಾಕೆಟ್ ಕೊಡದೆ ಹೋಗದೆ ಇರುವುದಿಲ್ಲ. </div>
<div style="text-align: left;">
<br /></div>
<div style="text-align: left;">
ಈಗ ಆರು ವರ್ಷದ ಹಿಂದಿನ ಮಾತು. ಅಂದು ಜನವರಿ ಒಂದು. ದೂರದ ಬಿಡದಿಯಲ್ಲಿ ಯಾವುದೋ ದೊಡ್ಡ ಕಾರ್ಯಕ್ರಮ ಇತ್ತು. ಅದಕ್ಕಾಗಿ ಅರ್ಗನೈಸೆರ್ಸ್ ಪ್ರೆಸ್ ಕ್ಲಬ್ ಇಂದ ಪಿಕ್ ಅಪ್ ವ್ಯವಸ್ಥೆ ಮಾಡಿದ್ದರು. ಸರಿ ಅಲ್ಲಿ ಹೋದೆವು. ಹೋಗುತಿದ್ದಂತೆ, ಊಟದ ಕೋಣೆಗೆ ಕರೆದುಕೊಂಡು ಹೋದರು. ಊಟ ಮಾಡಲು ಬಲವಂತ ಪಡಿಸಿದರು. ಬೇಡ ಎಂದರೆ, ಇದು ಅಶ್ರಮದಲ್ಲಿನ ಪ್ರಸಾದ ಅಂದರು. ಸ್ಟೀಲ್ ತಟ್ಟೆಯಲ್ಲಿ ಊಟ ಬಡಿಸಿದರು, ಊಟ ಆದ ನಂತರ ನಿಮ್ಮ ತಟ್ಟೆ ನೀವೇ ತೊಳಿಯಬೇಕು, ಅದು ಇಲ್ಲಿನ ನಿಯಮ ಅಂದರು. ನಾನೋನು ಬೈಯ್ದುಕೊಂಡೆ ಮಾಡಿದೆ. ಇಷ್ಟೆಲ್ಲಾ ಪುರಾಣ ಹೇಳಿ ಇದು ಯಾವ ಜಾಗ ಅಂತ ಹೇಳದಿದ್ದರೆ...ಇದು ಸ್ವಾಮಿ ನಿತ್ಯಾನಂದ "ಸ್ವಾಮೀಜಿ" ಅವರ ಆಶ್ರಮ!!!</div>
<div style="text-align: left;">
<br /></div>
<div style="text-align: left;">
<br /></div>
</div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-7254735585008262802012-01-29T09:03:00.000-08:002012-01-29T09:03:31.633-08:00ಹೆಸರಿನಲ್ಲೇನಿದೆ ?<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj8zhEZ-o8S2z16N5km79AJIjHCwuG2T0xKWuawngazO5LDRtdAZyQWOdpMtbK9tD-21FQ3g2SmefY5ljNgAUAAGBCsnABcS6umm8LiiD_nFSvYZ1vwPMbbxdXbrfUCM9Wr1k6a7jjaAJE/s1600/MyNameConsulting.gif" imageanchor="1" style="clear: right; float: right; margin-bottom: 1em; margin-left: 1em;"><img border="0" height="214" src="https://blogger.googleusercontent.com/img/b/R29vZ2xl/AVvXsEj8zhEZ-o8S2z16N5km79AJIjHCwuG2T0xKWuawngazO5LDRtdAZyQWOdpMtbK9tD-21FQ3g2SmefY5ljNgAUAAGBCsnABcS6umm8LiiD_nFSvYZ1vwPMbbxdXbrfUCM9Wr1k6a7jjaAJE/s320/MyNameConsulting.gif" width="320" /></a></div>
<div style="text-align: left;">
ಚೀನಿಯರು ತಮಗೆ ಹುಟ್ಟಿದ ಮಗುವಿಗೆ ಹೆಸರಿಡಲು, ಪಾತ್ರೆಗಳ ಸದ್ದು ಮಾಡಿ, ಅದರಿಂದ ಬಂದ ಶಬ್ದದಂತೆ ಹೆಸರಿಡುತ್ತಾರಂತೆ. ನಮ್ಮಲ್ಲಿ ಅಂತ ಸಂಪ್ರದಾಯ ಏನು ಇಲ್ಲವಾದರೂ, ತಾತ ಅಜ್ಜಿಯರ ಹೆಸರು, ದೇವರ ಹೆಸರು, ಇಂತದೆ ಅಕ್ಷರ ಇಂದ ಪ್ರಾರಂಭವಾಗುವ ಹೆಸರು, ಅರ್ಥವಿಲ್ಲದ ಹೆಸರು, ಮಾಡ್ರನ್ ಹೆಸರು, ಇಂಟರ್ನೆಟ್ ಹೆಸರು....ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಂದ ಹಾಗೆ ನನ್ನ ಮಗಳ ಹೆಸರು "ಅಮೇಯ ಸಿರಿ" , ಇದರ ಅರ್ಥ ನಾಶವಾಗದ ಸಂಪತ್ತು ಅಂತ. ನಾಶವಾಗದ ಸಂಪತ್ತು ಅಂದ್ರೆ ವಿದ್ಯೆ ಅಂತ ಹೇಳ್ತಾರೆ. ಇದು ಎರೆಡು ಪದಗಳ ಹೆಸರು, ಮೊದಲ ಪದ ನಾನು ಹುಡುಕಿದ್ದು ಕನ್ನಡ ಸಾಹಿತ್ಯ ಪರಿಷತ್ ಅವರು ಪ್ರಕಾಶಿಸುವ ಪದಗಳ ನಿಘಂಟಿನಿಂದ...</div>
<div style="text-align: left;">
<br /></div>
<div style="text-align: left;">
ಇದೇನೇ ಇರಲಿ, ನಾನು ಮಾದ್ಯಮದಲ್ಲಿರುವವರ ಹೆಸರು, ಅಥವಾ ಅವರೇ ಮಾಡಿಕೊಂಡಿರುವ "ನಾಮಕರಣ"ದ ಬಗ್ಗೆ ಹೇಳೋಣ ಅಂತಿದ್ದೆ. ನಾನು ವಿಜಯ ಟೈಮ್ಸ್ ಸೇರಿದ ಹೊಸತು. ಅಲ್ಲಿವರೆಗೆ ನನ್ನ ಹೆಸರು ಹಾಗು ನನ್ನ ಪೂರ್ಣ ಹೆಸರು ಅಶ್ವಿನಿ ಎಂ ಎಸ್, ಅಷ್ಟೇ. ಬಂದ ಎರೆಡನೆ ದಿನಕ್ಕೆ ಗೊತ್ತಾಗಿದ್ದು ಏನೆಂದರೆ, ಅಲ್ಲಿ ಅದೇ ಹೆಸರಿನ ಐದು ಜನ ಹುಡುಗಿಯರು ಇದ್ದಾರೆ ಅಂತ. ನನ್ನ official<span> ಹೆಸರು ಅಶ್ವಿನಿ ಎಂ ಎಸ್ ಆದರು, ನಾನು ಅಂದಿನಿಂದ ಅಶ್ವಿನಿ ಎಂ ಶ್ರೀಪಾದ್ ಆದೆ. ಶ್ರೀಪಾದ್ ನನ್ನ ತಂದೆಯ ಹೆಸರು, ಇಂದು ಕೂಡ ನನ್ನ ಫೀಲ್ಡ್ ನಲ್ಲಿ ತುಂಬಾ ಜನ ನನಗೆ ಶ್ರೀಪಾದ್ ಅಂತ ಕರಿತಾರೆ, ನನಗೇನು ಬೇಸರವಿಲ್ಲ. ಹಾಗಾಗಿ ನಾನು ಬರೆದ ಎಲ್ಲ ಲೇಖನಗಳು ಅದೇ ಹೆಸರಿನಲ್ಲಿ ಬರುತ್ತದೆ, ಮದುವೆಯಾದ ನಂತರವೂ ಅದನ್ನು ಬದಲಾಯಿಸಿಕೊಳ್ಳಲಿಲ್ಲ.</span></div>
<div style="text-align: left;">
<span><br /></span></div>
<div style="text-align: left;">
<span>ಇದೆ ರೀತಿ ಶಿವಕುಮಾರ್ ಹೆಸರಿನಲು confusion<span> ಇದೆ, Shivakumar N D, Shivakumar M D Shivakumar M T ಅಂತ ಮೂರೂ ಜನ ವರದಿಗಾರರು, ಎಲ್ಲರು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವವರೇ! ಆದರೆ ತಮ್ಮ ಪರಿಚಯ ಮಾಡಿಕೊಳ್ಳ ಬೇಕಿದಲ್ಲಿ, initials ಎಷ್ಟು consfusions ತರ್ತ ಇತ್ತು, ಇದೆ ! ಇದರಲ್ಲಿನ M D Shivakumar ಈಗ ಶಿವಕುಮಾರ್ ಬೆಳ್ಳಿತಟ್ಟೆ ಆಗಿದ್ದಾರೆ !!</span></span></div>
<div style="text-align: left;">
<span><br /></span></div>
<div style="text-align: left;">
<span>ನನ್ನ ಸಹೋದ್ಯೋಗಿ ವೀಣಾ ಅಂತ. ದೆಹಲಿ ಮೂಲದವಳು. ಅವಳ ಹೆಸರು ಹಾಗು ಅವಳ ಬೈಲೈನ್ ಒಂದೇ ಇತ್ತು, ವೀಣಾ ಜೋಷಿ. ಮಾಡುವೆ ಆಗಿದ್ದು ಬಂಗಾಳಿ ಹುಡುಗನ್ನ, ಏನು ಮಾಡೋದು , ತನ್ನ ಹೆಸರು ಹಾಗು ಮನೆತನದ ಹೆಸರು ಬದಲಾಯಿಸಲು ಸುತರಾಂ ಇಷ್ಟವಿಲ್ಲ. ಆದರೆ, ಗಂಡನ ಮನೆಯವರಿಗೆ (ಅದು ಪ್ರೇಮ ವಿವಾಹ ಕೂಡ) ಒತ್ತು ನೀಡಬೇಕಿತ್ತು, ಅದಕ್ಕೆ ಅವಳು ಕಂಡುಕೊಂಡ ಉಪಾಯ ವೀಣಾ ಜೋಷಿ ದತ್ತಾ, ಅದೇ ಹೆಸರಿನಲ್ಲಿ ಇಂದು ಕೂಡ ಅವಳು ಬರಿಯುತ್ತಿದ್ದಾಳೆ. </span></div>
<div style="text-align: left;">
<span><br /></span></div>
<div style="text-align: left;">
ನಮ್ಮ ಹೆಸರು ಅಚ್ಚ ಕನ್ನಡ ದಲ್ಲಿದ್ದರು, initials ಮಾತ್ರ ಇಂಗ್ಲೀಷ್. ಆದರೆ ವಿಜಯ ಕರ್ನಾಟಕದ ವಿನಯ್ ಮಾತ್ರ ಹೊರತಾಗಿದ್ದಾರೆ. ಅವರ ನಿಜವಾದ ನಾಮದೆಯದಲ್ಲಿ initials<span> ಇಂಗ್ಲೀಷ್ನಲ್ಲಿ ಇದೆಯೋ ಇಲ್ಲವೋ ತಿಳಿಯದು, ಆದರೆ ಅವರ ಬೈಲೈನ್ ಮಾತ್ರ ವಿನಯ್ ನಾ ಅಂತ ಇದೆ. ಕೆಲವರೊಂತು ಅವರ ಹೆಸರನ್ನು ವಿನಯ್ನಾ ಅಂತಾನೆ ಕರಿತ್ತಾರೆ. </span></div>
<div style="text-align: left;">
<br /></div>
<div style="text-align: left;">
ನಮ್ಮ ಹಳೆಯ ಚೀಫ್ Reporter<span> ಹೆಸರು ರಾಮಚಂದ್ರ ರೆಡ್ಡಿ ಪಾಟೀಲ್, ಇದು ಅವರ ನಿಜ ನಾಮದೇಯ. ಆದರೆ ಜನ ಅವರನ್ನು ಇಂದು ಕೂಡ ಓದುವುದು ಹಾಗು ಗುರುತಿಸುವುದು ರಾಮು ಪಾಟೀಲ್ ಅಂತಾನೆ!!</span></div>
<div style="text-align: left;">
<span><br /></span></div>
<div style="text-align: left;">
<span>ಹೀಗೆ ತಮ್ಮ ತಂದೆ ತಾಯಿ ಇಟ್ಟಿದ್ದ ಹೆಸರಿಗೆ ಅಲ್ಲೊಂದು ಇಲ್ಲೊಂದು ಬದಲಾವಣೆ ತಂದು ಅದೇ ನಮಗೆ ಐಡೆಂಟಿಟಿ ಆಗೋದು ಅಂದ್ರೆ ತಪ್ಪಾಗಲಾರದು </span></div>
<div style="text-align: left;">
<span><br /></span></div>
<div style="text-align: left;">
<span>(ಸೂಚನೆ: ಇಲ್ಲಿ ಯಾರ ಹೆಸರನ್ನು ಬಳಸಿದ್ದೇನೋ ಅದು ಕಾಲ್ಪನಿಕವಲ್ಲ. ಬೇಸರವಾಗಿದಲ್ಲಿ ಕ್ಷಮಿಸಿ. ಇಂತಹ ಇನ್ನು ಅನೇಕರು ಇದ್ದಾರೆ, ಅವರ ಹೆಸರುಗಳು ತಕ್ಷಣಕ್ಕೆ ನೆನಪಾಗುತ್ತಿಲ್ಲ )</span></div>
</div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-83440842823342692922011-10-25T06:02:00.000-07:002011-10-25T06:02:26.307-07:00ಇವ್ರು ಹೇಳ್ತಾರೆ ಕೇಳಿ !!!!<div dir="ltr" style="text-align: left;" trbidi="on"><div style="text-align: left;">ಬ್ಲಾಗ್ ಕಡೆ ಮುಖ ಹಾಕಿ ತುಂಬಾ ದಿನ ಆಯಿತು. ತಪ್ಪಿದ್ದಲ್ಲಿ ಕ್ಷಮಿಸಿ. </div><div style="text-align: left;"><br />
</div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiI1SrC03GyQGwzcAz7bA_noFyglVtnEq94PpLWLF-dZUPIJMQBZJI7Ejm-tjTFDBJkvg18bcPSbs3dv34410dRMR0Q84Va8PQjlVfalFzVe9DUa6sK1b4bLV6VajIJJCy1AxmPEzGpc1o/s1600/video+camera+.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEiI1SrC03GyQGwzcAz7bA_noFyglVtnEq94PpLWLF-dZUPIJMQBZJI7Ejm-tjTFDBJkvg18bcPSbs3dv34410dRMR0Q84Va8PQjlVfalFzVe9DUa6sK1b4bLV6VajIJJCy1AxmPEzGpc1o/s320/video+camera+.jpg" width="261" /></a></div><div style="text-align: left;">ಈಗ ನಾನು ಮೊದಲಿನಂತೆ Education beat ಮಾಡ್ತಾ ಇಲ್ಲ, ಬದಲಿಗೆ City Corporation (BBMP) beat ಮಾಡ್ತಾ ಇದ್ದೀನಿ. ಹೋದ ವಾರ ಬೆಳಿಗ್ಗೆ ಬೆಳಿಗ್ಗೆ ಪುಟ್ಟೇನಹಳ್ಳಿ ದಾಟಿ, ಕೋಣನ ಕುಂಟೆಗೂ ಆಚೆ, ಜೆ ಪಿ ನಗರ ಎಂಟನೆ ಹಂತ (ಬಸವನ ಗುಡಿ, ವಿಜಯನಗರ, ಮಲ್ಲೇಶ್ವರ, ರಾಜಾಜಿನಗರ್..., ಇಲ್ಲಿ ವಾಸಿಸುವ ಮಂದಿಗೆ ಇದು ಊರ ಹೊರಗಿನ ಯಾವುದೋ ನಿರ್ಜನ ಪ್ರದೇಶ. ) ಇಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವರು, ವಸತಿ ಇರದ ಮಂದಿಗೆ, ರಾತ್ರಿ ವೇಳೆ ವಸತಿ ಕಲ್ಪಿಸಿಕೊಡುವ ಯೋಜನೆಗೆ ಚಾಲನೆ ಮಾಡುವವರಿದ್ದರು. </div><div style="text-align: left;"><br />
</div><div style="text-align: left;">ಇದರ ಚಾಲನೆ ನೀಡಲು ಪತ್ರಿಕೆಯವರಿಗೆ ಆಮಂತ್ರಣ ಕಳಿಸಿದ್ದರು. ಅದು ಬೆಳಿಗ್ಗೆ ಹನ್ನೊಂದಕ್ಕೆ ಇತ್ತು. ಸಾಮಾನ್ಯವಾಗಿ, ನಾವುಗಳು ದೂರದ ಜಾಗ ಇದ್ದಾರೆ, ಅದು ಅಷ್ಟು ಬೆಳಿಗ್ಗೆ ಇದ್ದಾರೆ, ತುಂಬಾ important ಅಲ್ಲದಿದ್ದರೆ, ಹೋಗೋದೇ ಇಲ್ಲ. ಅವತ್ತಿನ ಹಿಂದಿನ ದಿನ ನಮ್ಮ ಹೊಸ ಚೀಫ್ ರಿಪೋರ್ಟರ್ ಅವರಿಗೆ, ಸಾರ್ ಇದಕ್ಕೆ ನಾನು ಹೋಗ್ತೀನಿ, ಇಂಟರೆಸ್ಟಿಂಗ್ ಆಗಿರಬಹುದು, ಹ್ಯುಮನ್ ಇಂಟರೆಸ್ಟ್ ವಸ್ತು ಇರುವ ಹಾಗಿದೆ, ಹೋಗ್ತೀನಿ ಅಂದೇ, ಅವ್ರು ಸರಿ ಅಂದ್ರು. </div><div style="text-align: left;"><br />
</div><div style="text-align: left;">ಮಗಳು ಬಂದ ಮೇಲೆ ರಾತ್ರಿಯೆಲ್ಲ ಜಾಗರಣೆ. ಬೆಳಿಗ್ಗೆ ಏಳುವುದು ತಡ. ಅಂದು ಹೀಗೆ ಆಯಿತು. ಎದ್ದದ್ದೇ ತಡ, ಬೇಗ ಬೇಗ ರೆಡಿ ಆಗಿ, ಸತ್ತೆನೋ ಕೆಟ್ಟೆನೋ ಅಂತ ಪಾಲಿಕೆ ಮುಖ್ಯ ಕಚೇರಿಗೆ ಹೋದೆ. ಅಲ್ಲಿಂದ ಪಾಲಿಕೆಯವರು ಮಾದ್ಯಮದವರಿಗೆ ಕಾರ್ಯಕ್ರಮ ನಡೆಯುವ ಜಾಗಕ್ಕೆಹೋಗಲು ವಾಹನ ಸೌಕರ್ಯ ಮಾಡಿದ್ದರು. ಹತ್ತುವರೆಗೆ ಅಲ್ಲಿರಬೇಕಿತ್ತು. ಆಗಲೇ ಹತ್ತು ಕಾಲು ಆಗಿತ್ತು. ಪಾಲಿಕೆಯವರಿಗೆ ಫೋನ್ ಮಾಡಿ, ಹತ್ತು ನಿಮಿಷ ಹಿಂಚು ಮುಂಚು ಬರ್ತೇನೆ ಅಂದೇ. ಈ ಮದ್ಯೆ ಮೈಸೂರ್ ಫ್ಲ್ಯೋವೆರ್ ಮೇಲೆಯೇ ದೊಡ್ಡ traffic jam<span> . ಹಂಗು ಇಂಗು ಪಾಲಿಕೆ ತಲುಪಿದಾಗ ಹನ್ನೊಂದು. ಅವ್ರು ನನಗೋಸ್ಕರ ಕಾಯುತ್ತಿದ್ದರು, ಯಾಕೆಂದರೆ ಮಾದ್ಯಮದವರಿಗೆ ಎಂದು ಮೀಸಲಿಟ್ಟ ವಾಹನದಲ್ಲಿ ನಾನೊಬ್ಬಳೆ ಮಾಧ್ಯಮ ಪ್ರತಿನಿಧಿ. ಅಲ್ಲಿಂದ ಊರಾಚೆ ಹೋದಾಗ, ಹನ್ನೆರಡು ಆಗ್ತಾ ಇತ್ತು. ಅದು ದೊಡ್ಡ ಮದುವೆ ಛತ್ರ. ವೇದಿಕೆ ಮೇಲೆ ಸುಮಾರು 10<span> ರಿಂದ 15 ಮಂದಿ ಜನರು. ಇನ್ನು ಮೇಯರ್ ಬಂದಿರಲಿಲ್ಲ. ಅವ್ರು ಬಂದಾಗ 12<span> </span>.30<span> . </span></span></span></div><div style="text-align: left;"><span><span><span><br />
</span></span></span></div><div style="text-align: left;"><span><span>ನಾನಂದು ಕೊಂಡಿದ್ದೆ ಬೇರೆ, ಅಲ್ಲಿ ಆಗಿದ್ದೆ ಬೇರೆ. ವಸತಿ ಇರದವರಿಗೆ (ಅಂದರೆ ರಾತ್ರಿ ವೇಳೆ ಫುಟ್ಪಾತ್ ಮೇಲೆ ಮಲಗುವವರಿಗೆ) ವಸತಿ ಅಂದ್ರೆ, ಪುಟ್ಟ ಪುಟ್ಟ ಮನೆ, ಚಿಕ್ಕ ಚೊಕ್ಕ ರೂಂ, ಬಾತ್ರೂಂ, ಏನೇನೋ ಕಲ್ಪಿಸಿಕೊಂಡು ಹೋಗಿದ್ದೆ, ಆದ್ರೆ ಅಲ್ಲಿ ಹೋದ ಮೇಲೆ ಅಷ್ಟೇ ತಿಳಿಯಿತು, ಪಾಲಿಕೆಯವರ ಕಾಮ್ಮುನಿಟಿ ಹಾಲ್ ನಲ್ಲಿ ಅವರಿಗೆಲ್ಲ ವಸತಿ. ಆ ಕಾಮ್ಮುನಿಟಿ ಹಾಲೋ ಕಾರ್ಯಕ್ರಮ ನಡೆಯುವ ಜಾಗಕ್ಕಿಂತ ಬಹಳ ದೂರ ಇದೆ. ಏನಪ್ಪಾ ಮಾಡಲಿ ಅಂತ ಅನ್ಕೊತ ಇರಬೇಕಿದ್ದಾಗ, ಸುವರ್ಣ ಚಾನೆಲ್ ತಂಡ ಬಂತು. ಅಲ್ಲಿನ ಪತ್ರಕರ್ತೆ ಹೆಸರು ಕೂಡ ಅಶ್ವಿನಿ. ಅವರು ಕೂಡ ನನ್ನ ಹಾಗೆ ಬೇಸ್ತು ಬಿದ್ದವರೇ. ಒಂತರ ಸಮಾನ ದುಃಖಿಗಳು.</span></span></div><div style="text-align: left;"><span><span><br />
</span></span></div><div style="text-align: left;"><span>ಇನ್ನೇನು ಮಾಡುವುದು, ಪ್ಯಾಕ್ ಅಪ್ ಅನ್ಕೊತ ಇದ್ವಿ. ಆಗಲೇ ವೇದಿಕೆಯಲ್ಲಿ ವಸತಿ ಕಲ್ಪಿಸಿಕೊಡುವವರಿಗೆ ಪಾಲಿಕೆ ವತಿಯಿಂದ ದೊಡ್ಡ ಬ್ಯಾಗ್ ಕೊಡ್ತಾ ಇದ್ರೂ. ಇದರಲ್ಲಿ ಹಾಸಲು, ಹೊದ್ದುಕೊಳ್ಳಲು, ಟೂತ್ ಪೇಸ್ಟ್ , ಬ್ರುಶ್, ಸೋಪ್ ಎಲ್ಲವು ಇತ್ತು. ಸರಿ ಅಂತಹ ಬ್ಯಾಗ್ ಪಡೆದವರೊಂದಿಗೆ ಮಾತನಾಡೋಣ, ಇಷ್ಟು ದೂರ ಬಂದದಕ್ಕು ಬರಿಲಿಕೆ ಏನಾದ್ರೂ ಸಿಗತ್ತೆ ಅಂತ, ವೇದಿಕೆ ಇಂದ ಕೆಳಗೆ ಇಳಿಯುತ್ತಿದ್ದ ಜನರಿಗೆ ಮಾತನಾಡಿಸಲು ನಾವಿಬ್ಬರು ತೀರ್ಮಾನಿಸಿದೆವು.</span></div><div style="text-align: left;"><span><br />
</span></div><div style="text-align: left;"><span>ಅಲ್ಲಿ ಬಂದ ಸುಮಾರು ಮಂದಿ, ಉತ್ತರ ಭಾರತದವರು. ಕೇವಲ ಹಿಂದಿ ಭಾಷೆ ಮಾತ್ರ ಗೊತ್ತಿತ್ತು. ನಾನು ಹರಕು ಮುರಕು ಹಿಂದಿಲಿ ಕೇಳಿದೆ, ಅವರೆಲ್ಲರೂ ಕತೆ ಹೇಳಿದರು. ಆದರೆ ಸುವರ್ಣ ಚಾನೆಲ್ ಅವರಿಗೆ, ಕನ್ನಡಲ್ಲಿ ಮಾತನಾಡುವವರು ಬೇಕಿತ್ತು. ಅಂತು ಇಂತೂ ಒಬ್ಬಳು ಮಹಿಳೆ ಬಂದಳು, ಕನ್ನಡದಲ್ಲಿ ಮಾತನಾಡಿದಳು, ಹಿಂದೆ ಫುಟ್ಪಾತ್ ಮೇಲೆ ಮಲ್ಕೊತಾ ಇದ್ವಿ, ರಾತ್ರಿ ಮಳೆ ಬಂದ್ರೆ, ಚಳಿ ಇದ್ರೆ ತುಂಬಾ ಕಷ್ಟ ಆಗ್ತಾ ಇತ್ತು, ಮಕ್ಕಳು ಇದ್ದಾರೆ, ಅಂತೆಲ್ಲ ಕತೆ ಹೇಳಿದಳು,</span></div><div style="text-align: left;"><span><br />
</span></div><div style="text-align: left;"><span>ಸುವರ್ಣ ಚಾನೆಲ್ ಅವ್ರಿಗೆ ಸದ್ಯ ಯಾರಾದ್ರು ಒಬ್ಬಳು ಕನ್ನಡದ ಲ್ಲಿ ಮಾತಾನಾಡಿದಳು ಅಂತ ಸಮಾಧಾನ ಆಯಿತು. ಸರಿ ಚಾನೆಲ್ ಪತ್ರಕರ್ತೆ ತಮ್ಮ ಕ್ಯಾಮೆರಾಮ್ಯಾನ್ ಗೆ ಕರೆದು, ಕ್ಯಾಮೆರಾ ಆನ್ ಮಾಡಕ್ಕೆ ಹೇಳಿ, ತಮ್ಮ ಮೈಕ್ ಮುಂದೆ ಹಿಡಿದು, ಈಗ ಹೇಳಿದನ್ನು ಮತ್ತೊಮ್ಮೆ ಹೇಳಿ ಎಂದಳು, ಆಕೆಗೋ ಮೈಕ್ ನೋಡುತ್ತಿದ್ದಾನೆ ಸಂಕೋಚ, ಅಲ್ಲಿವರೆಗೆ ಚನ್ನಾಗಿ ಮಾತನಾಡಿದ ಆಕೆ ಬಾಯಿ ಕೆಟ್ಟವಳಂತೆ ನಿಂತಳು. ನಮ್ಮ ಸುವರ್ಣ ಚಾನೆಲ್ ಅವ್ರು ಮತ್ತೊಮ್ಮೆ ಕೇಳಿಕೊಂಡಾಗ ಆ ಹೆಂಗಸು ನನ್ನ ಕಡೆ ತೋರಿಸಿ, "ಇವರಿಗೆ ಕೇಳಿ, ಈಗಷ್ಟೆ ಅವರಿಗೆ ಹೇಳಿದ್ದೇನೆ, ಅವರಿಗೆ ಗೊತ್ತು" ಅಂತ ಹೇಳಿ ಹೊರಟೆ ಬಿಟ್ಟಳು. !!!!</span></div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div></div>Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-13180537613321690182011-04-29T06:40:00.000-07:002011-04-29T06:40:02.193-07:00ತಿದ್ದಿದ್ದನ್ನು ಗುದ್ದು !!<div dir="ltr" style="text-align: left;" trbidi="on"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgrSjUHYh3hlVM5RDcHJUOk-Ppum4Hbg6iE4t9RwO3Q7aRRsln9cmeqtNHU2IJk7fGyWd31tZvE112CC4geaLob4SOw4i7Hz4WnPBii27vU8fZOa9DTuUaxdNejkXZ79CVP37tUq8295sM/s1600/edit_user_l.png" imageanchor="1" style="clear: right; float: right; margin-bottom: 1em; margin-left: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEgrSjUHYh3hlVM5RDcHJUOk-Ppum4Hbg6iE4t9RwO3Q7aRRsln9cmeqtNHU2IJk7fGyWd31tZvE112CC4geaLob4SOw4i7Hz4WnPBii27vU8fZOa9DTuUaxdNejkXZ79CVP37tUq8295sM/s320/edit_user_l.png" width="320" /></a></div><div style="text-align: left;"><br />
</div><div style="text-align: left;">ಪ್ರತಿ ಮಾದ್ಯಮದ ಕಚೇರಿಯಲ್ಲಿ ಎರೆಡು ಬಳಗ ಇದ್ದೆ ಇರತ್ತೆ, ವರದಿಗಾರರು ಹಾಗು ಉಪಸಂಪಾದಕರು. ವರದಿಗಾರರು ವರದಿ ಮಾಡಿ ಕೊಡ್ತಾರೆ, ಉಪಸಂಪಾದಕರು ಅದನ್ನು ತಿದ್ದಿ ತೀಡಿ, ಅದಕ್ಕೊಂದು ರೂಪ ಕೊಡ್ತಾರೆ. ವರದಿಗಾರರು ಕಾಗುಣಿತ ಅಥವಾ ಇನ್ಯಾವುದೇ ತಪ್ಪು ಮಾಡಿದಲ್ಲಿ, ಅದನ್ನು ಸರಿಪಡಿಸುವುದು ಇದೆ ಉಪಸಂಪಾದಕರು. ಕೆಲವೊಮ್ಮೆ ಅವರ ಬಳಿಯೇ ತಪ್ಪು ಆಗಿದ್ದು ಉಂಟು, ನನ್ನ ಗಮನಕ್ಕೆ (ಕೇವಲ ನನ್ನ ವರದಿಗಳ ಬಗ್ಗೆ ಹೇಳುತಿದ್ದೇನೆ ) ಬಂದ ತಪ್ಪುಗಳನ್ನು ನೋಡಿ ಸರಿ ಪಡಿಸಿ, ಚಿಕ್ಕ ಪುಟ್ಟ ತೊಂದರೆ ತಪ್ಪಿಸಿದ್ದು ಉಂಟು. </div><div style="text-align: left;"><br />
</div><div style="text-align: left;">ಒಮ್ಮೆ ಹೀಗೆ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗಾಗಿ ಸ್ಥಿರ ದೂರವಾಣಿ ವ್ಯವಸ್ತೆ ಮಾಡಲಾಗಿತ್ತು. ಅದರ ಉದ್ಘಾಟನೆಗೆ ಹೋಗಿದ್ದೆ. ಅಲ್ಲಿಯ ಒಬ್ಬ ಪೋಲಿಸ್ ನನಗೆ ಸೋರ್ಸ್ ಆಗಿದ್ದ. ಕೆಲ ದಿನಗಳ ನಂತರ ಆ ವ್ಯವಸ್ಥೆ ಹೇಗೆ ನಡಿಯುತ್ತಿದೆ ಅಂತ ನನ್ನ ಸೋರ್ಸ್ಗೆ ಕೇಳಿದೆ. ಆತನ ಸಹೋದ್ಯ್ಗಿಯೇ ದೂರವಾಣಿ ಬೂತ್ ಬಳಿ ಕೂತು ಖೈದಿಗಳು ಮಾಡುವ ಕರೆಗಳ ಬಗ್ಗೆ ನಿಗಾ ವಹಿಸುತಿದ್ದ. ಆಗ ಪರಪ್ಪನ ಅಗ್ರಹಾರದಲ್ಲಿ ಐದು ಸಾವಿರಕ್ಕೂ ಹೆಚ್ಚು ಖೈದಿಗಳು ಇದ್ದರು. ಆದರೆ ಒಬ್ಬನೇ ಪೋಲಿಸ್ ಕರೆಗಳನ್ನು ನೋಡಿಕೊಳ್ಳುತಿದ್ದ. </div><div style="text-align: left;"><br />
</div><div style="text-align: left;">ನಾನು ನನ್ನ ಸೋರ್ಸ್ ಸಹೋದ್ಯ್ಗಿ ಬಳಿ ಮಾತನಾಡಿ ಲೇಖನ ಮಾಡಿದೆ. " ನಿನ್ನ ಹೆಸರನ್ನು ಗೌಪ್ಯವಾಗಿ ಇಡುತ್ತೇನೆ " ಎಂದು ಬರವಸೆ ಕೊಟ್ಟೆ. ಲೇಖನ ತಯಾರು ಆಯಿತು. ಮಾಹಿತಿಯನ್ನು ಬಲ್ಲ ಮೂಲಗಳಿಂದ ತಿಳಿದುಪಟ್ಟಿದೆ ಎಂದು ಉಲ್ಲೇಖಿಸಿ ಬರೆದೆ. ನಮ್ಮ ಉಪಸಂಪಾದಕ ಮಹಾಶಯ ನನ್ನನ್ನು ಕರೆದು ಯಾರು ಹೇಳಿದೂ, ಸುಳ್ಳು ಆಗಿದ್ದರೆ, ಹಂಗೆಲ್ಲ ಬರಿಬಾರದು ಅಂತೆಲ್ಲ ಭಾಷಣ ಮಾಡಿದರು. ಅದಕ್ಕೆ ನಾನು ಹೇಳಿದೆ, ಅದನ್ನು ನೋಡಿಕೊಳ್ಳುತಿದ್ದ ಪೇದೆಯೇ ನನಗೆ ತಿಳಿಸಿದ್ದಾರೆ ಎಂದೇ (ನಾನು ಮಾಡಿದ ತಪ್ಪು ಇದಾಗಿತ್ತು). ಅಂತ ಹೇಳಿ ಹೊರತು ಬಂದೆ. ಆದರೆ ಅಂದು ನನಗೆ ಏನಾಗಿತ್ತೋ ಏನೋ, ಅದೇ ಲೇಖನ ಪೇಜ್ ಮಾಡುವವರ ಹತ್ತಿರ ಹೋಗಿ ನೋಡಿದೆ, ನಮ್ಮ ಉಪಸಂಪಾದಕರು ಅದನ್ನು ನೋಡಿಕೊಳ್ಳುವ ಪೇದೆ ಹೀಗೆಂದು ಹೇಳಿದ ಅಂತ ಬದಲಾಯಿಸಿದ್ದರು. (ನಾನು ಬಲ್ಲ ಮೂಲಗಳಿಂದ ಅಂತ ಹಾಕಿದ್ದೆ). ಹೀಗೆ ಹಾಗಿದಲ್ಲಿ ಅಲ್ಲಿ ಒಬ್ಬನೇ ಪೇದೆ ನೋಡಿಕೊಳ್ಳುತಿದ್ದ, ಅವನ ಹೆಸರು ಆಚೆ ಬರುತಿತ್ತು. ಸರಿ ಪೇಜ್ ಮಾಡುವವರ ಬಳಿ ಮತ್ತೊಮ್ಮೆ ಬಲ್ಲ ಮೂಲಗಳಿಂದ ಅಂತ ಬದಲಾಯಿಸಿದೆ. </div><div style="text-align: left;"><br />
</div><div style="text-align: left;">ಮಾರನೆ ದಿನ ಅದೇ ಪೇದೆ ನನಗೆ ಫೋನ್ ಮಾಡಿ, ಮೇಡಂ ನಮ್ಮ ಸಾಹೇಬರು ತುಂಬಾ ಕೋಪದಲ್ಲಿ ಇದ್ದಾರೆ, ನನ್ನನ್ನು ಕರೆದು ಯಾರು ಹೇಳಿದ್ದು ಅಂತ ಬೈಯ್ದರು. ನಾನು ಏನು ತಿಳಿಯದವನಂತೆ ಗೊತ್ತಿಲ್ಲ ಎಂದಿದ್ದೇನೆ. ಅವರೇನಾದರೂ ನಿಮ್ಮನ್ನು ಸಂಪರ್ಕಿಸಿದರೆ, ನನ್ನ ಹೆಸರು ಹೇಳಬೇಡಿ ಅಂದ. ಒಮ್ಮೆಲೇ ದೇವರಿಗೆ ಥ್ಯಾಂಕ್ಸ್ ಹೇಳಿದೆ. ನಾನು ಅದನ್ನು ನೋಡದೆ ಹೋಗಿದ್ದಲ್ಲಿ, ಅನ್ಯಾಯವಾಗಿ ಈತನಿಗೆ ತೊಂದರೆ ಆಗುತಿತ್ತಲ್ಲ ಅಂತ. ಅದಾಗಿ ಒಂದು ವಾರಕ್ಕೆ ಗೊತ್ತಾಗಿದ್ದು ಏನೆಂದರೆ, ಪರಪ್ಪನ ಅಗ್ರಹಾರದಲ್ಲಿ ಅದೇ ಜಾಗಕ್ಕೆ ಮೂರು ಮಂದಿ ಪೇದೆಗಳನ್ನು ನೇಮಿಸಿದರು ಅಂತ...ಇದು ಒಂತರ Happy ending ಆಯಿತು. </div><div style="text-align: left;"><br />
</div><div style="text-align: left;">ಮತ್ತೊಮ್ಮೆ Transgenders ಗಳ ಬಗ್ಗೆ ವರದಿಯೊಂದು ಸಿದ್ದ ಪಡಿಸಿದೆ. ಅಂತಹ ಮೂರು ಜನರನ್ನು ಮಾತನಾಡಿಸಿ ಅವರ ಅಭಿಪ್ರಾಯ ಹಾಕಿದ್ದೆ. ಇವರಲ್ಲಿ "ಅವನನ್ನು" , 'ಅವಳು' ಅಂತನೋ ಇಲ್ಲ "ಅವಳನ್ನು", 'ಅವನು' ಅಂತನೋ ಸಂಬೋಧಿಸಿದರೆ ತುಂಬಾ ಕೋಪ ಬರುತಿತ್ತು. ನಾನು ಹಾಗೆ ಬರೆದ ಲೇಖನಗಳಲ್ಲಿ "They" (ಅವರು) ಅಂತ ಉಪಯೋಗಿಸಿ ಬರೆದಿದ್ದೆ. ನಮ್ಮ ಉಪಸಂಪಾದಕರು They ಅನ್ನುವ ಕಡೆ she ಅಂತ ಬದಲಾಯಿಸಿದರು. ಅವತ್ತು ಕೂಡ ಅದೃಷ್ಟ ನನ್ನ ಕಯ್ಯಲಿ ಇತ್ತು ಅಂತ ಅನ್ನಿಸುತ್ತದೆ, ಅದು ನನ್ನ ಕಣ್ಣಿಗೆ ಬಿಟ್ಟು. ಅದನ್ನು ಮೊದಲಿನಂತೆ ಬದಲಾಯಿಸಲು ಹೇಳಿದೆ, ಅದಕ್ಕೆ ನಮ್ಮ ಉಪಸಂಪಾದಕರು ಮನುಷ್ಯರನ್ನು They ಅಂತ ಸಂಭೋದಿಸುವ ಹಾಗಿಲ್ಲ ಅಂದರು. ಕೊನೆಗೆ ವಾದ ವಿವಾದಗಳಾಗಿ, ಕೊನೆ ನಾನು , he, she or they ಯಾವುದು ಬೇಡ, ಅವರ ಹೆಸರು ಹಾಕಿ ಎಂದೇ. ಹಾಗಾಗಿ ಪ್ರತಿ ಬಾರಿ ಪ್ಯಾರ, ಸಾಲುಗಳಲ್ಲಿ ಅವರ ಹೆಸರು ಹಾಕಲಾಯಿತು. ನನ್ನ ವರದಿಗಾರ ಮಿತ್ರರೊಬ್ಬರು "ದೊಡ್ಡ ಸಮಸ್ಯೆ ಇಂದ ಪಾರಾದಿರಿ' ಅಂತ ಹಾಸ್ಯ ಮಾಡಿದ್ದು ನೆನಪಿದೆ. </div><div style="text-align: left;"><br />
</div><div style="text-align: left;">ಇನ್ನೊಮ್ಮೆ ಹೀಗಾಯ್ತು. ಆಸಿಡ್ ದಾಳಿಯಿಂದ ಬಳಲುತಿದ್ದ ಮಹಿಳೆಯರ ಬಗ್ಗೆ ಸರಣಿ ಲೇಖನ ತಯಾರು ಮಾಡಬೇಕಾಯ್ತು. ಹಾಗಾಗಿ ಅನೇಕ ಅಂತಹ ದುರಾದೃಷ್ಟರ ಮನೆಗೆ ಹೋಗಬೇಕಾಯ್ತು. ನನ್ನ ಬಳಿಯೇ ಕ್ಯಾಮೆರಾ ಒಂದು ಇತ್ತು. ಹಾಗಾಗಿ ನಮ್ಮ photographers ಗೆ ಬೇಡ ಎಂದು ನಾನೇ ಹೊರಟೆ. ಹೀಗೆ ಹೋದವರ ಮನೆಯ ಪೈಕಿ ಹಾಸಿನಾಳ ಮನೆಯು ಒಂದು. ಜಾಲಹಳ್ಳಿ ಬಳಿ ಇದ್ದ ಅವರ ಮನೆಗೆ ಹೋಗಿ, ಅವರನ್ನು, ಅವರ ಕುತುಮ್ಭಾದವರನ್ನು ಮಾತನಾಡಿಸಿ, ಅವರ ಹಳೆಯ ಫೋಟೋ ಹಾಗು ಇಂದಿನ ಫೋಟೋ ಎರಡನ್ನು ತೆಗೆದುಕೊಂದು ಬಂದೆ. ಲೇಖನ ಹಾಗು ಫೋಟೋ ಎರಡನ್ನು ನಾನೇ ಮಾಡಿದೆ ಎಂಬ ಹುಮ್ಮಸಿನಿಂದ ಆಕೆಯ ಇಂದಿನ ಪೋಟೋ ಆಯ್ಕೆ ಮಾಡಿ ಪೇಜ್ ಮಾಡುವವರಿಗೆ ಕೊಟ್ಟೆ. ಅವರು ಅದನ್ನು JPG format ಬದಲಾಯಿಸಿ ಕೊಡಿ, ನಾನೇ ಮಾಡಬಹುದಿತ್ತು ಆದರೆ ನನಗೆ ಇನ್ನೊಂದು ಪೇಜ್ ಮಾಡುವುದಿದೆ ಎಂದರು. ಆ ಫೋಟೋ ತಕ್ಕಂತೆ ಜಾಗ ಬಿತ್ತುಕೊಂಡಿದ್ದೇನೆ ಎಂದರು.</div><div style="text-align: left;"><br />
</div><div style="text-align: left;">ಅಲ್ಲಿಂದ ನಮ್ಮ Photographer ಶಶಿ ಬಳಿ ಬಂದೆ. ಹಸಿನಾಳ ಇಂದಿನ ಮುಖ ಇರುವ ಫೋಟೋ jpg format ಮಾಡಿಕೊಡಿ ಎಂದೇ. ಶಶಿ ಎರೆಡು ನಿಮಿಷ ಆ ಫೋಟೋ ನೋಡಿ, ಇದು ಬೇಡ ಅವಳ ಹಳೆಯ ಸುಂದರ ಮುಖ ಹಾಕಿ ಎಂದ. ನನಗೆ ಜಾಲಹಳ್ಳಿ ವರೆಗೆ ಹೋಗಿ ತೆಗೆದ ಫೋಟೋ ಬೇಡ ಅಂತಾನಲ್ಲ ಅಂತ ಸಂಕಟ ಆಯಿತು. ಇಲ್ಲ ಇದೆ ಇರಲಿ ಎಂದು ವಾದ ಮಾಡಿದೆ. ಅದಕ್ಕೆ ಶಶಿ, " ರೀ ಅಶ್ವಿನಿ ನಿಮ್ಮ ಮುಖ ಹಿಂಗೆ ವಿಕಾರ ಆಗಿ, ಅದರ ಫೋಟೋ ಪತ್ರಿಕೆಗಳಲ್ಲಿ ಬಂದರೆ ಹೆಂಗೆ ಇರತ್ತೆ, '' ಎಂದ. ನಂಗೆ ಆ ಕ್ಷಣದಲ್ಲಿ ನನ್ನ ಬಗ್ಗೆಯೇ ಹೇಸಿಗೆ ಆಯಿತು. ಶಶಿ ನನ್ನ ಕಣ್ಣು ತೆರಸಿದ್ದು ಮಾತ್ರ ನಿಜ. ಮತ್ತೊಮ್ಮೆ ನಮ್ಮ ಪೇಜ್ ಮಾಡುವವರ ಬಳಿ ಹೋಗಿ, ಅವರು ಫೋಟೋಗಾಗಿ ಇಟ್ಟುಕೊಂಡ ಜಾಗವನ್ನು ಸ್ವಲ್ಪ ಬದಲಾಯಿಸಿ, ಹಸಿನಾಳ ಸುಂದರ ಮುಖ ಬರುವಂತೆ ಮಾಡಿದೆ. </div><div style="text-align: left;"><br />
</div><div style="text-align: left;">ಹೀಗೆ ಕೆಲವೊಮ್ಮೆ ಕೊನೆ ನಿಮಿಷದಲ್ಲಿ ಆದ ಬದಲಾವಣೆ ಸಣ್ಣ ಪುಟ್ಟ ತೊಂದರೆ ದೂರ ಮಾಡುತ್ತದೆ ಎಂದರೆ ತಪ್ಪಾಗಲಾರದು.</div><div style="text-align: left;"><br />
</div><div style="text-align: left;"><br />
</div></div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-34266174880846321412011-04-27T06:21:00.000-07:002011-04-27T06:21:28.772-07:00ಭಾಷಾಂತರ<div dir="ltr" style="text-align: left;" trbidi="on"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEip1d98hdOgwu1urDxB1uplqx20Z-zwhiunV7lv93jZKC89120Mb-Tfx7r3Dsw75-xF943LbBNMY5pEHCSzxRx6J_a9mDtyv2P61PuEf5HAVbQ7WVSeuJ8VkEC7fz0thGMcJvQPQZ1nL0M/s1600/lan.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEip1d98hdOgwu1urDxB1uplqx20Z-zwhiunV7lv93jZKC89120Mb-Tfx7r3Dsw75-xF943LbBNMY5pEHCSzxRx6J_a9mDtyv2P61PuEf5HAVbQ7WVSeuJ8VkEC7fz0thGMcJvQPQZ1nL0M/s1600/lan.jpg" /></a></div><div style="text-align: left;">ಬೆಂಗಳೂರಿನಲ್ಲಿ ಬದುಕಲು ಇಂತದೆ ಭಾಷೆ ಗೊತ್ತಿರಬೇಕು ಅಂತೇನಿಲ್ಲ, ಆದರೆ ಒಂದು ಭಾಷೆ ಗೊತ್ತಿಲ್ಲದಿದ್ದರೂ ಮಾದ್ಯಮದಲ್ಲಿ ಕೆಲಸ ಮಾಡುವವರಿಗೆ ಅವಾಂತರ ತಪ್ಪಿದಿಲ್ಲ. ಇಂಗ್ಲಿಶ್ ಪತ್ರಿಕೆಯಲ್ಲಿ ಕೆಲಸ ಮಾಡುವವಳಿಗೆ ಇಂಗ್ಲಿಶ್ ಒಂದು ಗೊತ್ತಿದ್ದರು ಸಾಕು ಅನ್ನುವುದು ಸರಿಯಲ್ಲ. </div><div style="text-align: left;"><br />
</div><div style="text-align: left;">ಬರದ ಭಾಷಯಿಂದ ನಾನು ಅನೇಕ ಬಾರಿ ಪೇಚಿಗೆ ಪಟ್ಟಿದ್ದು ಉಂಟು. ನಾನು internship ಮಾಡುವಾಗ ಉರ್ದು ಶಾಲಾ ಶಿಕ್ಷಕರ ಕಾರ್ಯಕ್ರಮಕ್ಕೆ ಕಳಿಸಿದ್ದರು. ಅಂದು ಸಂಜೆ ಜೋರಾಗಿ ಮಳೆ ಬರುತಿತ್ತು. ಸರಿ ಅಲ್ಲಿಗೆ ಹೋದರೆ ಸಭಾಂಗಣವು ತುಂಬಿತ್ತು. ಸಾಮಾನ್ಯವಾಗಿ ಮುಂದಿನ ಆಸನಗಳನ್ನು ಮಾದ್ಯಮದವರಿಗೆ ಬಿಟ್ಟಿರುತ್ತಾರೆ. ಮುಂದಿನ ಸಾಲಿನ ಆಸನವು ಖಾಲಿ ಇದ್ದ ಕಾರಣ ಅಲ್ಲಿ ಹೋಗಿ ಕೂತೆ. ಸ್ವಲ್ಪ ನಿಮಿಷಗಳ ನಂತರ ನೋಡುತ್ತೇನೆ, ಅಲ್ಲಿದ್ದವರು ನನ್ನನ್ನೇ ಗುರುಗುಟ್ಟಿ ನೋಡುತಿದ್ದರು. ಯಾಕೆ ಅಂತ ಆಮೇಲೆ ಗೊತ್ತಾದುದ್ದು...ಎಡ ಭಾಗದ ಆಸನಗಳಲ್ಲಿ ಕೇವಲ ಹೆಂಗಸರು ಕೂತಿದ್ದರು, ಅವರೆಲ್ಲ ಬೂರ್ಖದಾರಿ ಆಗಿದ್ದರು. ನಾನು ಬಲ ಭಾಗದಲ್ಲಿ ಗಂಡಸರಿಗೆ ಎಂದು ಮೀಸಲಿಟ್ಟ ಜಾಗದಲ್ಲಿ ರಾಜಾರೋಷವಾಗಿ ಕೂತಿದ್ದೆ. ಮೇಲಾಗಿ ಅಂದು ಜೀನ್ಸ್ ಹಾಕಿದ್ದೆ. </div><div style="text-align: left;"><br />
</div><div style="text-align: left;">ಇದೇನು ಭಾಷೆ ಬಗ್ಗೆ ಹೇಳುತಿದ್ದವಳು ಎಲ್ಲಿಗೋ ಕರೆದುಕೊಂಡು ಹೋದಳು ಅನ್ಕೊಂಡ್ರ? ಆಮೇಲೆ ನಾನು ಮುಜುಗೊರ ಪಟ್ಟುಕೊಂಡು, ಹೆಂಗಸರ ಸಾಲಿನಲ್ಲಿ ಕೂತೆ. ಮಳೆಯ ಕಾರಣ ಬರುವ ಅತಿಥಿಗಳು ಇನ್ನು ಬಂದಿರಲಿಲ್ಲ. ಹಾಗಾಗಿ ಅಲ್ಲಿದ್ದ ಶಿಕ್ಷಕರು ಉರ್ದುವಿನಲ್ಲಿ ಏನೇನೋ ಮಾತಾಡುತಿದ್ದರು. ನನಗೆ ಒಂದು ಅರ್ಥ ಆಗಲಿಲ್ಲ. invitation card ನೋಡಿದೆ, ಕನ್ನಡ ಬಲ್ಲವರ ಹೆಸರು ಇತ್ತು, ನಿಟ್ಟುಸಿರು ಬಿಟ್ಟೆ. ಆದರೆ ಅದು ಬಹಳ ಹೊತ್ತು ಇರಲಿಲ್ಲ. ಅತಿಥಿಗಳ ಹೆಸರಿನಲ್ಲಿ ಅಂದು ಬಂದವರು ಒಬ್ಬರೇ- C M Ibrahim. ಬಂದವರು ಉರ್ದುವಿನಲ್ಲಿ ಭಾಷಣ ಮಾಡಿದರು. ಪುಣ್ಯಕ್ಕೆ ಅದು ತುಂಬಾ ಮುಖ್ಯ ಕಾರ್ಯಕ್ರಮ ಆಗಿಲ್ಲದಿದ್ದರಿಂದ ಅದನ್ನು ವರದಿ ಮಾಡಬೇಕಾದ ಪ್ರಮೆಯೇ ಬರಲಿಲ್ಲ. ಆದರೆ ಮಾರನೆ ದಿನ ಅಂದಿನ ಕಾರ್ಯಕ್ರಮ ಮಾಡಿದವರು ತಮ್ಮ ವರದಿ ಬಂದಿಲ್ಲ ಎಂದು ಕಚೇರಿಗೆ ಫೋನ್ ಮಾಡಿ, ನಿಮ್ಮಿಂದ ಒಬ್ಬಳು ಜೀನ್ಸ್ ಹಾಕಿಕೊಂಡು ಒಂದು ಹುಡುಗಿ ಬಂದಿದ್ದಳು, ಅವಳು ಯಾಕೆ ವರದಿ ಮಾಡಿಲ್ಲ ಅಂತ ಪ್ರಶ್ನೆ ಮಾಡಿದರಂತೆ. "ಎಂತವರನ್ನು ಕಳುಹಿಸ್ತಿರ " ಅಂತ ಗೊಣಗಿದ್ದು ಉಂಟು. </div><div style="text-align: left;"><br />
</div><div style="text-align: left;">ಇನ್ನು ನಮ್ಮ ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ತುಂಬಾ ಮಲಯಾಳಿಗಳಿದ್ದರು. Nair service society ಯಾವುದೋ ದೊಡ್ಡ ಕಾರ್ಯಕ್ರಮಕ್ಕೆ ನಮ್ಮ ಎಕ್ಸ್ಪ್ರೆಸ್ ನ printer and publisher ಶಂಕರನ್ ನಾಯರ್ ಮುಖ್ಯ ಅತಿಥಿ ಆಗಿದ್ದರು. ನಮ್ಮವರು ಮುಖ್ಯ ಅತಿಥಿ ಇದ್ದ ಕಾರ್ಯಕ್ರಮಕ್ಕೆ ನಾವೇ ಹೋಗದಿದ್ದರೆ ಆಗುತ್ತದೆಯೇ? ನನ್ನ ಜೊತೆ ಬಂದ ಫೋಟೋಗ್ರಾಫಾರ್ ತಮಿಳಿನವನು. ಹಿಂದಿನ ದಿನ ನಾಯರ್ ಅವರು ಮಲೆಯಾಳಿ ವರದಿಗಾರರನ್ನು ಹಾಕಿ ಅಂತ ಹೇಳಿದರಂತೆ, ಆದರು ಯಾಕೋ ನಾನು ಹೋಗಬೇಕಾಗಿ ಬಂತು. ಅಲ್ಲಿ ಮತ್ತೆ ಅದೇ ಪ್ರಸಂಗ. ಮಲೆಯಾಳಂ ಅರ್ಥ ಆಗಲ್ಲ. ಪ್ರತಿಯೊಬ್ಬರೂ ಮಲೆಯಾಳಂನಲ್ಲಿ ಮಾತನಾಡಿದರು. ನಮ್ಮ ಮನಸ್ಥಿತಿ ಅರಿತ ನಾಯರ್ ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು. </div><div style="text-align: left;"><br />
</div><div style="text-align: left;">ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂಧರ್ಭದಲ್ಲಿ ಅಲಸುರಿಗೆ ಹೋಗಿದ್ದೆ. ಅಲ್ಲಿದ್ದ ಕಾರ್ಯಕರ್ತರು (ಬೆಂಗಳೂರಿನ ಹಾಗು ಮದರಾಸಿನ ತಮಿಳರು) ಕೇವಲ ತಮಿಳು ಬಲ್ಲವರಾಗಿದ್ದು, ಪುಣ್ಯಕ್ಕೆ ನನ್ನ ಸ್ನೇಹಿತೆ ಸಂಗೀತ ಇದ್ದ ಕಾರಣ </div><div style="text-align: left;">ನಾನು ವರದಿ ಮಾಡುವಂತಾಯ್ತು. </div><div style="text-align: left;"><br />
</div><div style="text-align: left;"><div style="text-align: left;">ಇಷ್ಟೆಲ್ಲಾ ಹೇಳಿ ಇದನ್ನು ಹೇಳದಿದ್ದರೆ ಆಗುತ್ತದೆಯೇ. ಅಂದು KSRTC ಕಚೇರಿಯಲ್ಲಿ KSRTC ಯು ಜಪಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಲ್ಲಿ ಇತ್ತು. ಜಪಾನ್ ದೇಶ ಮಂತ್ರಿ ಕೂಡ ಬಂದಿದ್ದ. ಅವರ ಭಾಷಣವನ್ನು ಜಪಾನಿ ಭಾಷೆಯಲ್ಲಿ ಮಾಡಲಾಯಿತು. ಅನುವಾದಕರು ಇಂಗ್ಲಿಶ್ ಹಾಗು ಕನ್ನಡದಲ್ಲಿ ಅದನ್ನೇ ಸಭೆಗೆ ತಿಳಿಸಿದರು. ಅಲ್ಲಿ ಅನುವಾದಕರು ಇದ್ದರು ಕೂಡ, ನಮ್ಮ ಮಂತ್ರಿಗಳು ತಮ್ಮ ಕೆಟ್ಟದಾದ ಇಂಗ್ಲಿಷ್ನಲ್ಲಿ ಹರಕು ಮುರುಕು ಮಾಡಿ ಮಾತನಾಡಿದರು. ಇದು ನಮ್ಮವರ ಭಾಷ ಪ್ರೇಮ !!!</div></div><div style="text-align: left;"><br />
</div><div style="text-align: left;"><br />
</div></div>Ashwini M Sripadhttp://www.blogger.com/profile/01699731701824302054noreply@blogger.com6tag:blogger.com,1999:blog-6673691930118722471.post-27354487773034831952011-04-14T06:32:00.000-07:002011-04-14T06:38:38.962-07:00ಮನೆಯವರಿಂದಲೇ ಹುಟ್ಟುವ ಸ್ಟೋರಿ ಐಡಿಯಾಗಳು !!<div dir="ltr" style="text-align: left;" trbidi="on"><div style="text-align: left;">"Blood is thicker than water", ಹಾಗಂತ ಇಂಗ್ಲಿಶ್ ನಲ್ಲಿ ನಾನ್ನುಡಿ ಇದೆ. ರಕ್ತ ಸಂಬಂಧವು ಬೇರೆಲ್ಲ ಸಂಬಂಧಗಳಿಗಿಂತ ಗಟ್ಟಿ ಅಂತೆ. ನನ್ನ ವಿಷಯದಲ್ಲಿ ಇದು ಸತ್ಯ! </div><div style="text-align: left;"><br />
</div><div style="text-align: left;"><a href="https://blogger.googleusercontent.com/img/b/R29vZ2xl/AVvXsEiaNjiQvEDGlNlyuQzYTj24LktZOqAGQ8ho4ddlDXqeboJi5ziTbwL4CkCD7UnPsBzxQPZi6wC0U7vZyw-w_PTKXb0tvgKQk7uF_oEg8wVtY8Tqg9Gob9NtniSXNwbTO_tUEE-7AcSy_uo/s1600/fff.gif" imageanchor="1" style="clear: right; float: right; margin-bottom: 1em; margin-left: 1em;"><img border="0" height="239" src="https://blogger.googleusercontent.com/img/b/R29vZ2xl/AVvXsEiaNjiQvEDGlNlyuQzYTj24LktZOqAGQ8ho4ddlDXqeboJi5ziTbwL4CkCD7UnPsBzxQPZi6wC0U7vZyw-w_PTKXb0tvgKQk7uF_oEg8wVtY8Tqg9Gob9NtniSXNwbTO_tUEE-7AcSy_uo/s320/fff.gif" width="320" /></a>ಹಾಡಿದ್ದೆ ಹಾಡು ಕಿಸಬಾಯಿ ದಾಸ ಅಂತ ಒಂದೇ ಕತೆ ದಿನ ಬರೆದರೆ, ನನಗೆ ಆಫೀಸಿನಿಂದ ಓಡಿಸ್ತಾರೆ. ದಿನ ಎಲ್ಲಿಂದ ಸ್ವಾಮಿ ಸ್ಟೋರಿ ಹುಡುಕಲಿ. ನಮ್ಮ " So called Sources", ಕತೆ ಕೊಡ್ತಾರೆ ಅಂತ ಎಷ್ಟೋ ಬಾರಿ ಯಾಮಾರಿಸಿದ್ದು ಉಂಟು. ತಲೆ ಕೆಟ್ಟು ಕೆರ ಆದಾಗ ಇರುವ ಸ್ಟೋರಿ ಐಡಿಯಾಗಳು ಮಾಯಾ ಆಗುತ್ತವೆ. ಆಗೆಲ್ಲ ನಂಗೆ ಸಹಾಯಕ್ಕೆ ಬರುವವರೆ ನನ್ನ ಮನೆಯವರು. ಅಮ್ಮ, ಅಪ್ಪ, ಅತ್ತೆ, ಅಕ್ಕ-ತಂಗಿ , ಗಂಡ, ಅಣ್ಣ-ತಮ್ಮ, ನಾದಿನಿ, ಚಿಕ್ಕಮ್ಮ, ಚಿಕ್ಕಪ್ಪ....ಒಬ್ಬರೇ ಇಬ್ಬರೇ, ಎಲ್ಲರು ನನ್ನ ಕತೆ ಕಟ್ಟಲು ಸಹಾಯ ಮಾಡಿದ್ದಾರೆ. ನನಗಷ್ಟೇ ಅಲ್ಲ, ನನ್ನ ಸ್ನಇಹ್ತರಿಗೂ, ಸಹೋದ್ಯೋಗಿಗಳಿಗೂ ಸಹಾಯ ಮಾಡಿದ್ದಾರೆ. </div><div style="text-align: left;"><br />
</div><div style="text-align: left;">ನನ್ನ ತಮ್ಮನ ಮದುವೆ ಆಗಿ ಮೂರೂ ದಿನಕ್ಕೆ ಲೋಕಸಭಾ ಎಲೆಕ್ಷನ್ ( 2009) ಇತ್ತು. ಅಂದು ರಾತ್ರಿ ಅವರು ಅಂಡಮಾನ್ ಇಲ್ಲಿಗೆ ಪ್ರಯಾಣ ಬೆಳೆಸುವವರು ಇದ್ದರು. ಪ್ಯಾಕ್ಕಿಂಗ್ ಮದ್ಯೆ ಬಿಡುವು ಮಾಡಿಕೊಂಡು, ಗಂಡ-ಹೆಂಡತಿ ಇಬ್ಬರು ವೋಟು ಹಾಕುವುದನ್ನು ಮರಿಯಲಿಲ್ಲ. ನನ್ನ ನಾದಿನಿಯ ವೋಟಿಂಗ್ ಅಡ್ರೆಸ್ ಅವಳ ತಾಯಿ ಮನೆಯಲ್ಲಿಯೇ ಇತ್ತು. ಎಲೆಕ್ಷನ್ ರೌಂಡ್ ಅಪ್ ಮಾಡುವಾಗ ಅದನ್ನು ಬರೆದೆ. ಮೊನ್ನೆ (ಜನವರಿ ಒಂದು), ಇವರಿಬ್ಬರಿಗೆ ಹೆಣ್ಣು ಮಗು ಆಯಿತು. ತಾರೀಖು 1.1.11 , ಅದು normal delivery, ಸುದ್ದಿಯಾಗದೇ ಇರುತ್ತದೆಯೇ? </div><div style="text-align: left;"><br />
</div><div style="text-align: left;">ನಮ್ಮ "Indian Express", ನಲ್ಲಿ "Edex" ಅಂತ Education supplement ಇದೆ. ಇದು ಚೆನ್ನೈ ಸೆಂಟರ್ ನಲ್ಲಿ ಮಾಡಲಾಗುತ್ತದೆ. ಇದು ಕೇವಲ ಕಾಲೇಜು ವಿದ್ಯಾರ್ಥಿಯರಿಗಾಗಿ ಇರುವ ಸಾಪ್ತಾಹಿಕ. ಇದರಲ್ಲಿ ಅವರಿಗಾಗಿ ಅನೇಕ ಕಾಲಂ ಇವೆ. ಅದರಲ್ಲಿ ಕಾಲೇಜು ವಿದ್ಯರ್ಥಿಯಯರು ತಮ್ಮ ಓದಿನ ಜೊತೆ ಸಮಾಜ ಸೇವೆ ಮಾಡುವವರ ಬಗ್ಗೆ ಇದರಲ್ಲಿ ಬರೆಯುತ್ತೇವೆ. ಇದನ್ನು ಮಾಡಲು ನಮ್ಮ ಚೆನ್ನೈ ಆಫಿಸ್ ನವರಿಗೆ ವಹಿಸಲಾಗಿದ್ದು, ಅವರು ಕೊನೆ ಗಳಿಗೆಯಲ್ಲಿ ನಮ್ಮ ತಲೆ ಮೇಲೆ ಕೂತು ಇವತ್ತೇ ಲೇಖನ ಕಳುಹಿಸಿ ಕೊಡಿ ಅಂತ ದೊಂಬಲು ಬಿಳ್ತಾರೆ. ಅವತ್ತು ಹಂಗೆ ಆಗಿದ್ದು, ಸಂಜೆ 5 ಗಂಟೆ. ಈಗಲೇ ಲೇಖನ ಕಳಿಸಿ ಅಂದರು. ಆ ಸಮಯದಲ್ಲಿ ಯಾವ ಕಾಲೇಜ್ ಇರತ್ತೆ ಹೇಳಿ? ಆಗ ನನ್ನ ಸಹಾಯಕ್ಕೆ ಬಂದವನು ನನ್ನ ಇನ್ನೊಬ್ಬ ಚಿಕ್ಕಮ್ಮನ ಮಗ. MBA ಓದುತ್ತ ಇದ್ದಾನೆ, ಅವನು ಹಾಗು ಅವನ ಸ್ನೇಹಿತರು ತಮ್ಮ ತಮ್ಮ ಹುಟ್ಟುಹಬ್ಬಗಳನ್ನೂ ದೊಡ್ಡ ಹೋಟೆಲ್ ನಲ್ಲಿ ಪಾರ್ಟಿ ಮಾಡದೆ, ಯಾವುದಾದರು ಅನಾಥಾಶ್ರಮಕ್ಕೆ ಹೋಗಿ ಮಕ್ಕಳಿಗೆ ಸಿಹಿ ಊಟ ಬಡಿಸುತ್ತಾರೆ. ಅವನ ಹಾಗು ಅವನ ಸ್ನೇಹಿತರ ಜೊತೆ ಫೋನ್ ನಲ್ಲಿ ಮಾತಾಡಿ, ಇ-ಮೇಲ್ ಮುಖಾಂತರ ಫೋಟೋ ತರಿಸಿಕೊಂಡು, ಚೆನ್ನೈ ಕೇಂದ್ರಕ್ಕೆ ಲೇಖನ ಕಳಿಸಿದೆ. </div><div style="text-align: left;"><br />
</div><div style="text-align: left;">ನನ್ನ ಸ್ನೇಹಿತೆ ಹಾಗು ಸಹೋದ್ಯೋಗಿ ಒಬ್ಬಳು ಬೆಂಗಳೂರಿನ ವಾರ್ಡ್ ಗಳ ಬಗ್ಗೆ ಲೇಖನಿ ಸರಮಾಲೆ ಮಾಡುತ್ತಿದ್ದಳು. ಅಲ್ಲಿ ವಾಸಿಸುವ ನಿವಾಸಿಗಳಿಂದ, ಅಲ್ಲಿ ಆಗುವ ಸಮಸ್ಯೆ ಬಗ್ಗೆ ಇರುತ್ತಿದ್ದ ಲೇಖನ ಅದು. ಅವರ ಫೋಟೋ ಸಮೇತ ಹಾಕುತ್ತಿದ್ದೆವು. ಆದರೆ, ಜನರು ಯಾಕೋ ಮಾತಾಡಲು ಹಿಂಜರಿಯುತ್ತಿದ್ದರು. ಆಗ ನನ್ನ ಕೊನೆ ಚಿಕ್ಕಮ್ಮ ಹಾಗು ಅವಳ ದಯೆ ಇಂದ ಅವಳ ನೆರೆ-ಹೊರೆಯವರು ಮಾತಾಡಿ, ನನ್ನ ಸಹೋದ್ಯೋಗಿಯ ಕೆಲಸ ಸುಲಭ ಮಾಡಿದಳು. </div><div style="text-align: left;"><br />
</div><div style="text-align: left;">ಅವಳ ಮಗ ಇನ್ನು ಶಾಲೆಗೇ ಹೋಗುತ್ತಿದ್ದಾನೆ. ಖಾಸಗಿ ಶಾಲೆಯಲ್ಲಿನ ಆಡಳಿತ ಮಂದಿಯವರ ದರ್ಭಾರಿನ ಬಗ್ಗೆ ಲೇಖನ ಬರಿಯುವಾಗ, ಅವನಿಂದ ತಿಳಿದ ವಿಷಯ ಎಂದರೆ, ಅವರ ಶಾಲೆಯಲ್ಲಿ ಮಕ್ಕಳಿಗೆ Adidas shoes ಕಡ್ಡಾಯವಾಗಿ ಹಾಕಬೇಕೆಂದು ಹೇಳಿದ್ದಾರೆ. ಅದು ಕಪ್ಪು ಹಾಗು ಬಿಳಿ ಶೂಸ್. ಬೆಳೆಯುವ ಹುಡುಗ ಎರೆಡು ಜೊತೆ...ಹಾಗಾಗಿ ವರ್ಷಕ್ಕೆ ನಾಲ್ಕು ಸಾವಿರ ಹಾಕುತ್ತಿದ್ದರು. ಇದು ಕೂಡ ಲೇಖನ ಮಾಡಿದೆ. ಇದನ್ನು ಓದಿದ ಪೋಷಕರು ಅನೇಕರು (ಇತರೆ ಶಾಲೆಗಳಿಂದ) ನನಗೆ ಮೇಲ್ ಮಾಡಿ ತಮ್ಮ ತೊಂದರೆ ಹೇಳಿಕೊಂಡು, ಅದರಿಂದ ಮತ್ತಷ್ಟು ಲೇಖನ ಮಾಡಿದ್ದು ಉಂಟು. </div><div style="text-align: left;"><br />
</div><div style="text-align: left;">ನನ್ನ ಅಕ್ಕನಿಂದ ಅವಳ ಮಗಳ ಶಾಲೆಯಲ್ಲಿ " Swine flu" ಸೀಸನ್ ನಲ್ಲಿ ಏನು ಮಾಡಿದರು ಅನ್ನುವುದು "education beat" ಮಾಡುವ ನನಗೆ ತುಂಬಾ ಉಪಯೋಗಗ್ಗೆ ಬಂತು. ಮಗಳಿಗೆ ನೆಗಡಿ ಇತ್ತೆಂದು ಶಾಲೆಗೇ ಕಲಿಸದೆ ಮನೆಯಲ್ಲಿ ಇಟ್ಟುಕೊಂಡ ಅಕ್ಕನಿಂದ ಪೋಷಕರ angle ಕೂಡ ಸಿಗ್ತು. </div><div style="text-align: left;"><br />
</div><div style="text-align: left;">ನನ್ನ ಅತ್ತೆ ವೈದ್ಯರು. ನನ್ನ ಸಹೋದ್ಯೋಗಿ health beat ಮಾಡುವವರು ಅನೇಕ ಬಾರಿ ಅತ್ತೆಯೊಂದಿಗೆ ಮಾತನಾಡಿದ್ದು ಉಂಟು. ಒಮ್ಮೆ ತುಂಬಾ ಜನರಿಗೆ ಜ್ವರ, joints pain ಬರುತಿತ್ತು (ಚಿಕನ್ ಗುನ್ಯ ಅಲ್ಲ ). ನನ್ನ ಅತ್ತೆಯ ಬಳಿ ಕೂಡ ಇಂತಹ ಅನೇಕ ಕೇಸ್ ಬಂದಿತ್ತು. ಅವರು ಅದರ ಬಗ್ಗೆ ಸಂಕ್ಷಿಪ್ತ ವಿವರ ನೀಡಿದ್ದು, ನನ್ನ ಸಹೋದ್ಯೋಗಿಗೆ ಉಪಯೋಗವಾಗಿತ್ತು.</div><div style="text-align: left;"><br />
</div><div style="text-align: left;">ಕಳೆದ ವರ್ಷ recession ಪರ್ವದ ನಂತರ, software company ಗಳಲ್ಲಿ ಇದ್ದಕ್ಕಿದ್ದಂತೆ ಉದ್ಯೋಗ ಅವಕಾಶಗಳು ಹೆಚ್ಚಾಯ್ತು. </div><div style="text-align: left;">ಒಂದು ಕಂಪನಿ ಇಂದ ಮತ್ತೊಂದಕ್ಕೆ ಹಾರುವ ಇಂಜಿನಿಯರ್ ಸಂಖ್ಯೆ ಏನು ಕಡಿಮೆ ಇರಲಿಲ್ಲ. ಇದಕ್ಕೆ ಅವರದೇ ಭಾಷೆಯಲ್ಲಿ ಹೇಳಬೇಕೆಂದರೆ "High attrition rate " ಅಂತಾರೆ. ತಮ್ಮ ಉದ್ಯೋಗಿಗಳನ್ನು ತಮ್ಮ ಕಂಪನಿಗಳಲ್ಲಿ ಉಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿದ್ದರು. ನನ್ನ ಗಂಡ software ಉದ್ಯೋಗಿ. ಅವರ ಕಂಪನಿಯಲ್ಲಿ notice period ಒಂದು ತಿಂಗಳಿಂದ ಮೂರಕ್ಕೆ ಹೆಚ್ಚಿಸಿದ್ದು ನನಗೆ story idea ಆಯಿತು. ಇದರ ಜಾಡನ್ನೇ ಹಿಡಿದು ಮತ್ತೊಂದಿಷ್ಟು ಕಮನಿಗಳಲ್ಲಿ ವಿಚಾರಿಸಿದಾಗ, ಆದ ಲೇಖನ ಪುಟ ಒಂದಕ್ಕೆ ಬಂತು. </div><div style="text-align: left;"><br />
</div><div style="text-align: left;">ಹಬ್ಬ ಹರಿದಿನ ಬಂತೆಂದರೆ, ಪ್ರತಿ ವೃತ್ತ ಪತ್ರಿಕೆಗಳಲ್ಲಿ religious column ಅಂದರೆ, ಹಬ್ಬಗಳ ಬಗ್ಗೆ, ಹೆಚ್ಚಾಗುವ ಹೂವಿನ ಬೆಲೆ ಬಗ್ಗೆ, ಪ್ರತಿ ವರ್ಷ ಬರಿತಿವಿ. ಆಗೆಲ್ಲ ನನ್ನಮ್ಮನಿಗೆ ಫೋನ್ ಕಟ್ಟಿಟ್ಟ ಬುತ್ತಿ. </div><div style="text-align: left;"><br />
</div><div style="text-align: left;">ಎಲ್ಲ ಕಡೆ ಸ್ಟೋರಿ ಐಡಿಯಾಗಳು ಸಿಗ್ತವೆ. ಆದರೆ ನಾವೇ ನೋಡಿಕೊಳ್ಳುವುದಿಲ್ಲ. ನಮ್ಮ ಮನೆಯವರಿಂದ ಕೆಲವು ಸ್ಟೋರಿ ಐಡಿಯಾಗಳು ಬಂದಿದ್ದು ಹೀಗೆ!!</div><div style="text-align: left;"><br />
</div><div style="text-align: left;"><br />
</div></div>Ashwini M Sripadhttp://www.blogger.com/profile/01699731701824302054noreply@blogger.com2tag:blogger.com,1999:blog-6673691930118722471.post-3735285387687481502011-04-07T08:07:00.000-07:002011-04-07T08:07:28.272-07:00ಅಯ್ಯೋ ವೊಕ್ಷ್ ಪಾಪ್ !!<div dir="ltr" style="text-align: left;" trbidi="on"><div><span class=" transl_class" id="1" title="Click to correct"><br />
</span><br />
<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhCVDAsvRESVoWRn1lwjkrTFj2nNs93Q2r-0P48RQARDYwxutCN4If_9UxzuRtSYGOLHb0N10FIBUcSED5qKkJ_1lwJznQWatVnYI7guGbNSURwn1JteAaigCrr7lSzIFsNw-fz6mzHn80/s1600/VoxPop.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhCVDAsvRESVoWRn1lwjkrTFj2nNs93Q2r-0P48RQARDYwxutCN4If_9UxzuRtSYGOLHb0N10FIBUcSED5qKkJ_1lwJznQWatVnYI7guGbNSURwn1JteAaigCrr7lSzIFsNw-fz6mzHn80/s1600/VoxPop.jpg" /></a></div><span class=" transl_class" id="1" title="Click to correct"><br />
</span><br />
<span class=" transl_class" id="1" title="Click to correct">ಜರ್ನಲಿಸಂ</span> <span class=" transl_class" id="2" title="Click to correct">ಅಂದರೆ</span> <span class=" transl_class" id="3" title="Click to correct">ಜನ</span><span class=" transl_class" id="4" title="Click to correct">ರ</span> <span class=" transl_class" id="5" title="Click to correct">ದನಿ</span> <span class=" transl_class" id="6" title="Click to correct">ಕೂಡ. </span><span class=" transl_class" id="7" title="Click to correct">ಅದರ</span> <span class=" transl_class" id="8" title="Click to correct">ಉದ್ದೇಶ</span> <span class=" transl_class" id="9" title="Click to correct">ಜನರ</span> <span class=" transl_class" id="10" title="Click to correct">ಆಶಯ </span><span class=" transl_class" id="14" title="Click to correct">ಎಂದರು</span> <span class=" transl_class" id="16" title="Click to correct">ತಪ್ಪಾಗಲಾರದು</span>. <span class=" transl_class" id="17" title="Click to correct">ಆ</span> <span class=" transl_class" id="18" title="Click to correct">ಮಟ್ಟಿಗೆ</span>, <span class=" transl_class" id="19" title="Click to correct">ಪತ್ರಿಕೋದ್ಯಮ</span> <span class=" transl_class" id="21" title="Click to correct">ಸ್ವಲ್ಪ</span> <span class=" transl_class" id="22" title="Click to correct">ಹಿಂದೆ</span> <span class=" transl_class" id="23" title="Click to correct">ಉಳಿದಿದೆ</span> <span class=" transl_class" id="24" title="Click to correct">ಎಂಬ</span> <span class=" transl_class" id="25" title="Click to correct">ಕೊರಗಿದೆ</span>, <span class=" transl_class" id="26" title="Click to correct">ಅದೇನೇ</span> <span class=" transl_class" id="27" title="Click to correct">ಇರಲಿ</span>. <span class=" transl_class" id="28" title="Click to correct">ನಮ್ಮಲ್ಲಿ</span> ``Vox Populi'' or ``Vox pop'' <span class=" transl_class" id="29" title="Click to correct">ಎಂಬ</span> <span class=" transl_class" id="30" title="Click to correct">ಆಚರಣೆ</span> <span class=" transl_class" id="31" title="Click to correct">ಇದೆ</span>. <span class=" transl_class" id="32" title="Click to correct">ಇದು</span> <span class=" transl_class" id="33" title="Click to correct">ಮೂಲತ</span> <span class=" transl_class" id="34" title="Click to correct">ಲ್ಯಾಟಿನ್</span> <span class=" transl_class" id="35" title="Click to correct">ಭಾಷೆಗೆ</span> <span class=" transl_class" id="36" title="Click to correct">ಸೇರಿದ್ದು</span>. <span class=" transl_class" id="37" title="Click to correct">ಅದರ</span> <span class=" transl_class" id="38" title="Click to correct">ಅರ್ಥ</span>, <span class=" transl_class" id="39" title="Click to correct">ಜನರ</span> <span class=" transl_class" id="40" title="Click to correct">ದನಿ</span> <span class=" transl_class" id="41" title="Click to correct">ಎಂದು</span>. <span class=" transl_class" id="42" title="Click to correct">ಇ</span><span class=" transl_class" id="43" title="Click to correct">ದು</span> <span class=" transl_class" id="44" title="Click to correct">ವಿದ್ಯುನ್ಮಾನ</span> <span class=" transl_class" id="45" title="Click to correct">ಮಾದ್ಯಮಕ್ಕೆ</span> <span class=" transl_class" id="46" title="Click to correct">ಮಾತ್ರ</span> <span class=" transl_class" id="47" title="Click to correct">ಸ್ಥಿಮಿತವಾಗಿಲ್ಲ</span>. <span class=" transl_class" id="48" title="Click to correct">ಇಲ್ಲಿ</span> <span class=" transl_class" id="49" title="Click to correct">ಪ್ರಸಕ್ತ</span> <span class=" transl_class" id="50" title="Click to correct">ವಿಚಾರಗಳ</span> <span class=" transl_class" id="51" title="Click to correct">ಬಗ್ಗೆ</span>, <span class=" transl_class" id="52" title="Click to correct">ಜನರ</span> <span class=" transl_class" id="53" title="Click to correct">ಅಭಿಪ್ರಾಯ</span> <span class=" transl_class" id="54" title="Click to correct">ಪಡೆಯಲಾಗುತ್ತದೆ.</span></div><br />
<div></div><br />
<div><div style="text-align: left;"><span class=" transl_class" id="55" title="Click to correct">ನಮ್ಮ</span> <span class=" transl_class" id="56" title="Click to correct">ಮುದ್ರಣ</span> <span class=" transl_class" id="57" title="Click to correct">ಮಾದ್ಯಮದಲ್ಲೂ</span> <span class=" transl_class" id="58" title="Click to correct">ಇಂತಹ</span> <span class=" transl_class" id="59" title="Click to correct">ಪದ್ಧತಿ</span> <span class=" transl_class" id="60" title="Click to correct">ಇದೆ</span>, <span class=" transl_class" id="61" title="Click to correct">ವರದಿಗಾರರಿಗೆ</span> <span class=" transl_class" id="62" title="Click to correct">ಇದು</span> <span class=" transl_class" id="63" title="Click to correct">ಬಹುತೇಕ</span> <span class=" transl_class" id="64" title="Click to correct">ಸಮಯದಲ್ಲಿ</span> <span class=" transl_class" id="65" title="Click to correct">ತಲೆನೋವಾಗಿ</span> <span class=" transl_class" id="66" title="Click to correct">ಪರಿಣಮಿಸುತ್ತದೆ</span>. ಸಾಮಾನ್ಯವಾಗಿ ಯಾವುದಾದರು ವಿಶೇಷ ಸಂಧರ್ಭದಲ್ಲಿ, ಉದಾಹರಣೆಗೆ ರೈಲ್ವೆ ಬಜೆಟ್, ಸಾಮಾನ್ಯ ಬಜೆಟ್, ಇಂತಹ ಸಂಧರ್ಭದಲ್ಲಿ ``Vox pop'' ಇರದ ಪತ್ರಿಕೆಗಳೇ ಇಲ್ಲ. ಬೆಳಿಗ್ಗೆ ದೆಹಲಿಯಲಿ ಅಥವಾ ಬೆಂಗಳೂರಿನಲ್ಲಿ ಮಂಡಿಸಿದ ಬಜೆಟ್ ತುಂಬಾ ಜನಕ್ಕೆ ಸರಿಯಾಗಿ ಗೊತ್ತೇ ಇರಲ್ಲ. ಇನ್ನು ಅಭಿಪ್ರಾಯ ಹೇಳಿ ಅಂದ್ರೆ ಅವರು ತಾನೇ ಎಲ್ಲಿಂದ ಹೇಳಬೇಕು. ಅಂತಹ ಸಂಧರ್ಭಗಳಲ್ಲಿ ನಾವೇ ಕೆಲವು ಅಂಶಗಳನ್ನು ಹೇಳಿ, ಅವರಿಂದ ಬಲವಂತವಾಗಿ ಬಾಯಿ ಬಿಡಿಸಿದ್ದು ಉಂಟು. ಕೆಲವೊಮ್ಮೆ ಯಾರದೋ ಫೋಟೋ ಹಾಕಿ ಇನ್ನೊಬ್ಬರ ಅಭಿಪ್ರಾಯ ಅದಲು ಬದಲು ಕೂಡ ಆಗಿದೆ.</div><div style="text-align: left;"><br />
</div><div style="text-align: left;">ನಾನು Vijay Times ನಲ್ಲಿ ಕೆಲಸ ಮಾಡುವಾಗ " Select six" ಅಂತ ``Vox pop'' column ಇತ್ತು. ಸಾಲದಕ್ಕೆ, ಇದು ದಿನ ಬರುತಿತ್ತು. ದಿನ ಒಬ್ಬೊಬ್ಬ ವರದಿಗಾರರು photographer ಜೊತೆ ಹೋಗಿ ಅಂದಿನ ಪತ್ರಿಕೆಯಲ್ಲಿ ಬಂದ ಯಾವುದೋ ವಿಷಯಗಳ ಬಗ್ಗೆ ಆರು ಜನರಲ್ಲಿ ಪ್ರಶ್ನೆ ಕೇಳಬೇಕಿತ್ತು . ಅಂದು AIDS ಬಗ್ಗೆ ಇತ್ತು. ಪ್ರಶ್ನೆ " ನಿಮ್ಮ ಮನೆಯಲಿ ಯಾರಾದರು AIDS ರೋಗಿ ಇದ್ದರೆ ಏನು ಮಾಡ್ತಿರ" ?....ಕೆಲವರು ಹಂಗೆ ಹಿಂಗೆ ಉತ್ತರ ಕೊಟ್ಟರು. ಒಬ್ಬರು ಆಟೋ ಡ್ರೈವರ್ ನಿಂತಿದ್ದ. ಈ ಪ್ರಶ್ನೆ ಕೇಳಿದಕ್ಕೆ, " ಒಂದು ರೂಮಿನಲ್ಲಿ ಕೂಡಿ ಹಾಕ್ತಿವಿ" ಅಂದ. ನಾನು ಸುಮ್ಮನಿರದೆ ಅದು ಹಾಗೆಲ್ಲ ಹರಡುವ ಖಾಯಿಲೆ ಅಲ್ಲ ಅಂದೇ, ಅದಕ್ಕೆ " ಅವನು ಮೇಡಂ, ನಾವು ನಿಮ್ಮ ತರ ಟಸ್ಸು ಪುಸ್ಸು ಅಂತ ಇಂಗ್ಲಿಶ್ ಮಾತಾಡದೆ ಇರಬಹುದು, ಆದರೆ ನಾವು ಕೂಡ educated"....ಸರಿ ಇವನ ಹತ್ತಿರ ಏನು ಮಾತಾಡುವುದು ಅಂತ ಮುಂದೆ ಹೋದ್ವಿ. </div><div style="text-align: left;"><br />
</div><div style="text-align: left;"><div style="text-align: left;">ಕೆಲವೊಮ್ಮೆ ಅಭಿಪ್ರಾಯ ಹೇಳಬಯಸುವರು ತಮ್ಮ ಫೋಟೋ ತೆಗೆಯಲಿಕ್ಕೆ ಇಷ್ಟ ಪಡುವುದಿಲ್ಲ. ಕೆಲವರು ಮಾತದಕ್ಕು ಇಷ್ಟ ಪಡುವುದಿಲ್ಲ. ಹಾಗಂತ ಹೇಳಿದರೆ ಆಫಿಸ್ನಲ್ಲಿ ನಮಗೆ ಸುಮ್ಮನೆ ಬಿಡ್ತಾರ? ಇದಕ್ಕಾಗಿ ಕೆಲವೊಮ್ಮೆ ನಮ್ಮ ಫ್ರೆಂಡ್ಸ್ಗಳಿಗೆ (ಮಾದ್ಯಮದಲ್ಲಿ ಕೆಲಸ ಮಾಡದ) ಸ್ನೇಹಿತರಿಗೆ ಫೋನ್ ಮಾಡುವುದು. ಅವರ ಅಭಿಪ್ರಾಯ ಪಡಿಯುವುದು, ಇನ್ನೂ ಕೆಲವೊಮ್ಮೆ ಪೆದ್ದು ಶಿಕಾಮಣಿ ಸ್ನೇಹಿತರು ನಂಗೆ ಅದರ ಬಗ್ಗೆ ಗೊತ್ತಿಲ್ಲ, ನೀನೆ ನಿನ್ನ ಅಭಿಪ್ರಾಯ ಹಾಕಿ, ನನ್ನ ಹೆಸರು ಹಾಕು ಅಂದಿದ್ದು ಉಂಟು. ಅವರ ಫೋಟೋಗಳಿಗೆ ಆರ್ಕುಟ್ ಅಥವಾ ಫೇಸ್ ಬುಕ್ ಇದ್ದೆ ಇದ್ಯಲ್ಲ. </div><div style="text-align: left;"><br />
</div><div style="text-align: left;"> ``Vox pop'' ಗೆ ಗ್ಲಾಮರ್ ಕೊಡಲು ನಮ್ಮ ಆಫಿಸ್ ಇಂದ ಅದರಲ್ಲಿ ಒಂದು ಅಥವಾ ಎರೆಡು ಚೆಂದ ಹುಡುಗಿಯರು ಇರಲೇಬೇಕು ಅಂತ ಹೇಳಿಯೇ ಕಳುಹಿಸಿರುತ್ತಾರೆ . ಆ ಚೆಂದ ಹುಡುಗಿಯರು ಮಾತಾಡಕ್ಕೆ ಹಿಂದೆ ಮುಂದೆ ನೋಡ್ತಾರೆ. ಒಮ್ಮೆ ನಾನು ನಮ್ಮ photographer cunningham road ಗೆ ಹೋಗಿದ್ವಿ, ಅಂದು ಸಾಮಾನ್ಯ ಬಜೆಟ್ ಇತ್ತು. ಅದರ ಬಗ್ಗೆ ವಯಸ್ಸಾದವರೇ ಅಭಿಪ್ರಾಯ ಹೇಳುತ್ತಿದ್ದರು. ಹುಡುಗಿಯರಿಗೆ ಕೇಳಿದರೆ ಅದರ ಗಂಧ ಗಾಳಿ ಗೊತ್ತಿಲ್ಲ. ಒಬ್ಬಳೊಂತು ನಮ್ಮನ್ನು ಎಷ್ಟು ಅನುಮಾನಸ್ಪದದಲ್ಲಿ ನೋದಿದಳೆಂದರೆ ನಿಮ್ಮನ್ನು ಮಾಧ್ಯಮದವರು ಅಂತ ಹೆಂಗೆ ನಂಬುವುದು, ನಿಮ್ಮ Press card ತೋರಿಸಿ ಅಂದಳು. ನಮ್ಮ photographer ಗೆ ಇದು ಬಾರಿ ಅವಮಾನ ಆದಂತೆ ಆಯಿತು ಅಂತ ಕಾಣತ್ತೆ, ಇವಳು ಬೇಡ ಎಂದು ಮುಂದೆ ಹೋದ. ಇನ್ನು ಕೆಲವರು ನಾವು ಪ್ರೆಸ್ ಅಂತ ಹೇಳಿದರೆ, ಎಲ್ಲಿ ಮೈಕ್ ಇಲ್ಲ, ವೀಡಿಯೊ ಇಲ್ಲ ಅಂತ ಹೇಳಿದ್ದು ಉಂಟು. ಮಾಧ್ಯಮ ಶುರು ಆಗಿದ್ದೆ ಪತ್ರಿಕೆ ಇಂದ, ಆದರೆ ಎಲೆಕ್ಟ್ರೋನಿಕ್ ಮಾಧ್ಯಮದ ಹಾವಳಿ ಎಷ್ಟು ಇದೆ ಎಂದರೆ ಜನಕ್ಕೆ ಮಾಧ್ಯಮ ಎಂದರೆ ಟಿ ವಿ ಅನ್ನುವಷ್ಟಾಗಿದೆ.</div><div style="text-align: left;"><br />
</div><div style="text-align: left;">ಮತ್ತೊಮ್ಮೆ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಸಂಧರ್ಭದಲ್ಲಿ ಮಹಿಳ ಉದ್ಯೋಗಿಗಳ ರಕ್ಷಣೆ ಬಗ್ಗೆ ಪ್ರಶ್ನೆ ಕೇಳಲು ಹೋದಾಗ, ಒಬ್ಬಳು ಹುಡುಗಿ ಮಾತಾಡಿದಳು. Infact, ಚೆನ್ನಾಗಿಯೇ ಮಾತನಾಡಿದಳು. ಫೋಟೋ ತೆಗಿಯಲು ಕೂಡ ಅಭ್ಯಂತರವಿಲ್ಲ ಅಂದಳು. ಅರೆ ವ್ಹಾ, ಇಂತೋರು ಸಿಕ್ಕಿಬಿಟ್ರೆ ಎಷ್ಟು ಚಂದ ಅನ್ಕೊಂದ್ವಿ. ಅಲ್ಲಿಂದ ಅಷ್ಟು ದೂರ ಬಂದಿರಲಿಕ್ಕಿಲ್ಲ, ಆ ಹುಡುಗಿ ಓದಿ ಬಂದಳು. ಬಂದವಳೇ "ಮೇಡಂ ನನ್ನ ಮದುವೆ ಮುಂದಿನ ತಿಂಗಳು, ಪ್ಲೀಸ್ ಫೋಟೋ ಹಾಕಬೇಡಿ, ನಾನು ಹೇಳಿದನ್ನು ಕೂಡ ಹಾಕಬೇಡಿ. ನಮ್ಮ ಅತ್ತೆ ಮನೆಯವರು ತುಂಬಾ orthodox,'' ಅಂದಳು. ಇನ್ನೇನು ಮಾಡಕ್ಕೆ ಆಗತ್ತೆ ಅಲ್ವ? </div><div style="text-align: left;">ಮತ್ತೊಂದು ಹುಡುಗಿಯ ಹುಡುಕುತ್ತ ಹೋದ್ವಿ!!!!</div><div style="text-align: left;"><br />
</div></div></div></div>Ashwini M Sripadhttp://www.blogger.com/profile/01699731701824302054noreply@blogger.com1tag:blogger.com,1999:blog-6673691930118722471.post-82200779985392533692011-04-05T08:18:00.000-07:002011-04-05T08:18:01.469-07:00ರಾಹುಲಗಿರಿ<div dir="ltr" style="text-align: left;" trbidi="on"><div style="text-align: left;"><br />
</div><div style="text-align: left;"><br />
</div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgaygKXQ1rBx2se-Pz_4HPNFDS2A4ybNFnyU9yvFcvCijzriKwoTNxtRqAIR68WVq9KV8JU5CC6opzGqc3g75t68G8xuqMGMaq5IWd33halBgA2uceOURAUCwJHfLoSPz_CPx7GDaiwtB8/s1600/222.jpg" imageanchor="1" style="margin-left: 1em; margin-right: 1em;"><img border="0" height="192" r6="true" src="https://blogger.googleusercontent.com/img/b/R29vZ2xl/AVvXsEgaygKXQ1rBx2se-Pz_4HPNFDS2A4ybNFnyU9yvFcvCijzriKwoTNxtRqAIR68WVq9KV8JU5CC6opzGqc3g75t68G8xuqMGMaq5IWd33halBgA2uceOURAUCwJHfLoSPz_CPx7GDaiwtB8/s320/222.jpg" width="320" /></a></div><div style="text-align: left;">ಮಂದಿ ಮರುಳೋ, ಮಾಧ್ಯಮ ಮರುಳೋ ಗೊತ್ತಿಲ್ಲ. ಕೆಲವರು ಸುದ್ದಿಯಾಗಲು ನಾನ ಸರ್ಕಸ್ ಮಾಡ್ತಾರೆ, ಕೆಲವರು ನಕ್ಕರು, ಅತ್ತರು, ಕೆಮ್ಮಿದರು ಸುದ್ದಿಯಾಗುತ್ತದೆ. ಇಂದಿರಾ ಗಾಂಧಿ ಅವರ ಮಕ್ಕಳು, ಸೊಸೆಯರು, ಮೊಮ್ಮಕ್ಕಳು, ಎಲ್ಲರು ಈ ಎರಡನೇ ವರ್ಗಕ್ಕೆ ಸೇರಿದವರು. ರಾಹುಲ್ ಗಾಂಧಿ ಇದಕ್ಕೆ ಹೊರತಾಗಿಲ್ಲ.</div><div style="text-align: left;"><br />
</div><div style="text-align: left;">ಕಳೆದ ಆಗಸ್ಟ್ ತಿಂಗಳಲ್ಲಿ ರಾಹುಲ್ ಗಾಂಧಿ ಬೆಂಗಳೊರಿಗೆ ಬರುವವರಿದ್ದರು. ಬಸವನಗುಡಿ ನ್ಯಾಷನಲ್ ಕಾಲೇಜ್ ಹಾಗು ನ್ಯಾಷನಲ್ ಲಾ ಸ್ಕೂಲ್, ನಾಗರಭಾವಿ ಇಲ್ಲಿಗೆ ಬಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡ್ತ್ತಾರೆ ಅಂತ ಗೊತ್ತಾಯ್ತು. ಆಫಿಸ್ನಲ್ಲಿ ಮುಖ್ಯ ವರದಿಗಾರರು ಅಲ್ಲಿಗೆ ಹೋಗು ಅಂತ ಹೇಳಿದರು. ಮಧ್ಯನ್ನ ಮೂರೂ ಗಂಟೆ, ಶನಿವಾರ...ನನ್ನ husband ಜೊತೆ ಸ್ವಲ್ಪ ಸಮಯ ಕಳಿಯಬಹುದು ಅಂತ ಎಸ್ ಎಸ್ ಅಂದೇ. ಹಂಗೆ ಅಂದ ಮೇಲೆ ಗೊತ್ತಾಗಿದ್ದು, ಅಲ್ಲಿ ಮಾದ್ಯಮದವರಿಗೆ ಹೋಗಲು ಅನುಮತಿ ಇಲ್ಲ. ಇದು ರಾಹುಲ್ ಇಂದ ಬಂದ strict instruction ಅಂತೆ. ಇದೊಳ್ಳೆ ಪಿಕಲಾಟ ಅನ್ಕೊಂಡೆ. ಸರಿ ನ್ಯಾಷನಲ್ ಕಾಲೇಜ್ ಅಧ್ಯಕ್ಷರಿಗೆ ಫೋನ್ ಮಾಡಿ ಕೇಳಿಕೊಂಡೆ, ಅವ್ರು ಕೂಡ ಅದನ್ನೇ ಹೇಳಿದರು. ಮೇಡಂ, ರಾಹುಲ್ನೊಂದಿಗೆ ಕೇವಲ ನಮ್ಮ ಪೋಲಿಸ್ ಅಷ್ಟೇ ಅಲ್ಲ, ಅವರೊಂದಿಗೆ special protection force ಇರ್ತಾರೆ. ನಾನು ಬೆಂಬಿಡದ ಬೂತದಂತೆ ಕೇಳಿದೆ, ಸರಿ ಅಲ್ಲಿಗೆ ಬನ್ನಿ, ಆದರೆ ಪತ್ರಕರ್ತರು ಅಂತ ಹೇಳಬೇಡಿ ಅಂದ್ರು. </div><div style="text-align: left;"><br />
</div><div style="text-align: left;">ಮೂರೂ ಗಂಟೆಗೆ ಶುರುವಾಗುವ ಕಾರ್ಯಕ್ರಮಕ್ಕೆ, 2 . 30 ಗೆ ಹೋದೆ. ಕಾಲೇಜ್ ಸುತ್ತ ಒಂದು ಕಿಲೋಮೀಟರು ಸರ್ಪಗಾವಲು. ಸಾಮಾನ್ಯವಾಗಿ ಮಾಧ್ಯಮದವರು ಬಂದರೆ ಹಲ್ಲು ಕಿರಿದು ಮಾಡಿ ಸ್ವಾಗತಿಸುವವರು ಇರ್ತಾರೆ. ಅಲ್ಲಿ ಮಾದ್ಯಮದವರಿಗೆ ಖ್ಯಾರೆ ಅನ್ನೋರಿರಲಿಲ್ಲ. ನಂಗು ಬಿಡಲಿಲ್ಲ. ಸರಿ, ಅಲ್ಲಿಂದಲೇ ಅಧ್ಯಕ್ಷರಿಗೆ ಫೋನ್ ಮಾಡಿದೆ. ಪಾಪ, ಅವ್ರೆ ಗೇಟ್ ವರ್ಗು ಬಂದರು. ಕಾಲೇಜ್ staff ಅಂತ ಹೇಳಿ ಕರ್ಕೊಂಡು ಹೋದರು. ಇಷ್ಟು ಬೇಗ....ಅರೆ ವಾ! ಸ್ವರ್ಗಕ್ಕೆ ಮೂರೇ ಗೇಣು. </div><div style="text-align: left;"><br />
</div><div style="text-align: left;">ಕಾಲೇಜ್ staff ಅನ್ನುವ badge ತಗಲಿಸಿಕೊಂಡು ಬಿಂಕದಿಂದ ಸಭಾಂಗಣದ ಕಡೆಗೆ ಹೋದೆ. ಅಲ್ಲಿಂದ ಶುರುವಾಯ್ತು ನೋಡಿ. ಮೇಡಂ, ಒಳಿಗೆ ಹೋಗುವಾಗ ಬ್ಯಾಗ್, ಮೊಬೈಲ್ ಏನನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ. ಪ್ರಿನ್ಸಿಪಾಲ್ ರೂಂ ನಲ್ಲಿ ಎಲ್ಲವನ್ನು ಇತ್ತು, ಬರಿಗೈ ನಲ್ಲಿ ಹೊರಟೆ. ಒಳಗೆ ಹೋದರೆ ನಿಲ್ಲುವಷ್ಟು ಜಾಗವಿಲ್ಲ. ಸದ್ಯಕ್ಕೆ, ಮುಂದಿನ ಎರೆದು row staff ಮೀಸಲು. ಖುಶಿ ಇಂದ ಹೋಗಿ ಕೂತರೆ, ಅಲ್ಲೇ ಇದ್ದ ಪೋಲಿಸ್ constable ಕೆಕ್ಕರಿಸಿಕೊಂಡು ನೋಡುತಿದ್ದ. ಹತ್ತಿರ ಬಂದವನೇ, staff badge ನೋಡಿ ಸಾರಿ ಮೇಡಂ, ವಿದ್ಯಾರ್ಥಿ ಅನ್ಕೊಂಡೆ ಅಂದ. ಹಂಗೆ ಹತ್ತು ನಿಮಿಷ ಆಯ್ತು, ನನ್ನ ಹಿಂದೆ ಬರಿ students . ಅವರ ಜೊತೆ ಇನ್ನೊಬ್ಬ ಮನುಷ್ಯ ಕೂತಿದ್ದ. ಮುಫ್ತಿಯಲ್ಲಿ ಇದ್ದ ಪೋಲಿಸ್. ಅವನಿಗೂ ಬೇಜಾರ್ ಆಗ್ತಿತ್ತು ಅಂತ ಕಾಣತ್ತೆ, ನೀವು ಯಾರು, ಹಂಗೆ ಹಿಂಗೆ ಪುರಾಣ ಶುರು ಮಾಡಿದ. ನಾನು ಈ ಕಾಲೇಜ್ನಲ್ಲಿ ಕೆಲಸ ಮಾಡ್ತೀನಿ ಅಂದೇ. ಅವನಿಗ್ಯಕೋ ಅನುಮಾನ ಬಂತು ಅಂತ ಕನೋತ್ತೆ. ಯಾಕೋ ಗೊತ್ತಿಲ್ಲ, ಹೇಳಿಬಿಟ್ಟೆ, ನಾನು ಮಾದ್ಯಮದವಳು ಅಂತ. ಅವನಿಗೆ ಟೆನ್ಶನ್ ಶುರು ಆಯಿತು. ಅಷ್ಟೊಂದು ಸೆಕ್ಯೂರಿಟಿ ಇತ್ತು, ಹೆಂಗೆ ಬಂದ್ರಿ ಅಂದ. ನೀವು ಇಲ್ಲಿ ಇದ್ದೀರಾ ಅಂತ ನಮ್ಮ ಸಾಹೇಬರಿಗೆ ಗೊತ್ತಾದ್ರೆ, ನನ್ನ ಕೆಲಸ ಹೋಗತ್ತೆ ಅಂದ. ನಾನು ಯಾಕಪ್ಪ ಹೇಳಲಿ ಅಂದೇ, ಆದರು ನಂಗೆ ಒಳಗೊಳಗೇ ಅಳಕು. </div><div style="text-align: left;"><br />
</div><div style="text-align: left;">ಮೂರಕ್ಕೆ ಶುರು ಆಗಬೇಕಿದ್ದ ಕಾರ್ಯಕ್ರಮಕ್ಕೆ, ರಾಹುಲ್ ಬಂದಿದ್ದು ಹೆಚ್ಚು ಕಡಿಮೆ ಐದಕ್ಕೆ, ಅರ್ಧ ಗಂಟೆ ಮುಂಚೆ ಹೋಗಿದ್ದು ಎಲ್ಲ ಸೇರಿ ಸುಮಾರು ಎರೆಡುವರೆ ಗಂಟೆ, ಒಬ್ಬಳೇ ಮಾತಿಲ್ಲದೆ ಕೂತಿದ್ದೆ. ಕೈಯಲ್ಲಿ ಮೊಬೈಲ್ ಇಲ್ಲ, ಪುಸ್ತಕ ಇಲ್ಲ, ಕೈ ಕಟ್ಟಿ ಸುಮ್ಮನೆ ಕುಳಿತುಕೊಳ್ಳುವ ಹಿಂಸೆ ಒಂದೆಡೆ, ಸಿಕ್ಕಿ ಹಾಕಿಕೊಂಡರೆ ಎಂಬ ಭಯ ಮತ್ತೊಂದೆಡೆ. ಅಂತು ಇಂತೂ ಯುವರಾಜರು ಬಂದರು. ಬಂದವರೇ ವಿದ್ಯರ್ತಿಗಳೊಂದಿಗೆ ಸಂವಾದಕ್ಕೆ ಶುರು ಮಾಡಿಕೊಂಡರು. ಕೆಲವು intersting questions , ಅದಕ್ಕೆ ತಕ್ಕಂತ ಖಡಕ್ ಉತ್ತರ. ಒಂದರ ಮೇಲೊಂದು ಪ್ರಶ್ನೆ, ಉತ್ತರ ಹೀಗೆ ಸಾಗಿತ್ತು. </div><div style="text-align: left;"><br />
</div><div style="text-align: left;">ನಾವು ವರದಿಗಾರರಿಗೆ ಕೆಟ್ಟ ಅಭ್ಯಾಸ ಏನೆಂದರೆ, ಅಲ್ಲಿ ಅಗುವುದನೆಲ್ಲ ರೆಕಾರ್ಡ್ ಅಥವಾ ಪೇಪರ್ ನಲ್ಲಿ ಬರೆದುಕೊಳ್ಳುವುದು, ಆಫಿಸ್ಗೆ ಹೋಗಿ ಅದನ್ನು ಕಕ್ಕುವುದು. ಆದರೆ, ಅವತ್ತು ಹಾಗೆ ಮಾಡಲು ಅಂತಹ ಅವಕಾಶ ಏನು ಇರಲಿಲ್ಲ. ನನ್ನ ಹಿಂದೆ ಇದ್ದ </div><div style="text-align: left;">ಮುಫ್ತಿ ಪೋಲಿಸ್ ಬಳಿ ಪೆನ್ ಇಸ್ಕೊಂಡು, ಪರೀಕ್ಷೆಯಲ್ಲಿ ಕಾಪಿ ಮಾಡುವ ವಿದ್ಯಾರ್ಥಿಯಂತೆ ಬೆರಳು, ಹಸ್ತದಲ್ಲಿ ಬರೆಯುತ್ತ ಹೋದೆ. ಅದು, ಕದ್ದು ಕದ್ದು ಬರೆದೆ. ಮುಂದಿನ ಸಾಲಿನಲ್ಲಿ ಕೂತು ಹೀಗೆ ಮಾಡಕ್ಕೆ ಹೋದರೆ, ಸಿಕ್ಕಿ ಬೀಳುವ ಸಂಭವ ಇತ್ತು. staff badge ಹಿಂದೆ ಕೂಡ ಬರೆದುಕೊಂಡೆ. </div><div style="text-align: left;"><br />
</div><div style="text-align: left;">ಅದು ಸಾಕಾಗಲಿಲ್ಲ. ಪುಟ್ಟ ಕೈಯ್ನಲ್ಲಿ ಎಷ್ಟು ಸಾದ್ಯ. ನನ್ನ ಪಕ್ಕ ಪ್ಲಾಸ್ಟಿಕ್ chair ಒಂದು ಇತ್ತು. ಅಲ್ಲಿ ಕಾಗೆ ಪಿಕ್ಕೆ ಬಿದ್ದಿತ್ತು, ಹಾಗಾಗಿ ಯಾರು ಅದರಲ್ಲಿ ಕೂತಿರಲಿಲ್ಲ. ತಡವಾಗಿ ಬಂದ ಮೇಷ್ಟ್ರೊಬ್ಬರು ಎಲ್ಲೂ ಜಾಗ ಸಿಗದೇ, ತಮ್ಮ ಬಳಿ ಇದ್ದ ಯಾವುದೋ ಹಳೆ visiting card ಇತ್ತು, ಅದರಲ್ಲಿ ಒರೆಸಿ ಕೆಳಗೆ ಹಾಕಿ, ಅದರಲ್ಲಿ ಕೂತುಕೊಂಡರು . ಅಲ್ಲಿ-ಇಲ್ಲಿ ನೋಡಿ ನಾನು ಅದನ್ನು ಕೂಡ "ಹೆಕ್ಕಿಕೊಂಡೆ", ಅದರ ಹಿಂದೆ ಕೂಡ ಬರೆದೆ. ಕಾಲಿನಲ್ಲಿ ಮುಟ್ಟಲು ಯೋಗ್ಯವಲ್ಲದನ್ನು, ಕೈನಲ್ಲಿ ಜೋಪಾನವಾಗಿ ಇಟ್ಟುಕೊಂಡೆ, ಏನು ಕರ್ಮ ಅಂತ ಬೈದುಕೊಂಡಿದ್ದು ಆಯಿತು. </div><div style="text-align: left;"><br />
</div><div style="text-align: left;">ಆಮೇಲೆ ಗೊತ್ತಾಗಿದ್ದು ಏನೆಂದರೆ, ಕೇವಲ photographers ಒಂದು ನಿಮಿಷ ಒಳಿಗೆ ಬಿಟ್ಟರಂತೆ, ಫೋಟೋ ತೆಗೆಯುತ್ತಿದ ಹಾಗೆ ಅವರನ್ನು ಅಲ್ಲಿಂದ ಸಾಗ ಹಾಕಿದರು.</div><div style="text-align: left;"><br />
</div><div style="text-align: left;">ಇಷ್ಟೆಲ್ಲಾ ಸಾಹಸ ಮಾಡಿ ಆಚೆ ಬರ್ತಾ ಇದ್ರೆ, ಅಲ್ಲಿ ಕಾಲೇಜ್ಗೆ ಸೇರಿದ ಇಬ್ಬರು ಮಂದಿ, ಹೊರಬರುತ್ತಿದ್ದ ಜನರಿಂದ badges ಇಸ್ಕೋತ ಇದ್ರು. ಇದೇನಪ್ಪ ಗ್ರಹಚಾರ ಅನ್ಕೊಂಡೆ, ಯಾಕಂದರೆ, ನಾನು ಅವರು ಕೊಟ್ಟ badge ಹಿಂದೆ ಕೂಡ ಬರೆದುಕೊಂಡಿದ್ದೆ. ಏನೋ ಸಬೂಬು ಹೇಳಿ, ಅಲ್ಲೊಂದು ಸಿಕ್ಕ ಓಣಿ ಇತ್ತು, ಅಲ್ಲಿಂದ ಹೊರ ಬಂದೆ. ಹೊರಬಂದವಳೇ, ಅಮ್ಮನಿಗೆ ಫೋನ್ ಮಾಡಿದೆ, ನಾನು ಅಷ್ಟು ಗಂಟೆ ಕಾಲ ಬಾಯಿ ಮುಚ್ಚಿಕೊಂಡಿದ್ದು ಒಂದು ದೊಡ್ಡ ಪವಾಡವೆ ಸರಿ. ಮಾತಾಡ ಬೇಕಿತ್ತು. </div><div style="text-align: left;"><br />
</div><div style="border-bottom: medium none; border-left: medium none; border-right: medium none; border-top: medium none; text-align: left;">ಅಲ್ಲಿಂದಲೇ ಆಫಿಸ್ಗೆ ಬರ್ತಾ ನಮ್ಮ ಸಂಪಾದಕರಿಗೆ ಮೆಸೇಜ್ ಮಾಡಿದೆ. "Good job , well done " ಅಂದ್ರು. ಇಷ್ಟೆಲ್ಲಾ ಸಾಹಸಕ್ಕೆ, ಅವರ ಶಹಬಾಸಗಿರಿ ಜೊತೆ, ಮಾರನೆ ದಿನದ ಪತ್ರಿಕೆಯ ಪೇಜ್ ಒನ್ ನಲ್ಲಿ, ನನ್ನ ಬೈಲೈನ್ ಸಮೇತ ಅದು ಪ್ರಕಟವಾಯ್ತು. ಪತ್ರಕರ್ತರಿಗೆ, ಅದು ವರದಿಗಾರರಿಗೆ, ಪೇಜ್ ಒಂದು ಹಾಗು ಬೈಲೈನ್ ದೊಡ್ಡ ಬಹುಮಾನವಿದ್ದಂತೆ !!!!!</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div style="text-align: left;"><br />
</div><div class="separator" style="border-bottom: medium none; border-left: medium none; border-right: medium none; border-top: medium none; clear: both; text-align: center;"></div></div>Ashwini M Sripadhttp://www.blogger.com/profile/01699731701824302054noreply@blogger.com7tag:blogger.com,1999:blog-6673691930118722471.post-63754663336456346282010-07-04T01:29:00.000-07:002010-07-04T02:13:16.564-07:00ವಿದ್ಯೆಯ ಬೆನ್ನೇರಿ....<a href="https://blogger.googleusercontent.com/img/b/R29vZ2xl/AVvXsEj2zIl59a8DAsc8D1j5zJtHMEPB7V2ur4VURc32xkUuXGu4tWLCS1RZc2qcVZKWHJQuDhNQ96O0niaJ8C2x2toEfZsb8Tu6Mu2XxOkz0qFIHAyXoLXmpcrqz4DiYHXGHjgoYQluwdWKru4/s1600/biblio_1_20040524.jpg"><img style="TEXT-ALIGN: center; MARGIN: 0px auto 10px; WIDTH: 200px; DISPLAY: block; HEIGHT: 181px; CURSOR: hand" id="BLOGGER_PHOTO_ID_5489976138017188130" border="0" alt="" src="https://blogger.googleusercontent.com/img/b/R29vZ2xl/AVvXsEj2zIl59a8DAsc8D1j5zJtHMEPB7V2ur4VURc32xkUuXGu4tWLCS1RZc2qcVZKWHJQuDhNQ96O0niaJ8C2x2toEfZsb8Tu6Mu2XxOkz0qFIHAyXoLXmpcrqz4DiYHXGHjgoYQluwdWKru4/s320/biblio_1_20040524.jpg" /></a><br /><div>ವಿದ್ಯೆ ಯಾರ ಸ್ವತ್ತಲ್ಲ. ಯಾರಿಂದಲೂ ಕದಿಯಲಾರದ ವಸ್ತು ವಿದ್ಯೆಯಂತೆ. ( ತಮ್ಮ ಜ್ಞಾನಕ್ಕೆ ಪೇಟೆಂಟ್ ಮಾಡಿಕೊಳ್ಳುವವರ ಬಗ್ಗೆ ಕೇಳಬೇಡಿ) . ಅದೇನೇ ಇರಲಿ, ನಾನು ನೋಡಿದ ಕೆಲ ಅಪರೂಪದ ವಿದ್ಯಾಂಕ್ಷಿಗಳ ಬಗ್ಗೆ ಬರಿಯಬೇಕೆಂದು ಕೊಂಡೆ. ತಮ್ಮದೇ ಲೋಕದಲ್ಲಿ ಇದ್ದುಕೊಂಡೇ, ಏನೇನೋ ಓದಲು ಹವಣಿಸುವ, ಯಾತಿಕ್ಕಾಗಿ ಓದುತ್ತಿದ್ದೇವೆ ಎಂಬುದಕ್ಕೆ ತಮ್ಮದೇ ಸ್ಪಷ್ಟೀಕರಣ ನೀಡುತ್ತಾರೆ.<br /><br />ಕಳೆದ ವಾರ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸ್ನಾತಕೋತ್ತರ ಪರೀಕ್ಷೆ ನಡೆದಿತ್ತು. ಟಿವಿ ವಾಹಿನಿಯೊಂದರಲ್ಲಿ ಬಂದ ಸುದ್ದಿಯ ಆಧಾರದ ಮೇಲೆ ಶಾಸಕ ಸಿಟಿ ರವಿ ಎಂ ಎ ( political science) ಪರೀಕ್ಷೆ ಬರಿಯುತ್ತಿದ್ದಾರೆ ಎಂದು ಕೇಳಿದೆ. ಸರಿ ಫೋನ್ ಹಾಯಿಸಿದೆ, ತುಂಬಾ ಪ್ರಯತ್ನದ ನಂತರ ಕೊನೆಗೂ ಈ ಮಹಾಶಯ ಸಿಕ್ಕರು. ಬಿಜೆಪಿ ಶಾಸಕರಾದ ರವಿ ಅವರಲ್ಲಿ, ಏಕೆ ಈ ವಯಸ್ಸಿನಲ್ಲಿ, ಯಾತಿಕ್ಕಾಗಿ ಇದೆ ವಿಷಯ ಅಂತ ಅದು-ಇದು ಕೇಳ್ತಾ ಇದ್ದೆ. ಇದ್ದಕ್ಕಿದ್ದಂತೆ, ದಿನೇಶ್ ಕೂಡ ಪರೀಕ್ಷೆ ಬರ್ದಿದ್ದಾನೆ ಎಂದರು. ಯಾರು ಸರ್ ಅಂದೇ, ಅದಕ್ಕೆ ಅವರು ಗಾಂಧಿನಗರದ ಶಾಸಕ ದಿನೇಶ್ ಗುಂಡುರಾವ್ ಎಂದರು. ಇವರು ಕಾಂಗ್ರೆಸ್ ಶಾಸಕ. ಇಷ್ಟೇ ಅಲ್ಲದೇ, ``ದಿನೇಶ್ ಪರೀಕ್ಷೆ ಪ್ರಾರನ್ಭಾವಾದ್ಮೇಲೆ, ಒಂದೇ ಗಂಟೆಯೊಳಗೆ ಎದ್ದು ಹೋದ, ಅದೇನು ಬರೆದು ಪಾಸು ಮಾಡ್ತಾನೋ ಏನೋ,'' ಅಂತ ಗೊಣಗಿಕೊಂಡರು. ನಂಗೆ ಇಲ್ಲಿ ಅರ್ಥವಾಗದ್ದು, ರವಿ ಅವ್ರು ತಮ್ಮ ಪರೀಕ್ಷೆ ಬರಿಯೋದು ಬಿಟ್ಟು, ಜೂನಿಯರ್ ಗುಂಡುರಾವ್ ಎಷ್ಟು ಸಮಯದಲ್ಲಿ ಎದ್ದು ಹೋದರು ಅಂತ ಯಾಕೆ ಲೆಕ್ಕಾಚಾರ ಹಾಕ್ತಿದ್ರ? ಅಥವಾ, ತಮ್ಮ ವಿರೋಧ ಪಕ್ಷದವರ ಬಗ್ಗೆ ಟೀಕಿಸಲು ಯಾವುದೇ ಅವಕಾಶ ಬಿಡೋದಿಲ್ವ ಅಂತ? ಗೊತ್ತಾಗ್ಲಿಲ್ಲ!!<br /><br />ಕೆಲ ವರ್ಷಗಳ ಹಿಂದೆ, ಪರಪ್ಪನ ಅಗ್ರಹಾರಕ್ಕೆ ಹೋಗಿದ್ದೆ. ಬೆಂಗಳೂರು ವಿಶ್ವವಿದ್ಯಾಲಯ (ಮುಕ್ತ)ದಲ್ಲಿ ತುಂಬಾ ಜನ ಖೈದಿಗಳು ಪದವಿ, ಸ್ನಾತಕೋತ್ತರ ಪದವಿ ಬರಿಯುವವರಿದ್ದರು. ಹೀಗೆ ಖೈದಿಗಳೊಂದಿಗೆ ಮಾತನಾಡುತ್ತ, ಒಬ್ಬ ಜಿವವಾಧಿ ಖೈದಿ ತಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆ ತೆಗೆದುಕೊಂಡಿದ್ದೆ ಎಂದ. ನಂಗೆ ಕುತೂಹಲ ತಡೆಯಲಾರದೆ, ವಿಚಾರಿಸುತ್ತಿದ್ದೆ, ಆತನ ಹೆಸರು ವೆಂಕಟೇಶ, ಅವನ ಪ್ರಕಾರ, ಜೈಲಿನಲ್ಲಿ ನಡೆಯುವ ಅನ್ಯಾಯದ ಬಗ್ಗೆ ಜೈಲಿನಿಂದ ಹೊರಬಂದು ಪುಸ್ತಕ ಬರೀಬೇಕು, ಅದಕ್ಕೆ ಪತ್ರಿಕೋದ್ಯಮ ಪದವಿ ಸಹಾಯವಗೊತ್ತೆ ಅಂದ. ಸರಿ ಅಲ್ಲಿಂದ ಮಾತನಾಡಿ, ಹೊರದುತಿದ್ದಂತೆ, ಮೇಡಂ ಅಂದ. ಏನಪ್ಪಾ ಅಂದೇ, ನೀವು ಪತ್ರಿಕೋದ್ಯಮ ಪದವಿ ಮಾಡಿದ್ದ ಅಂದ, ಹೌದು ಅಂದೇ. ಯಾವ ವಿಶ್ವವಿದ್ಯಾಲಯಾ ಅಂದ, ಮೈಸೂರು ಅಂದೇ. ತುಂಬಾ ಒಳ್ಳೆ ವಿವಿ ಅಲ್ವ ಅಂದ, ನಂಗೆ ಖುಷಿ ಆಯಿತು. ಕೊನೆಗೆ ``ಮೇಡಂ, ನಿಮ್ಮ Notes ಕೊಡ್ತೀರ?,'' ಅಂದ. ನಾನು ಆಗ ಎಂಎ ಮುಗಿಸಿ ಆಗಲೇ ಮೂರೂ ವರ್ಷ ಆಗಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆ, ಪುಸ್ತಕಗಳನ್ನು ಎಲ್ಲೋ ಹಾಕುವ ನಾನು, ಮೂರೂ ವರ್ಷದ ನಂತರ ಇವನಿಗೆ notes ಎಲ್ಲಿಂದ ತಂದುಕೊಡಲಿ ಅಂದುಕೊಂಡೆ, ಅವನಿಗೆ ಹೇಳಿದರು ಅದು ಅರ್ಥ ಆಗಲ್ಲ ಅನ್ಕೊಂಡು, ಸರಿ ಪ್ರಯತ್ನ ಮಾಡ್ತೇನೆ ಅಂತ ಹೇಳಿ ಜಾರಿಕೊಂಡೆ. </div><br /><div></div><br /><div>ಇತ್ತೀಚಿಗೆ, ಬೆಂಗಳೂರು ವಿವಿಯಲ್ಲಿ ಅಂಧ ಅಭ್ಯರ್ಥಿಯೊಬ್ಬ ಇತಿಹಾಸದಲ್ಲಿ PhD ಮಾಡಿದ್ದ. ಅವನ ಬಗ್ಗೆ ಪ್ರೆಸ್ ರಿಲೀಸ್ ಬಂತು, ಜೊತೆಗೆ ಫೋನ್ ನಂಬರ್ ಇತ್ತು. ಸರಿ, ಅವನಿಗೆ ಫೋನ್ ಮಾಡಿದೆ. ತನ್ನ ಕುಲ ಗೋತ್ರ, ಉರು-ಕೇರಿ ಬಗ್ಗೆ, ತನ್ನ ಓದಿನ ಬಗ್ಗೆ ಹೇಳಿಕೊಂಡ. ``ನಾನು ಅಂಧ ಎಂಬ ಕಿಲಿರುಮೆ ಇದೆ, ಅದನ್ನು ಹೋಗಲಾಡಿಸಲು ಓದಿದೆ'' ಅಂದ. ಭಲೇ ಅನ್ನಿಸಿತು. ಇನ್ನೇನು ಫೋನ್ ಇಡಬೇಕೆಂದು ಕೊಂಡೆ, ಮೇಡಂ ಯಾವುದಾದರು ಹುಡುಗಿ ಇದ್ರೆ ಹೇಳ್ತಿರ, ಮಾಡುವೆ ಆಗಬೇಕೆನ್ದುಕೊಂಡಿದ್ದೇನೆ ಅಂದ. ಅಯ್ಯೋ ಸ್ವಾಮಿ ನಾನು ದಲ್ಲಾಳಿ ಅಲ್ಲ ಅಂದೇ, ಅದಕ್ಕೆ, ಅವನು, ಮೇಡಂ ನನ್ನ ಬಗ್ಗೆ ಬರಿತಿರಲ್ಲ, ಆಗ ಇದರ ಬಗ್ಗೆ ಬರೆದು, ನನ್ನ ಮೊಬೈಲ್ ನಂಬರ್ ಕೊಡಿ, ಯಾರಾದ್ರೂ interest ಇದ್ರೆ ಪ್ರಯತ್ನಿಸಲಿ ಅನ್ನುವುದೇ? </div><br /><div></div><br /><div>ಹೀಗೆ ಜನರು ವಿದ್ಯಾಭ್ಯಾಸದ ನೆಪದಲ್ಲಿ ತಮ್ಮದೇ ನಿಲುವು ಇಟ್ಟುಕೊಂಡಿದ್ದಾರೆ. </div>Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-22429552490824842952010-07-04T01:24:00.000-07:002010-07-04T01:29:12.127-07:00ಕ್ಷಮಿಸಿ!ಆತ್ಮಿಯರೇ,<br />ತುಂಬಾ ದಿನ, ತಿಂಗಳಾಯ್ತು, ಬರ್ದಿಲ್ಲ. ಕ್ಷಮಿಸಿ. ಇನ್ನು ಮುಂದೆ ಮತ್ತೆ ಬರಿಯಬೇಕೆಂದುಕೊಂಡಿದ್ದೇನೆ.Ashwini M Sripadhttp://www.blogger.com/profile/01699731701824302054noreply@blogger.com0tag:blogger.com,1999:blog-6673691930118722471.post-29737539908951545232010-03-14T21:53:00.000-07:002010-03-14T22:42:06.340-07:00ವಾಸಂತಿ ಹೇಳಿದ ಕತೆ<a href="https://blogger.googleusercontent.com/img/b/R29vZ2xl/AVvXsEjJt9SM2PemcR59VjOFI55OMFAkLB-eUpMB8jvrDO_BVWSm-sRFyEMeX14HKeaaJmdLXlOFbRnl70_Ba7AMT3psCxtZXaaLmmKRNubiuXRcbbhlTcMf9ZhgwfY7t8I0-yKfeX6IhUG-23E/s1600-h/untitled.bmp"><img style="TEXT-ALIGN: center; MARGIN: 0px auto 10px; WIDTH: 320px; DISPLAY: block; HEIGHT: 278px; CURSOR: hand" id="BLOGGER_PHOTO_ID_5448730336235171378" border="0" alt="" src="https://blogger.googleusercontent.com/img/b/R29vZ2xl/AVvXsEjJt9SM2PemcR59VjOFI55OMFAkLB-eUpMB8jvrDO_BVWSm-sRFyEMeX14HKeaaJmdLXlOFbRnl70_Ba7AMT3psCxtZXaaLmmKRNubiuXRcbbhlTcMf9ZhgwfY7t8I0-yKfeX6IhUG-23E/s320/untitled.bmp" /></a> <div></div><div>ಈಗ್ಗೆ ಕೆಲವು ವರ್ಷಗಳ ಹಿಂದೆ, ಬೆಳಿಗ್ಗೆ ಆಫೀಸಿಗೆ ಹೋಗುವ ಮಂದಿಗೆ `Good Morning Bangalore' ಅಂತ ಹೇಳಿ, ಅವರಿಗೆ ಅದು addict ಮಾಡುವಂತೆ ಮಾಡಿದ ವಾಸಂತಿ ಹರಿಪ್ರಕಾಶ್ ಯಾರಿಗೆ ತಾನೆ ಗೊತ್ತಿಲ್ಲ? Indian Express, online journalism, radio and TV, ಹೀಗೆ ಆಡು ಮುಟ್ಟಿದ ಸೊಪ್ಪಿಲ್ಲ, ವಾಸಂತಿ ಇರದ ಮಾಧ್ಯಮ ಇಲ್ಲ. ಆದರೆ, ರೇಡಿಯೋ ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತ್ತು. </div><div></div><br /><div>ಇದೇನೇ ಇರಲಿ, ಮೊನ್ನೆ Press club ಇಲ್ಲಿ, ಮಾದ್ಯಮದಲ್ಲಿ ಮಹಿಳೆ ( Panel discussion on `Changing role of women in media) ಎಂಬ ಚರ್ಚೆಯಲ್ಲಿ ಭಾಗವಹಿಸಿದವರಲ್ಲಿ ಅವರು ಕೂಡ ಒಬ್ಬರು. ತಮಗೆ ಇಷ್ಟವಾದ ರೇಡಿಯೋ ವಿಷಯದ ಬಗ್ಗೆ ತಾವು ಕಂಡ ಅಪರೂಪದ ರೇಡಿಯೋ ಬಗ್ಗೆ ಹೇಳಿದ ಕತೆ ಇದು:</div><br /><div></div><div>ಅಂದ್ರ ಮೂಲದ `ಸಂಗಮ' ರೇಡಿಯೋ ಚಾನೆಲ್ ಸುಮಾರು ಅರವತ್ತು ಹಳ್ಳಿಗಳಿಗೆ ಮಾತ್ರ ಸ್ಥಿಮಿತ. ಇದನ್ನು ನಡೆಸಿಕೊಂಡು ಹೋಗುವವರು ಇಬ್ಬರು ದಲಿತ ಮಹಿಳೆಯರು. ದಿನ ಸಂಜೆ 5 to 8 ಮಾತ್ರ ಪ್ರಸಾರವಾಗುತ್ತದೆ. Technology wise ಅಷ್ಟೊಂದು ಏನು ಉತ್ತಮವಿಲ್ಲ, ಆದರೆ ಅವರು ಮಾತನಾಡುವ, ಚರ್ಚಿಸುವ ವಿಷಯಗಳು ತುಂಬಾ ಪ್ರಸ್ತುತವಂತೆ. ಹಳ್ಳಿಯ ಹೆಂಗಸರಿಗೆ ಉಪಯೋಗವಾಗುವ ವಿಷಯ, ಪೈರು-ನಾಟಿ, ಇಂತದೆ ವಿಷಯಗಳನ್ನು ಪ್ರಸಾರ ಮಾಡುತ್ತಾರಂತೆ. ಹಾಡು ಕೂಡ ಪ್ರಸರ ಮಾಡುತ್ತಾರೆ, ಆದರೆ, ಅವೆಲ್ಲವೂ ಅದೇ ಹಳ್ಳಿಗಳಲ್ಲಿ ವಾಸ ಮಾಡುವ ಹೆಂಗಸರಿಂದ ಹಾಡಿದ ಜನಪದ ಗೀತೆಗಳು ಮಾತ್ರ. ಆ ಹಾಡುಗಳೆಲ್ಲ, ಸಂಧರ್ಭ ಅನುಗುಣವಾಗುವಂತೆ ಇದೆ, ಅಂದರೆ, ಮಾಡುವೆ, ಮುಂಜಿ.... ಹೀಗೆ..ಆದರೆ, ಸಿನೆಮ ಹಾಡುಗಳಲ್ಲ </div><div></div><br /><div>ಕುತೂಹಲಕ್ಕಾಗಿ, ವಾಸಂತಿ, `ಸಂಗಮ' ನಡೆಸುವ ಹೆಂಗಸರಿಗೆ ಕೇಳಿದರಂತೆ ``ನಿಮ್ಮ ಕೇಳುಗರು, ಫೋನ್ ಮಾಡಿ, ಚಿರಂಜೀವಿ ಸಿನೆಮ ಹಾಡು ಕೆಳುವುದಿಲ್ಲವೇ? '', ಅದಕ್ಕೆ ಆ ಮಹಿಳೆ ಹೇಳಿದರಂತೆ, ``ಇಲ್ಲಿ ಯಾರು ಕೇಳುವುದಿಲ್ಲ, ಜನಪದ ಹಾಡಿಗೆ ಜಾಸ್ತಿ ಕೇಳ್ತಾರೆ. ನಿಮಗೆ ಚಿರಂಜೀವಿ ಹಾಡು ಕೇಳಬೇಕಾದರೆ Tape ನಲ್ಲಿ (ಇದು ಹಳ್ಳಿಯಾದರಿಂದ MP3 ಹಾವಳಿಯಿಲ್ಲ ) ಕೇಳಿ. ನಮ್ಮಲ್ಲಿ ಸಿಗುವ ಹಾಡುಗಳು ಕ್ಯಾಸೆಟ್ ನಲ್ಲಿ ಲಬ್ಯಾವಿಲ್ಲ,'' ಅಂತಿವಿ. </div><div></div><br /><div>ನಮ್ಮ ಬೆಂಗಳೂರಿನಲ್ಲಿ ಹಿಂಗೆ ಮಾಡಲಿ, ಚಾನೆಲ್ ಬದಲಾಯಿಸುತ್ತಾರೆ ಹೊರತು, ಇಂತದು ಕೇಳಲ್ಲ. ಅವರ ಮನಸ್ಥಿತಿಗೆ ನಮ್ಮ ರೇಡಿಯೋ ಚಾನೆಲ್ ಅವ್ರು ಹಾಡು (ಅದು ಎಷ್ಟೇ ಕರ್ಕಶವಾಗಿರಲಿ) ಪ್ರಸಾರ ಮಾಡ್ತಾರೆ. ವಾಸಂತಿ ಹೇಳ್ತಾರೆ, ಎಫ್ ಎಂ ಚಾನಲ್ ಗಳಲ್ಲಿ ಜಾಹಿರಾತುಗಳ ಹಾವಳಿ. ``ನಾನು ಒಮ್ಮೆ ಪಂಡಿತ್ ಭೀಮಸೇನ್ ಜೋಷಿ ಅವರನ್ನು ಇಂಟರ್ ವ್ಯೂ ಮಾಡ್ತಾ ಇದ್ದೆ, ಕೇವಲ ನಲವತ್ತು seconds ಮಾತನಾಡಬೇಕು, ಮದ್ಯೆ ಮದ್ಯೆ commercial break. ಅವರನ್ನು interview ಮಾಡಬೇಕಾದರೆ, ಮದ್ಯೆ ಮದ್ಯೆ, this hour is brought you by Kingfisher....ಅಂತ ಹೇಳಿದರೆ, ನನ್ನ ಮನಸ್ಥಿತಿ ಏನಾಗಬೇಡ. ,'' ಅಂತ ಹೇಳಿದರು. </div><div></div><br /><div>ಅಲ್ಲೇ ಇದ್ದ ದೂರದರ್ಶನದ ಹಿರಿಯ ಪತ್ರಕರ್ತರೊಬ್ಬರು ತಮ್ಮ ಕತೆ ಹೇಳಿದ್ದು ಹೀಗಿತ್ತು. ಸುಮಾರು 25 ವರ್ಷಗಳ ಹಿಂದಿನ ಮಾತು. ಆಗ ಚಿತ್ರಹಾರ ಬರ್ತಿತ್ತು. ಸಿನೆಮ ಹಾಡುಗಳು ಮಾತ್ರ ಬರ್ತಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ರಾಜಕಾರಣಿಯೊಬ್ಬ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಬಳಿ ಹೋಗಿ ``ಎಂತಹ ಅಪಚಾರ, ನಮ್ಮ ದೇಶದ ಸಂಸ್ಕೃತಿ ಇದಲ್ಲ,'' ಹಾಗೆ ಹೀಗೆ ಅಂತೆಲ್ಲ ಹೇಳಿ, ಕೊನೆಗೆ ಇಂದಿರಾಗಾಂಧಿ ಸಮಿತಿಯೊಂದು ರಚನೆ ಮಾಡಿದರಂತೆ. ಕೇವಲ ಚಿತ್ರಹಾರಕ್ಕೆ, ಕಡಿವಾಣ ಕಾಕಲು, ಸರ್ಕಾರ, ಸಮಿತಿಯೊಂದನ್ನು ರಚಿಸಿತ್ತು, ಆದರೆ, ಇವತ್ತು? ನಮ್ಮ ಖಾಸಗಿ T V channel ಗಳ ಕತೆ ಗೊತ್ತೇ ಇದೆ, Who will bell the cat?</div><div></div><div></div><div></div><div></div>Ashwini M Sripadhttp://www.blogger.com/profile/01699731701824302054noreply@blogger.com7